<p><strong>ಚಾಮರಾಜನಗರ: </strong>ಕೋವಿಡ್ನಿಂದ ತಂದೆ ಹಾಗೂ ತಾಯಿಯನ್ನು ಕಳೆದುಕೊಂಡ ತಾಲ್ಲೂಕಿನ ಕೊತ್ತಲವಾಡಿಯ ಐದು ವರ್ಷ ವಯಸ್ಸಿನ ವರ್ಷಾ ಮತ್ತು ಆಕೆಯ ಪಾಲಕರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಅವರು ಶನಿವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.</p>.<p>ವರ್ಷಾಳ ಪರಿಸ್ಥಿತಿ, ಆಕೆಯನ್ನು ದತ್ತು ಪಡೆದುಕೊಂಡ ಚಿಕ್ಕಮ್ಮ ರಶ್ಮಿ, ಚಿಕ್ಕಪ್ಪ ಮಹದೇವಸ್ವಾಮಿ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಕಂಡು ಸಚಿವೆ ಭಾವುಕರಾದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೂಡ ಈ ಭೇಟಿ ವಿಚಾರವನ್ನು ಪ್ರಸ್ತಾಪಿಸಿದ ಅವರು, ‘ಬಾಲಕಿಯನ್ನು ಕಂಡರೆ ಕರಳು ಹಿಂಡಿದಂತೆ ಆಗುತ್ತದೆ’ ಎಂದು ಹೇಳಿದರು.</p>.<p>ಬೆಳಿಗ್ಗೆ ಮನೆಗೆ ಬಂದ ಸಚಿವೆ ಜೊಲ್ಲೆ ಅವರನ್ನು ಬಾಲಕಿ ವರ್ಷಾ ಗುಲಾಬಿ ಹೂ ನೀಡಿ ಸ್ವಾಗತಿಸಿದಳು. ವರ್ಷಾ ಜೊತೆ ಸ್ವಲ್ಪ ಹೊತ್ತು ಕುಶಲೋಪರಿ ಮಾತನಾಡಿದರು. ತಮ್ಮ ಪಕ್ಕ ಕುಳ್ಳಿರಿಸಿ ಎದೆಯತ್ತ ಒತ್ತಿಕೊಂಡು ಸಂತೈಸಿದರು.</p>.<p>‘ಮುಂದೆ ಏನಾಗುತ್ತೀಯಾ’ ಎಂದು ಸಚಿವೆ ಕೇಳಿದಾಗ ‘ಡಿಸಿ ಆಗ್ಬೇಕು’ ಎಂದು ವರ್ಷಾ ತಟ್ಟನೆ ಉತ್ತರಿಸಿದಳು.</p>.<p>‘ನಾಲ್ಕು ದಿನ ನನ್ನ ಜೊತೆ ಬಂದು ಬಿಡು’ ಎಂದು ಜೊಲ್ಲೆ ಅವರು ಹೇಳಿದಾಗ, ಇಲ್ಲ ಎಂದು ತಲೆಯಾಡಿಸಿದಳು.</p>.<p>‘ಚಿಕ್ಕಮ್ಮ ಬಂದರೆ ಬರುತ್ತೀಯ’ ಎಂದು ಮರು ಪ್ರಶ್ನಿಸಿದಾಗ, ‘ಹೌದು’ ಎಂದು ಉತ್ತರಿಸಿದಳು.</p>.<p class="Subhead">ಎಲ್ಲ ಸೌಲಭ್ಯಗಳ ಭರವಸೆ: ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ವರ್ಷಾಗೆ ಕೊಡಿಸುವುದಾಗಿ ಸಚಿವರು ಮಹದೇವಸ್ವಾಮಿ ದಂಪತಿಗೆ ಭರವಸೆ ನೀಡಿದರು. ಎಲ್ಲ ಸೌಲಭ್ಯಗಳನ್ನು ನೀಡಲು ಕ್ರಮ ವಹಿಸುವುದಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೂ ಸೂಚಿಸಿದರು.</p>.<p class="Subhead"><strong>ವೈಯಕ್ತಿಕ ಸಹಾಯ:</strong> ಮಹದೇವಸ್ವಾಮಿ ಅವರದ್ದು ಬಡ ಕುಟುಂಬದವರಾಗಿದ್ದು ವೈಯಕ್ತಿಕವಾಗಿ ಸಹಾಯ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಸಚಿವರ ಜೊತೆಯಲ್ಲಿದ್ದ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಅವರು ಸ್ಪಂದಿಸಿ ಮಗುವಿಗೆ ₹ 50 ಸಾವಿರ ನೀಡುವುದಾಗಿ ಭರವಸೆ ನೀಡಿದರು. ಬಳಿಕ ಸಚಿವರು ಕೂಡ ನಮ್ಮ ಸಂಸ್ಥೆಯ ವತಿಯಿಂದಲೂ ಅಗತ್ಯ ಸಹಾಯ ಮಾಡಲಾಗುವುದು ಎಂದರು.</p>.<p>ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜು ಇತರರು ಇದ್ದರು.</p>.<p>ಸಚಿವರ ಭೇಟಿಯ ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವರ್ಷಾಳ ಚಿಕ್ಕಪ್ಪ ಮಹದೇವಸ್ವಾಮಿ ಅವರು, ‘ಸಚಿವರು ಬಂದು ನಮ್ಮ ಜೊತೆ ಮಾತನಾಡಿದರು. ಎಲ್ಲ ಮಾಹಿತಿಗಳನ್ನೂ ಪಡೆದರು. ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>ಕೋವಿಡ್ನಿಂದ ತಂದೆ ಹಾಗೂ ತಾಯಿಯನ್ನು ಕಳೆದುಕೊಂಡ ತಾಲ್ಲೂಕಿನ ಕೊತ್ತಲವಾಡಿಯ ಐದು ವರ್ಷ ವಯಸ್ಸಿನ ವರ್ಷಾ ಮತ್ತು ಆಕೆಯ ಪಾಲಕರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಅವರು ಶನಿವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.</p>.<p>ವರ್ಷಾಳ ಪರಿಸ್ಥಿತಿ, ಆಕೆಯನ್ನು ದತ್ತು ಪಡೆದುಕೊಂಡ ಚಿಕ್ಕಮ್ಮ ರಶ್ಮಿ, ಚಿಕ್ಕಪ್ಪ ಮಹದೇವಸ್ವಾಮಿ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಕಂಡು ಸಚಿವೆ ಭಾವುಕರಾದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೂಡ ಈ ಭೇಟಿ ವಿಚಾರವನ್ನು ಪ್ರಸ್ತಾಪಿಸಿದ ಅವರು, ‘ಬಾಲಕಿಯನ್ನು ಕಂಡರೆ ಕರಳು ಹಿಂಡಿದಂತೆ ಆಗುತ್ತದೆ’ ಎಂದು ಹೇಳಿದರು.</p>.<p>ಬೆಳಿಗ್ಗೆ ಮನೆಗೆ ಬಂದ ಸಚಿವೆ ಜೊಲ್ಲೆ ಅವರನ್ನು ಬಾಲಕಿ ವರ್ಷಾ ಗುಲಾಬಿ ಹೂ ನೀಡಿ ಸ್ವಾಗತಿಸಿದಳು. ವರ್ಷಾ ಜೊತೆ ಸ್ವಲ್ಪ ಹೊತ್ತು ಕುಶಲೋಪರಿ ಮಾತನಾಡಿದರು. ತಮ್ಮ ಪಕ್ಕ ಕುಳ್ಳಿರಿಸಿ ಎದೆಯತ್ತ ಒತ್ತಿಕೊಂಡು ಸಂತೈಸಿದರು.</p>.<p>‘ಮುಂದೆ ಏನಾಗುತ್ತೀಯಾ’ ಎಂದು ಸಚಿವೆ ಕೇಳಿದಾಗ ‘ಡಿಸಿ ಆಗ್ಬೇಕು’ ಎಂದು ವರ್ಷಾ ತಟ್ಟನೆ ಉತ್ತರಿಸಿದಳು.</p>.<p>‘ನಾಲ್ಕು ದಿನ ನನ್ನ ಜೊತೆ ಬಂದು ಬಿಡು’ ಎಂದು ಜೊಲ್ಲೆ ಅವರು ಹೇಳಿದಾಗ, ಇಲ್ಲ ಎಂದು ತಲೆಯಾಡಿಸಿದಳು.</p>.<p>‘ಚಿಕ್ಕಮ್ಮ ಬಂದರೆ ಬರುತ್ತೀಯ’ ಎಂದು ಮರು ಪ್ರಶ್ನಿಸಿದಾಗ, ‘ಹೌದು’ ಎಂದು ಉತ್ತರಿಸಿದಳು.</p>.<p class="Subhead">ಎಲ್ಲ ಸೌಲಭ್ಯಗಳ ಭರವಸೆ: ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ವರ್ಷಾಗೆ ಕೊಡಿಸುವುದಾಗಿ ಸಚಿವರು ಮಹದೇವಸ್ವಾಮಿ ದಂಪತಿಗೆ ಭರವಸೆ ನೀಡಿದರು. ಎಲ್ಲ ಸೌಲಭ್ಯಗಳನ್ನು ನೀಡಲು ಕ್ರಮ ವಹಿಸುವುದಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೂ ಸೂಚಿಸಿದರು.</p>.<p class="Subhead"><strong>ವೈಯಕ್ತಿಕ ಸಹಾಯ:</strong> ಮಹದೇವಸ್ವಾಮಿ ಅವರದ್ದು ಬಡ ಕುಟುಂಬದವರಾಗಿದ್ದು ವೈಯಕ್ತಿಕವಾಗಿ ಸಹಾಯ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಸಚಿವರ ಜೊತೆಯಲ್ಲಿದ್ದ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಅವರು ಸ್ಪಂದಿಸಿ ಮಗುವಿಗೆ ₹ 50 ಸಾವಿರ ನೀಡುವುದಾಗಿ ಭರವಸೆ ನೀಡಿದರು. ಬಳಿಕ ಸಚಿವರು ಕೂಡ ನಮ್ಮ ಸಂಸ್ಥೆಯ ವತಿಯಿಂದಲೂ ಅಗತ್ಯ ಸಹಾಯ ಮಾಡಲಾಗುವುದು ಎಂದರು.</p>.<p>ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜು ಇತರರು ಇದ್ದರು.</p>.<p>ಸಚಿವರ ಭೇಟಿಯ ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವರ್ಷಾಳ ಚಿಕ್ಕಪ್ಪ ಮಹದೇವಸ್ವಾಮಿ ಅವರು, ‘ಸಚಿವರು ಬಂದು ನಮ್ಮ ಜೊತೆ ಮಾತನಾಡಿದರು. ಎಲ್ಲ ಮಾಹಿತಿಗಳನ್ನೂ ಪಡೆದರು. ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>