<p><strong>ಚಾಮರಾಜನಗರ</strong>: ಜಿಲ್ಲೆಯಲ್ಲಿ ಬಿಸಿಲಿನ ಝಳ ದಿನೇದಿನೇ ಹೆಚ್ಚುತ್ತಿದ್ದು, ತಾಪಮಾನ ಏರಿಕೆಯಿಂದ ಉಂಟಾಗುವ ಆಯಾಸವನ್ನು ದೂರ ಮಾಡಲು ಎಳನೀರಿಗೆ ಮೊರೆ ಹೋಗುತ್ತಿದ್ದಾರೆ.</p>.<p>ಎರಡು ಮೂರು ವಾರಗಳಿಂದ ವಾತಾವರಣದ ಗರಿಷ್ಠ ಉಷ್ಣಾಂಶ 37–38 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಕನಿಷ್ಠ ಉಷ್ಣಾಂಶ 18–20 ಡಿಗ್ರಿ ಸೆಲ್ಸಿಯಸ್ಗಳಿಷ್ಟಿದೆ. ಹೀಗಾಗಿಜಿಲ್ಲೆಯಾದ್ಯಂತ ಎಳನೀರಿಗೆ ಹೆಚ್ಚು ಬೇಡಿಕೆ ಬಂದಿದೆ. ಬೆಳಿಗ್ಗೆ 10 ಗಂಟೆ ದಾಟುತ್ತಲೇ, ಎಳನೀರು ಮಾರಾಟಗಾರರ ಬಳಿ ಗ್ರಾಹಕರು ಕಾಣಿಸಿಕೊಳ್ಳುತ್ತಿದ್ದಾರೆ.</p>.<p>ಒಂದು ಎಳನೀರಿಗೆ ₹ 25ರಿಂದ ₹ 35ರವರೆಗೆ ಬೆಲೆ ಇದೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬಹುತೇಕ ಎಲ್ಲ ವ್ಯಾಪಾರಿಗಳು ₹ 30ರಿಂದ ₹ 35ಕ್ಕೆ ಮಾರಾಟ ಮಾಡುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ₹ 25 ಇದೆ. ಗಾತ್ರದಲ್ಲಿ ಚಿಕ್ಕದಾದ ಎಳನೀರನ್ನು ₹ 20ಕ್ಕೆ ಮಾರಾಟ ಮಾಡುವ ವ್ಯಾಪಾರಿಗಳೂ ಇದ್ದಾರೆ.</p>.<p>ಎರಡು ಮೂರು ವಾರಗಳಿಂದ ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಕೆಲವು ವ್ಯಾಪಾರಿಗಳು ದಿನಕ್ಕೆ 350ರಿಂದ 500ರವೆಗೂ ಮಾರಾಟ ಮಾಡುತ್ತಿದ್ದಾರೆ.</p>.<p>ಸಣ್ಣ ವ್ಯಾಪಾರಿಗಳು ರೈತರ ತೋಟದಿಂದ ನೇರವಾಗಿ ಎಳನೀರು ಖರೀದಿಸಿ ಸೈಕಲ್, ದ್ವಿಚಕ್ರ ವಾಹನಗಳಲ್ಲಿ ತುಂಬಿ ತಂದು ನಗರ, ಪಟ್ಟಣ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.</p>.<p class="Subhead"><strong>ಸ್ಥಳೀಯ ತೋಟಗಳಿಂದ ಪೂರೈಕೆ: </strong>ಜಿಲ್ಲೆಯ ವ್ಯಾಪಾರಿಗಳು ಸ್ಥಳೀಯವಾಗಿಯೇ ರೈತರಿಂದ ಎಳನೀರು ಖರೀದಿ ಮಾಡುತ್ತಾರೆ. ಒಂದು ಎಳನೀರಿಗೆ ₹ 18ರಿಂದ ₹ 20ರವರೆಗೆ ರೈತರಿಗೆ ನೀಡುತ್ತಿದ್ದಾರೆ.</p>.<p>ಜಿಲ್ಲೆಯ ಎಳನೀರಿಗೆ ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲೂ ಬೇಡಿಕೆ ಇದ್ದು, ಇಲ್ಲಿ ಎಳನೀರು ಖರೀದಿಸಿ ಹೊರಗಡೆ ಪೂರೈಕೆ ಮಾಡುವವರು ಇದ್ದಾರೆ.</p>.<p>'ತಮ್ಮಡಹಳ್ಳಿ, ಬೇಡರಪುರ ಸೇರಿದಂತೆ ಸುತ್ತಮುತ್ತಲಿನ ರೈತರಿಂದ ಎಳನೀರು ಖರೀದಿಸುತ್ತೇನೆ. ಎರಡು ವಾರಗಳಿಂದ ಹೆಚ್ಚು ಗ್ರಾಹಕರು ಬರುತ್ತಿದ್ದಾರೆ. ಬಿಸಿಲಿನ ವಾತಾವರಣ ಇರುವವರೆಗೆ ಬೇಡಿಕೆ ಇರಲಿದೆ' ಎಂದು ನಗರದ ಎಳನೀರು ವ್ಯಾಪಾರಿ ಮಹದೇವ ಅವರು 'ಪ್ರಜಾವಾಣಿ'ಗೆ ತಿಳಿಸಿದರು.</p>.<p>'ಬಿಸಿಲು ಈಗ ಹೆಚ್ಚಿದ್ದು, ಜನರು ಬಾಯಾರಿಕೆ ನೀಗಿಸಲು ಎಳನೀರು ಕುಡಿಯುತ್ತಿದ್ದಾರೆ. ಬೇಡಿಕೆ ಹೆಚ್ಚಿರುವುದರಿಂದ ಬೇಗ ಖಾಲಿಯಾಗುತ್ತಿದೆ. ಎರಡು ಮೂರು ದಿನಗಳೊಮ್ಮೆ ತರಿಸುತ್ತಿದ್ದೇನೆ. ಸ್ಥಳೀಯವಾಗಿಯೇ ಸಾಕಷ್ಟು ಪ್ರಮಾಣದಲ್ಲಿ ಎಳನೀರು ಲಭ್ಯವಾಗುತ್ತಿದೆ' ಎಂದು ವ್ಯಾಪಾರಿ ಮಹೇಶ್ ಅವರು ತಿಳಿಸಿದರು.</p>.<p class="Briefhead"><strong>ಮಾರುಕಟ್ಟೆ ಧಾರಣೆ ಯಥಾಸ್ಥಿತಿ</strong><br />ಈ ಮಧ್ಯೆ, ನಗರದ ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣುಗಳು, ಮಾಂಸದ ಧಾರಣೆ ಯಥಾಸ್ಥಿತಿ ಮುಂದುವರಿದಿದೆ. ಹೂವಿನ ಬೆಲೆಯಲ್ಲಿ ಮಾತ್ರ ಕೊಂಚ ಏರಿಳಿತ ಕಂಡು ಬಂದಿದೆ.</p>.<p>ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಮಲ್ಲಿಗೆ ಹಾಗೂ ಕಾಕಡ ಹೂವಿನ ಬೆಲೆ ಕೆಜಿಗೆ ₹ 40ನಷ್ಟು ಜಾಸ್ತಿಯಾಗಿದೆ. ಕಳೆದ ವಾರ ಕೆಜಿಗೆ ₹ 200 ಇತ್ತು. ಅದೀಗ ₹ 240ಕ್ಕೆ ಏರಿದೆ. ಕನಕಾಂಬರ ಕೆಜಿಗೆ ₹ 400, ಸೇವಂತಿಗೆ ₹ 80ರಿಂದ ₹ 100, ಬಟನ್ ಗುಲಾಬಿ ₹ 100ರಿಂದ ₹ 120 ರವರೆಗೆ ಬೆಲೆ ಇದೆ. ಬೇಡಿಕೆ ಕುಸಿದಿರುವ ಚೆಂಡು ಹೂವಿಗೆ ₹ 10 ಬೆಲೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಜಿಲ್ಲೆಯಲ್ಲಿ ಬಿಸಿಲಿನ ಝಳ ದಿನೇದಿನೇ ಹೆಚ್ಚುತ್ತಿದ್ದು, ತಾಪಮಾನ ಏರಿಕೆಯಿಂದ ಉಂಟಾಗುವ ಆಯಾಸವನ್ನು ದೂರ ಮಾಡಲು ಎಳನೀರಿಗೆ ಮೊರೆ ಹೋಗುತ್ತಿದ್ದಾರೆ.</p>.<p>ಎರಡು ಮೂರು ವಾರಗಳಿಂದ ವಾತಾವರಣದ ಗರಿಷ್ಠ ಉಷ್ಣಾಂಶ 37–38 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಕನಿಷ್ಠ ಉಷ್ಣಾಂಶ 18–20 ಡಿಗ್ರಿ ಸೆಲ್ಸಿಯಸ್ಗಳಿಷ್ಟಿದೆ. ಹೀಗಾಗಿಜಿಲ್ಲೆಯಾದ್ಯಂತ ಎಳನೀರಿಗೆ ಹೆಚ್ಚು ಬೇಡಿಕೆ ಬಂದಿದೆ. ಬೆಳಿಗ್ಗೆ 10 ಗಂಟೆ ದಾಟುತ್ತಲೇ, ಎಳನೀರು ಮಾರಾಟಗಾರರ ಬಳಿ ಗ್ರಾಹಕರು ಕಾಣಿಸಿಕೊಳ್ಳುತ್ತಿದ್ದಾರೆ.</p>.<p>ಒಂದು ಎಳನೀರಿಗೆ ₹ 25ರಿಂದ ₹ 35ರವರೆಗೆ ಬೆಲೆ ಇದೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬಹುತೇಕ ಎಲ್ಲ ವ್ಯಾಪಾರಿಗಳು ₹ 30ರಿಂದ ₹ 35ಕ್ಕೆ ಮಾರಾಟ ಮಾಡುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ₹ 25 ಇದೆ. ಗಾತ್ರದಲ್ಲಿ ಚಿಕ್ಕದಾದ ಎಳನೀರನ್ನು ₹ 20ಕ್ಕೆ ಮಾರಾಟ ಮಾಡುವ ವ್ಯಾಪಾರಿಗಳೂ ಇದ್ದಾರೆ.</p>.<p>ಎರಡು ಮೂರು ವಾರಗಳಿಂದ ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಕೆಲವು ವ್ಯಾಪಾರಿಗಳು ದಿನಕ್ಕೆ 350ರಿಂದ 500ರವೆಗೂ ಮಾರಾಟ ಮಾಡುತ್ತಿದ್ದಾರೆ.</p>.<p>ಸಣ್ಣ ವ್ಯಾಪಾರಿಗಳು ರೈತರ ತೋಟದಿಂದ ನೇರವಾಗಿ ಎಳನೀರು ಖರೀದಿಸಿ ಸೈಕಲ್, ದ್ವಿಚಕ್ರ ವಾಹನಗಳಲ್ಲಿ ತುಂಬಿ ತಂದು ನಗರ, ಪಟ್ಟಣ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.</p>.<p class="Subhead"><strong>ಸ್ಥಳೀಯ ತೋಟಗಳಿಂದ ಪೂರೈಕೆ: </strong>ಜಿಲ್ಲೆಯ ವ್ಯಾಪಾರಿಗಳು ಸ್ಥಳೀಯವಾಗಿಯೇ ರೈತರಿಂದ ಎಳನೀರು ಖರೀದಿ ಮಾಡುತ್ತಾರೆ. ಒಂದು ಎಳನೀರಿಗೆ ₹ 18ರಿಂದ ₹ 20ರವರೆಗೆ ರೈತರಿಗೆ ನೀಡುತ್ತಿದ್ದಾರೆ.</p>.<p>ಜಿಲ್ಲೆಯ ಎಳನೀರಿಗೆ ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲೂ ಬೇಡಿಕೆ ಇದ್ದು, ಇಲ್ಲಿ ಎಳನೀರು ಖರೀದಿಸಿ ಹೊರಗಡೆ ಪೂರೈಕೆ ಮಾಡುವವರು ಇದ್ದಾರೆ.</p>.<p>'ತಮ್ಮಡಹಳ್ಳಿ, ಬೇಡರಪುರ ಸೇರಿದಂತೆ ಸುತ್ತಮುತ್ತಲಿನ ರೈತರಿಂದ ಎಳನೀರು ಖರೀದಿಸುತ್ತೇನೆ. ಎರಡು ವಾರಗಳಿಂದ ಹೆಚ್ಚು ಗ್ರಾಹಕರು ಬರುತ್ತಿದ್ದಾರೆ. ಬಿಸಿಲಿನ ವಾತಾವರಣ ಇರುವವರೆಗೆ ಬೇಡಿಕೆ ಇರಲಿದೆ' ಎಂದು ನಗರದ ಎಳನೀರು ವ್ಯಾಪಾರಿ ಮಹದೇವ ಅವರು 'ಪ್ರಜಾವಾಣಿ'ಗೆ ತಿಳಿಸಿದರು.</p>.<p>'ಬಿಸಿಲು ಈಗ ಹೆಚ್ಚಿದ್ದು, ಜನರು ಬಾಯಾರಿಕೆ ನೀಗಿಸಲು ಎಳನೀರು ಕುಡಿಯುತ್ತಿದ್ದಾರೆ. ಬೇಡಿಕೆ ಹೆಚ್ಚಿರುವುದರಿಂದ ಬೇಗ ಖಾಲಿಯಾಗುತ್ತಿದೆ. ಎರಡು ಮೂರು ದಿನಗಳೊಮ್ಮೆ ತರಿಸುತ್ತಿದ್ದೇನೆ. ಸ್ಥಳೀಯವಾಗಿಯೇ ಸಾಕಷ್ಟು ಪ್ರಮಾಣದಲ್ಲಿ ಎಳನೀರು ಲಭ್ಯವಾಗುತ್ತಿದೆ' ಎಂದು ವ್ಯಾಪಾರಿ ಮಹೇಶ್ ಅವರು ತಿಳಿಸಿದರು.</p>.<p class="Briefhead"><strong>ಮಾರುಕಟ್ಟೆ ಧಾರಣೆ ಯಥಾಸ್ಥಿತಿ</strong><br />ಈ ಮಧ್ಯೆ, ನಗರದ ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣುಗಳು, ಮಾಂಸದ ಧಾರಣೆ ಯಥಾಸ್ಥಿತಿ ಮುಂದುವರಿದಿದೆ. ಹೂವಿನ ಬೆಲೆಯಲ್ಲಿ ಮಾತ್ರ ಕೊಂಚ ಏರಿಳಿತ ಕಂಡು ಬಂದಿದೆ.</p>.<p>ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಮಲ್ಲಿಗೆ ಹಾಗೂ ಕಾಕಡ ಹೂವಿನ ಬೆಲೆ ಕೆಜಿಗೆ ₹ 40ನಷ್ಟು ಜಾಸ್ತಿಯಾಗಿದೆ. ಕಳೆದ ವಾರ ಕೆಜಿಗೆ ₹ 200 ಇತ್ತು. ಅದೀಗ ₹ 240ಕ್ಕೆ ಏರಿದೆ. ಕನಕಾಂಬರ ಕೆಜಿಗೆ ₹ 400, ಸೇವಂತಿಗೆ ₹ 80ರಿಂದ ₹ 100, ಬಟನ್ ಗುಲಾಬಿ ₹ 100ರಿಂದ ₹ 120 ರವರೆಗೆ ಬೆಲೆ ಇದೆ. ಬೇಡಿಕೆ ಕುಸಿದಿರುವ ಚೆಂಡು ಹೂವಿಗೆ ₹ 10 ಬೆಲೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>