<p><strong>ಹನೂರು: ತಾ</strong>ಲ್ಲೂಕಿನ ಗಡಿಯಲ್ಲಿರುವ ಗೋಪಿನಾಥಂ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದ್ದು, ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಪೋಷಕರಲ್ಲಿದೆ. </p>.<p>ಪ್ರಾಥಮಿಕ ಶಾಲೆಯಲ್ಲಿ 306 ವಿದ್ಯಾರ್ಥಿಗಳಿದ್ದಾರೆ. ತಮಿಳು ಮಾಧ್ಯಮಕ್ಕೆ ಸೀಮಿತವಾಗಿದ್ದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ವರ್ಷದ ಹಿಂದೆ ಕನ್ನಡ ಮಾಧ್ಯಮ ಹಾಗೂ ಕಳೆದ ವರ್ಷ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಆರಂಭವಾಗಿದೆ.</p>.<p>‘ಕಿರಿಯ ಪ್ರಾಥಮಿಕ ಶಾಲೆಗೆ ಕನ್ನಡ, ಇಂಗ್ಲಿಷ್ ಭಾಷಾ ಶಿಕ್ಷಕರೇ ಇಲ್ಲ. ಹಿರಿಯ ಪ್ರಾಥಮಿಕ ಶಾಲೆಗೆ ಗಣಿತ, ವಿಜ್ಞಾನ ಶಿಕ್ಷಕರಿಲ್ಲದಿರುವುದರಿಂದ ಬೋಧನೆ–ಕಲಿಕೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ’ ಎಂಬುದು ಪೋಷಕರ ಅಳಲು.</p>.<p>ಪ್ರೌಢಶಾಲೆಯಲ್ಲಿ 89 ಮಕ್ಕಳಿದ್ದಾರೆ. ಇಂಗ್ಲಿಷ್, ಹಿಂದಿ, ಸಮಾಜ ವಿಜ್ಞಾನ ಹಾಗೂ ಚಿತ್ರಕಲಾ ಶಿಕ್ಷಕರಿಲ್ಲ. ಈ ಭಾಗದ ಹಲವು ಗ್ರಾಮಗಳ ಮಕ್ಕಳಿಗೆ ಈ ಶಾಲೆಯೇ ಆಧಾರ. ಪ್ರತಿಯೊಂದಕ್ಕೂ ಪ್ರತ್ಯೇಕ ಕೊಠಡಿಗಳು ಬೇಕು. ಆದರೆ, ಎರಡು ಮಾಧ್ಯಮಗಳ ಮಕ್ಕಳನ್ನು ಒಂದೇ ಕಡೆ ಕೂರಿಸಿ ಪಾಠ ಮಾಡಲಾಗುತ್ತಿದೆ. </p>.<p>ಪ್ರೌಢಶಾಲೆಯ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಪ್ರಯೋಗಾಲಯ, ಗ್ರಂಥಾಲಯ ಹಾಗೂ ಕ್ರೀಡಾ ಸಾಮಗ್ರಿ ಇಡಲು ಕೊಠಡಿಗಳಿಲ್ಲ.</p>.<p class="Briefhead"><strong>ಅರ್ಧಕ್ಕೆ ಸ್ಥಗಿತಗೊಂಡ ಕಾಮಗಾರಿ</strong></p>.<p>ಶಾಲೆಯಲ್ಲಿ ಕೊಠಡಿ ಕೊರತೆ ನೀಗಿಸಲು ಪ್ರೌಢಶಾಲೆಯಲ್ಲಿ 2008ರಲ್ಲಿ ನಿರ್ಮಿತಿ ಕೇಂದ್ರದಿಂದ ಒಂದು ಕೊಠಡಿ ನಿರ್ಮಾಣ ಶುರುವಾಗಿದ್ದು, ಅರ್ಧಕ್ಕೆ ನಿಂತಿದೆ. ಶಾಲೆಯು ಗ್ರಾಮದ ಹೊರವಲಯದಲ್ಲಿರುವುದರಿಂದ ಕಟ್ಟಡ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ. ಪ್ರತಿ ನಿತ್ಯ ಮದ್ಯದ ಖಾಲಿ ಬಾಟಲಿಗಳನ್ನು ವಿದ್ಯಾರ್ಥಿಗಳು ವಿಲೇವಾರಿ ಮಾಡಬೇಕಾಗಿದೆ.</p>.<p>‘ಮದ್ಯದ ಬಾಟಲಿ ತೆಗೆಯುವಂತೆ ಮಕ್ಕಳಿಗೆ ಹೇಳಲು ಮನಸ್ಸು ಒಪ್ಪುವುದಿಲ್ಲ. ಆದರೆ ಅದು ಅನಿವಾರ್ಯ’ ಎಂದು ಶಿಕ್ಷಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.</p>.<p>--</p>.<p>ಶಿಕ್ಷಕರು, ಕೊಠಡಿ ಕೊರತೆ ಬಗ್ಗೆ ಸಚಿವ ಸುರೇಶ್ ಕುಮಾರ್ ಹಾಗೂ ಜಿಲ್ಲಾಧಿಕಾರಿಯವರು ವಾಸ್ತವ್ಯ ಮಾಡಿದ್ದ ಸಂದರ್ಭದಲ್ಲಿ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.<br /><strong>- ಅಯ್ಯನ್ ದೊರೆ, ಎಸ್ಡಿಎಂಸಿ ಅಧ್ಯಕ್ಷ</strong></p>.<p>--</p>.<p>ಪ್ರೌಢಶಾಲೆಯಲ್ಲಿ ಭಾಷಾ ಶಿಕ್ಷಕರಾಗಿ ಹಿರಿಯ ಪ್ರಾಥಮಿಕ ಶಾಲೆಯ ಭಾಷಾ ಶಿಕ್ಷಕರನ್ನೇ ನಿಯೋಜಿಸಲಾಗಿದೆ.. ಮುಂದಿನ ವರ್ಷದಿಂದ ಕಾಯಂ ಶಿಕ್ಷಕರ ನಿಯೋಜನೆಯಾಗಲಿದೆ<br /><strong>- ಶಿವರಾಜು, ಬಿಇಒ, ಹನೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನೂರು: ತಾ</strong>ಲ್ಲೂಕಿನ ಗಡಿಯಲ್ಲಿರುವ ಗೋಪಿನಾಥಂ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದ್ದು, ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಪೋಷಕರಲ್ಲಿದೆ. </p>.<p>ಪ್ರಾಥಮಿಕ ಶಾಲೆಯಲ್ಲಿ 306 ವಿದ್ಯಾರ್ಥಿಗಳಿದ್ದಾರೆ. ತಮಿಳು ಮಾಧ್ಯಮಕ್ಕೆ ಸೀಮಿತವಾಗಿದ್ದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ವರ್ಷದ ಹಿಂದೆ ಕನ್ನಡ ಮಾಧ್ಯಮ ಹಾಗೂ ಕಳೆದ ವರ್ಷ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಆರಂಭವಾಗಿದೆ.</p>.<p>‘ಕಿರಿಯ ಪ್ರಾಥಮಿಕ ಶಾಲೆಗೆ ಕನ್ನಡ, ಇಂಗ್ಲಿಷ್ ಭಾಷಾ ಶಿಕ್ಷಕರೇ ಇಲ್ಲ. ಹಿರಿಯ ಪ್ರಾಥಮಿಕ ಶಾಲೆಗೆ ಗಣಿತ, ವಿಜ್ಞಾನ ಶಿಕ್ಷಕರಿಲ್ಲದಿರುವುದರಿಂದ ಬೋಧನೆ–ಕಲಿಕೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ’ ಎಂಬುದು ಪೋಷಕರ ಅಳಲು.</p>.<p>ಪ್ರೌಢಶಾಲೆಯಲ್ಲಿ 89 ಮಕ್ಕಳಿದ್ದಾರೆ. ಇಂಗ್ಲಿಷ್, ಹಿಂದಿ, ಸಮಾಜ ವಿಜ್ಞಾನ ಹಾಗೂ ಚಿತ್ರಕಲಾ ಶಿಕ್ಷಕರಿಲ್ಲ. ಈ ಭಾಗದ ಹಲವು ಗ್ರಾಮಗಳ ಮಕ್ಕಳಿಗೆ ಈ ಶಾಲೆಯೇ ಆಧಾರ. ಪ್ರತಿಯೊಂದಕ್ಕೂ ಪ್ರತ್ಯೇಕ ಕೊಠಡಿಗಳು ಬೇಕು. ಆದರೆ, ಎರಡು ಮಾಧ್ಯಮಗಳ ಮಕ್ಕಳನ್ನು ಒಂದೇ ಕಡೆ ಕೂರಿಸಿ ಪಾಠ ಮಾಡಲಾಗುತ್ತಿದೆ. </p>.<p>ಪ್ರೌಢಶಾಲೆಯ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಪ್ರಯೋಗಾಲಯ, ಗ್ರಂಥಾಲಯ ಹಾಗೂ ಕ್ರೀಡಾ ಸಾಮಗ್ರಿ ಇಡಲು ಕೊಠಡಿಗಳಿಲ್ಲ.</p>.<p class="Briefhead"><strong>ಅರ್ಧಕ್ಕೆ ಸ್ಥಗಿತಗೊಂಡ ಕಾಮಗಾರಿ</strong></p>.<p>ಶಾಲೆಯಲ್ಲಿ ಕೊಠಡಿ ಕೊರತೆ ನೀಗಿಸಲು ಪ್ರೌಢಶಾಲೆಯಲ್ಲಿ 2008ರಲ್ಲಿ ನಿರ್ಮಿತಿ ಕೇಂದ್ರದಿಂದ ಒಂದು ಕೊಠಡಿ ನಿರ್ಮಾಣ ಶುರುವಾಗಿದ್ದು, ಅರ್ಧಕ್ಕೆ ನಿಂತಿದೆ. ಶಾಲೆಯು ಗ್ರಾಮದ ಹೊರವಲಯದಲ್ಲಿರುವುದರಿಂದ ಕಟ್ಟಡ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ. ಪ್ರತಿ ನಿತ್ಯ ಮದ್ಯದ ಖಾಲಿ ಬಾಟಲಿಗಳನ್ನು ವಿದ್ಯಾರ್ಥಿಗಳು ವಿಲೇವಾರಿ ಮಾಡಬೇಕಾಗಿದೆ.</p>.<p>‘ಮದ್ಯದ ಬಾಟಲಿ ತೆಗೆಯುವಂತೆ ಮಕ್ಕಳಿಗೆ ಹೇಳಲು ಮನಸ್ಸು ಒಪ್ಪುವುದಿಲ್ಲ. ಆದರೆ ಅದು ಅನಿವಾರ್ಯ’ ಎಂದು ಶಿಕ್ಷಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.</p>.<p>--</p>.<p>ಶಿಕ್ಷಕರು, ಕೊಠಡಿ ಕೊರತೆ ಬಗ್ಗೆ ಸಚಿವ ಸುರೇಶ್ ಕುಮಾರ್ ಹಾಗೂ ಜಿಲ್ಲಾಧಿಕಾರಿಯವರು ವಾಸ್ತವ್ಯ ಮಾಡಿದ್ದ ಸಂದರ್ಭದಲ್ಲಿ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.<br /><strong>- ಅಯ್ಯನ್ ದೊರೆ, ಎಸ್ಡಿಎಂಸಿ ಅಧ್ಯಕ್ಷ</strong></p>.<p>--</p>.<p>ಪ್ರೌಢಶಾಲೆಯಲ್ಲಿ ಭಾಷಾ ಶಿಕ್ಷಕರಾಗಿ ಹಿರಿಯ ಪ್ರಾಥಮಿಕ ಶಾಲೆಯ ಭಾಷಾ ಶಿಕ್ಷಕರನ್ನೇ ನಿಯೋಜಿಸಲಾಗಿದೆ.. ಮುಂದಿನ ವರ್ಷದಿಂದ ಕಾಯಂ ಶಿಕ್ಷಕರ ನಿಯೋಜನೆಯಾಗಲಿದೆ<br /><strong>- ಶಿವರಾಜು, ಬಿಇಒ, ಹನೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>