ನಗರದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರನ್ನು ಉದ್ದೇಶಿಸಿ ಬರೆಯಲಾದ ರಜಾ ಅರ್ಜಿ ಇದಾಗಿದ್ದು, ಅದರಲ್ಲಿ ಪ್ರಾಂಶುಪಾಲರ ಮೊಹರು ಹಾಗೂ ಹಸಿರು ಶಾಯಿಯಲ್ಲಿ ಮಾಡಿರುವ ಸಹಿಯೂ ಇದೆ. ಈ ರಜಾ ಅರ್ಜಿಯ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲ ಸೀಗನಾಯಕ ಅವರು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.