ಮಹದೇವೇಗೌಡ ಅವರು ಕುರಿಗಾಹಿಯಾಗಿದ್ದರು. ಮಂಗಳವಾರವೂ ಕುರಿಗಳನ್ನು ಮೇಯಿಸಲು ಹೋಗಿದ್ದರು. ಸಂಜೆ ಕುರಿಗಳೆಲ್ಲ ಮನೆಗೆ ಬಂದಿದ್ದರೂ, ಮಹದೇವೇಗೌಡ ಅವರು ಬಂದಿರಲಿಲ್ಲ. ಮನೆಯವರು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಿದರೂ ಪತ್ತೆಯಾಗಲಿಲ್ಲ. ಬೆಳಗಿನ ಜಾವ ಮತ್ತೆ ಹುಡುಕಾಟ ನಡೆಸಿದಾಗ, ಹಂಡ್ರಕಳ್ಳಿ ಗ್ರಾಮದ ಜಮೀನೊಂದರಲ್ಲಿ ಶವ ಪತ್ತೆಯಾಯಿತು ಎಂದು ಮೂಲಗಳು ತಿಳಿಸಿವೆ.