<p><strong>ಚಾಮರಾಜನಗರ:</strong> ಜಿಲ್ಲಾ ತಮಿಳು ಸಂಘದ ವತಿಯಿಂದ ಮಂಗಳವಾರ ನಗರದಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.</p>.<p>ಸೋಮವಾರಪೇಟೆಯ ಬಳಿ ಇರುವ ತಮಿಳು ಸಂಘದ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪಿ.ಎನ್.ಚಿನ್ನಸ್ವಾಮಿ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.</p>.<p>ನಂತರ ಮಾತನಾಡಿದ ಅವರು, ‘ತಮಿಳರು ಕನ್ನಡದ ಶಾಂತಿ ತೋಟದಲ್ಲಿ ಕನ್ನಡಿಗರೊಂದಿಗೆ ಅಣ್ಣ–ತಮ್ಮಂದಿರಂತೆ ಬದುಕುತ್ತಿದ್ದೇವೆ’ ಎಂದರು.</p>.<p>ಸಂಘದ ಕಾರ್ಯದರ್ಶಿ ಜಗದೀಶ್ ಮಾತನಾಡಿ, ‘ಕನ್ನಡದ ಜಲ, ನೆಲ, ಭಾಷೆಗೆ ಧಕ್ಕೆ ಉಂಟಾದಾಗ ನಾವೂ ಬೀದಿಗೆ ಇಳಿದು ಕನ್ನಡದ ಪರ ಹೋರಾಟ ಮಾಡಿದ್ದೇವೆ’ ಎಂದು ಹೇಳಿದರು.</p>.<p>‘ನಾವೆಲ್ಲ ಬಹಳ ವರ್ಷಗಳಿಂದ ಕನ್ನಡದ ನೆಲದಲ್ಲೇ ಬದುಕುತ್ತಿದ್ದು ಕನ್ನಡಿಗರಾಗಿದ್ದೇವೆ.ಕನ್ನಡದ ಬಗ್ಗೆ ನಮಗೂ ಅಭಿಮಾನ ಇದೆ’ ಎಂದು ಅವರು ತಿಳಿಸಿದರು.</p>.<p>ಪಟ್ಟಿಯಪ್ಪನ್, ತಂಗವೇಲು, ತಂಗಮಣಿ, ಎಸ್.ವಿ.ಟಿ.ಮಾರಪ್ಪ ಗೌಂಡರ್, ಯೂನಿವರ್ಸ್ ಶಾಲೆಯ ಸುಬ್ರಮಣ್ಯಂ, ಶೇಖರ್, ಸುಬ್ರಮಣಿ, ಮಣಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ಜಿಲ್ಲಾ ತಮಿಳು ಸಂಘದ ವತಿಯಿಂದ ಮಂಗಳವಾರ ನಗರದಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.</p>.<p>ಸೋಮವಾರಪೇಟೆಯ ಬಳಿ ಇರುವ ತಮಿಳು ಸಂಘದ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪಿ.ಎನ್.ಚಿನ್ನಸ್ವಾಮಿ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.</p>.<p>ನಂತರ ಮಾತನಾಡಿದ ಅವರು, ‘ತಮಿಳರು ಕನ್ನಡದ ಶಾಂತಿ ತೋಟದಲ್ಲಿ ಕನ್ನಡಿಗರೊಂದಿಗೆ ಅಣ್ಣ–ತಮ್ಮಂದಿರಂತೆ ಬದುಕುತ್ತಿದ್ದೇವೆ’ ಎಂದರು.</p>.<p>ಸಂಘದ ಕಾರ್ಯದರ್ಶಿ ಜಗದೀಶ್ ಮಾತನಾಡಿ, ‘ಕನ್ನಡದ ಜಲ, ನೆಲ, ಭಾಷೆಗೆ ಧಕ್ಕೆ ಉಂಟಾದಾಗ ನಾವೂ ಬೀದಿಗೆ ಇಳಿದು ಕನ್ನಡದ ಪರ ಹೋರಾಟ ಮಾಡಿದ್ದೇವೆ’ ಎಂದು ಹೇಳಿದರು.</p>.<p>‘ನಾವೆಲ್ಲ ಬಹಳ ವರ್ಷಗಳಿಂದ ಕನ್ನಡದ ನೆಲದಲ್ಲೇ ಬದುಕುತ್ತಿದ್ದು ಕನ್ನಡಿಗರಾಗಿದ್ದೇವೆ.ಕನ್ನಡದ ಬಗ್ಗೆ ನಮಗೂ ಅಭಿಮಾನ ಇದೆ’ ಎಂದು ಅವರು ತಿಳಿಸಿದರು.</p>.<p>ಪಟ್ಟಿಯಪ್ಪನ್, ತಂಗವೇಲು, ತಂಗಮಣಿ, ಎಸ್.ವಿ.ಟಿ.ಮಾರಪ್ಪ ಗೌಂಡರ್, ಯೂನಿವರ್ಸ್ ಶಾಲೆಯ ಸುಬ್ರಮಣ್ಯಂ, ಶೇಖರ್, ಸುಬ್ರಮಣಿ, ಮಣಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>