ಯೋಜನೆ ಅನುಷ್ಠಾನಕ್ಕೆ ಅಗತ್ಯವಾಗಿದ್ದ ಎರಡು ಎಕರೆ ಜಮೀನನ್ನು ಖಾಸಗಿಯವರಿಂದ ಖರೀದಿಸಲು ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕೊನೆಗೂ ಯಶಸ್ವಿಯಾಗಿದ್ದು, ಪ್ರಾಧಿಕಾರದ ಅಧಿಕಾರಿಗಳು ಗುರುವಾರ ಜಮೀನಿನ ಮಾಲೀಕರಾದ ಪಳನಿಸ್ವಾಮಿ, ಧನುಕೋಟಿ ಹಾಗೂ ಮಕ್ಕಳಿಗೆ ₹ 11 ಲಕ್ಷ (ಎಕರೆಗೆ ₹5.5 ಲಕ್ಷದಂತೆ) ಪಾವತಿಸಿದ್ದಾರೆ. ಈ ಮೂಲಕ ಯೋಜನೆಗಿದ್ದ ಬಹುದೊಡ್ಡ ಅಡೆತಡೆ ನಿವಾರಣೆಯಾದಂತಾಗಿದೆ.