ಈ ಬಾರಿ ಪರೀಕ್ಷೆ ಕಟ್ಟುನಿಟ್ಟಾಗಿ ನಡೆದರೂ ನಮ್ಮ ವಸತಿ ಶಾಲೆಗಳ ಮಕ್ಕಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ಪ್ರಾಂಶುಪಾಲರು ಬೋಧಕರು ಸಿಬ್ಬಂದಿಯ ಶ್ರಮ ಇದರ ಹಿಂದಿದೆ.
ಮಲ್ಲಿಕಾರ್ಜುನ ಬಿ. ಸಮಾಜ ಕಲ್ಯಾಣ ಉಪನಿರ್ದೇಶಕ
ಆದರ್ಶ ಶಾಲೆಗಳ ಫಲಿತಾಂಶ ಉತ್ತಮವಾಗಿದೆ. ಮಕ್ಕಳು ಹೆಚ್ಚು ಅಂಕ ಗಳಿಸಿದ್ದಾರೆ. ನುರಿತ ಶಿಕ್ಷಕರ ಪ್ರಯತ್ನ ಮಕ್ಕಳ ಛಲ ಪೋಷಕರ ಸಹಕಾರ ಇದಕ್ಕೆ ಕಾರಣ.
ರಾಮಚಂದ್ರರಾಜೇ ಅರಸ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ
ಆದರ್ಶ ಶಾಲೆಗಳ ಸಾಧನೆ
ಜಿಲ್ಲೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿರುವ ಎಂಟು ಶಾಲೆಗಳಲ್ಲಿ ಎರಡು ಆದರ್ಶ ವಿದ್ಯಾಲಯಗಳೂ ಸೇರಿವೆ. ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ತಲಾ ಒಂದೊಂದು ಆದರ್ಶ ವಿದ್ಯಾಲಯಗಳಿವೆ. ಚಾಮರಾಜನಗರದ ಮಲ್ಲಯ್ಯನಪುರದಲ್ಲಿರುವ ಆದರ್ಶ ಶಾಲೆ ಮತ್ತು ಕೊಳ್ಳೇಗಾಲದ ಆದರ್ಶ ಶಾಲೆಗಳು ಶೇ 100 ಫಲಿತಾಂಶ ದಾಖಲಿಸಿವೆ. ಅಲ್ಲದೇ ಜಿಲ್ಲೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ 10 ವಿದ್ಯಾರ್ಥಿಗಳ ಪೈಕಿ ಎಂಟು ಮಂದಿ ಆದರ್ಶ ವಿದ್ಯಾಲಯಗಳ ಮಕ್ಕಳು. ಆದರ್ಶ ಶಾಲೆ ಹಾಗೂ ಮಕ್ಕಳ ಸಾಧನೆ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಪ್ರತಿಕ್ರಿಯಿಸುವುದು ಹೀಗೆ... ‘ಆದರ್ಶ ಶಾಲೆಗಳ ಪ್ರವೇಶಾತಿಗಾಗಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಹಾಗಾಗಿ ಪ್ರತಿಭಾವಂತ ಮಕ್ಕಳೇ ಅಲ್ಲಿಗೆ ಪ್ರವೇಶ ಪಡೆಯುತ್ತಾರೆ. ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲಿ ನಡೆಯುತ್ತವೆ. ಅನುಭವಿ ಶಿಕ್ಷಕರು ಅಲ್ಲಿರುತ್ತಾರೆ. ಮಕ್ಕಳ ಪೋಷಕರು ಕೂಡ ಶಿಕ್ಷಣ ಹಿನ್ನಲೆಯವರು. ಈ ಎಲ್ಲ ಅಂಶಗಳಿಂದ ಅಲ್ಲಿನ ಮಕ್ಕಳು ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತಿದೆ’.