<p><strong>ಯಳಂದೂರು:</strong> ತಾಲ್ಲೂಕಿನ ದೊಡ್ಡ ಕೆರೆ ಎಂಬ ಮಾನ್ಯತೆ ಪಡೆದ ಅಗರ ಕೆರೆಯಲ್ಲಿ ಈಗ ನೀರು ಸಮೃದ್ಧವಾಗಿ ನಳನಳಿಸುತ್ತಿದೆ. ಮೊದಲ ಬಾರಿಗೆ ಕೆರೆಯ ನೀರನ್ನು ನಂಬಿ ಕೃಷಿಕರು ನಾಟಿಚಟುವಟಿಕೆಯಲ್ಲಿ ತೊಡಗಿದ್ದಾರೆ.</p>.<p>ಸುವರ್ಣಾವತಿ ನದಿಮೂಲ ಬಳಸಿಕೊಂಡು ಕೆರೆಯ ಒಡಲುತುಂಬಿಸಬಹುದು ಎಂಬುದನ್ನು ಈ ಕೆರೆ ಕಾಮಗಾರಿ ಸಾಧ್ಯವಾಗಿಸಿದೆ.</p>.<p>ತಾಲ್ಲೂಕಿನ 27 ಕೆರೆಗಳಲ್ಲಿ ಅರ್ಧದಷ್ಟು ಕೆರೆಗಳು ಬೇಸಿಗೆಯಲ್ಲಿ ಬತ್ತಿ ಹೋಗುತ್ತವೆ.ಆದರೆ, 999 ಎಕರೆಗಳಷ್ಟು ವಿಸ್ತಾರವಿರುವ ಅಗರ ಕೆರೆಯು, ಆರು ತಿಂಗಳಿಗೆ ಸಾಕಾಗುವಷ್ಟು ನೀರು ಹಿಡಿದಿಡುವ ಸಾಮರ್ಥ್ಯ ಹೊಂದಿದೆ. ಆದರೆ, ಕಳೆ ಗಿಡ ಮತ್ತು ಹೂಳಿನ ಸಮಸ್ಯೆ ಕೆರೆಯನ್ನು ಬಾಧಿಸುತ್ತಿತ್ತು.</p>.<p>ಕೋವಿಡ್ ಸಮಯದಲ್ಲಿಅಗರ ಗ್ರಾಮ ಪಂಚಾಯಿತಿಯು ನರೇಗಾ ಯೋಜನೆಯಡಿ ಕೆರೆ ಅಭಿವೃದ್ಧಿಗೆ ಒತ್ತುನೀಡಿದ ಪರಿಣಾಮ, ಈ ಬಾರಿ ಮಳೆ ನೀರು ಸಂಗ್ರಹವಾಗಲು ಕಾರಣವಾಗಿದೆ.</p>.<p>‘ಅಗರ ಹೋಬಳಿ ವ್ಯಾಪ್ತಿಯ ಸುಮಾರು 3,500 ಕೃಷಿಕರ ಜಮೀನುಗಳಿಗೆ ಈ ಕೆರೆಯ ನೀರು ಹರಿಯುತ್ತಿದೆ.ಕೆರೆಗೆ ಸಂಪರ್ಕಿಸುವ ಜಲದಾರಿಗಳ ಒತ್ತುವರಿಯನ್ನು ತೆರವುಗೊಳಿಸಿರುವುದರಿಂದ ಕೆರೆಗೆ ನೀರು ಹರಿಯುವಿಕೆ ಸರಾಗವಾಗಿದೆ. ಇದರಿಂದ ಅಲ್ಫಾವಧಿಯ ಬೆಳೆ ಬೆಳೆಯಲು ಸಾಧ್ಯವಾಗಿದೆ’ ಎಂದು ಕಿನಕಳ್ಳಿಕೃಷಿಕ ಮಂಜುನಾಥ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ದೊಡ್ಡ ಕಬಿನಿ ಕಾಲುವೆಯಿಂದ ಸುವರ್ಣಾವತಿಗೆ ನೀರು ಹರಿಸಿ, ಗಣಿಗನೂರು ಕಟ್ಟೆ ಮೂಲಕಅಗರ ಕೆರೆಗೆ ನೀರು ಹರಿಯುತ್ತದೆ. ಆದರೆ, ಸುವರ್ಣಾವತಿ ಏತ ನೀರಾವರಿ ಯೋಜನೆಗೆ ಚಾಲನೆನೀಡಿದರೆ, ಈ ಭಾಗದ ರೈತರಿಗೆ ವರ್ಷದಲ್ಲಿ ಎರಡು ಬಾರಿ ಕೃಷಿ ಕೈಗೊಳ್ಳಬಹುದು’ ಎಂದು ಗ್ರಾಮದ ಮುಖಂಡ ವೆಂಕಟೇಶ್ ಅವರು ಅಭಿಪ್ರಾಯ ಪಟ್ಟರು.</p>.<p>‘ಶಾಸಕರ ಅನುದಾನದಿಂದ ಈ ಬಾರಿ 4 ತೂಬು (ನೀರು ನಿಯಂತ್ರಣ ಸಾಧನ) ಮತ್ತು ₹1.5 ಕೋಟಿವೆಚ್ಚದಲ್ಲಿ ಕಾಮಗಾರಿ ಪೂರೈಸಲಾಗಿದೆ. ಇದರಿಂದ ನೀರಿನ ಹರಿವಿನಲ್ಲಿ ಹೆಚ್ಚಳಆಗಿದ್ದು, ಎರಡು ತಿಂಗಳ ನೀರು ಹೆಚ್ಚುವರಿಯಾಗಿ ಕೆರೆ ಸೇರಿದೆ’ ಎಂದು ಅವರು ವಿವರಿಸಿದರು.</p>.<p class="Subhead">ಅಂತರ್ಜಲ ವೃದ್ಧಿ: ಕೆರೆ ಅಭಿವೃದ್ಧಿ ಹಾಗೂ ಅದರಿಂದಾಗಿರುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಸ್.ಮಂಜುನಾಥ್ ಅವರು, ‘ಅಗರ ಕೆರೆ 999 ಎಕೆರೆ ವಿಸ್ತೀರ್ಣ ಹೊಂದಿದೆ. ನರೇಗಾ ಯೋಜನೆಯಡಿ ₹ 35 ಲಕ್ಷ ವೆಚ್ಛದಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ 359ಕ್ಕೂ ಹೆಚ್ಚಿನ ಕೊಳವೆಬಾವಿಗಳಲ್ಲಿ ಅಂತರ್ಜಲ ಏರಿದೆ’ ಎಂದರು.</p>.<p class="Briefhead">ಕೆರೆ ಅಭಿವೃದ್ಧಿಗೆ ಒತ್ತು: ಶಾಸಕ</p>.<p>ಅಗರ ಕೆರೆಯು 1,250 ಎಕರೆ ಕೃಷಿ ಜಮೀನಿಗೆ ನೀರು ಹರಿಸುತ್ತದೆ. ಕೆರೆಯ ಸುತ್ತಲೂ ₹40 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ. ಇತರಕೆರೆಗಳಿಗೆ ಕಾಯಕಲ್ಪ ಕಲ್ಪಿಸಲು ₹1.60 ಕೋಟಿ ಭರಿಸಲಾಗಿದೆ. 20ಕ್ಕೂ ಹೆಚ್ಚಿನಜಲಾವರಗಳಲ್ಲಿ ಹೂಳು ತೆಗೆದು, 8 ಕೆರೆಗಳಲ್ಲಿ ನೀರು ತುಂಬಿಸಲು ಆದ್ಯತೆನೀಡಲಾಗಿದೆ ಎಂದು ಶಾಸಕಎನ್. ಮಹೇಶ್ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>––</p>.<p>ಎತ್ತರದಲ್ಲಿರುವ ಇರುವ ಭೂಮಿಗೆ ಕೆರೆ ನೀರು ಜೀವದಾಯಿ. ಕೆರೆಯಲ್ಲಿ ಯಾವಾಗಲೂ ನೀರು ನಿಲ್ಲಿಸಲು ಪಂಚಾಯಿತಿ ಮುಂದಾಗಬೇಕು.</p>.<p>ವೆಂಕಟೇಶ್, ಅಗರ</p>.<p>–––––––––</p>.<p>ಇದೇ ಮೊದಲ ಸಲ ಅಗರ ಕೆರೆ ನೀರು ನಂಬಿ ಭತ್ತ ಬೆಳೆಯಲು ಮುಂದಾಗಿದ್ಧೇವೆ. ಜಲ ಮೂಲಗಳನ್ನು ಸ್ವಚ್ಛಗೊಳಿಸಲು ಗಮನ ಹರಿಸಬೇಕು</p>.<p>–ಸಿದ್ದಪ್ಪ, ಬಸವಪುರ</p>.<p>––––––––––</p>.<p>ಕೆರೆ ನೀರಾವರಿಯಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಕಳೆಗಿಡ ಕತ್ತರಿಸಿ, ನರೇಗಾ ಮೂಲಕ ಉದ್ಯೋಗ ಸೃಷ್ಟಿಸಲು ಕಾಳಜಿ ವಹಿಸಬೇಕು</p>.<p>ಶಂಭುಲಿಂಗನಾಯಕ, ಕೆಸ್ತೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು:</strong> ತಾಲ್ಲೂಕಿನ ದೊಡ್ಡ ಕೆರೆ ಎಂಬ ಮಾನ್ಯತೆ ಪಡೆದ ಅಗರ ಕೆರೆಯಲ್ಲಿ ಈಗ ನೀರು ಸಮೃದ್ಧವಾಗಿ ನಳನಳಿಸುತ್ತಿದೆ. ಮೊದಲ ಬಾರಿಗೆ ಕೆರೆಯ ನೀರನ್ನು ನಂಬಿ ಕೃಷಿಕರು ನಾಟಿಚಟುವಟಿಕೆಯಲ್ಲಿ ತೊಡಗಿದ್ದಾರೆ.</p>.<p>ಸುವರ್ಣಾವತಿ ನದಿಮೂಲ ಬಳಸಿಕೊಂಡು ಕೆರೆಯ ಒಡಲುತುಂಬಿಸಬಹುದು ಎಂಬುದನ್ನು ಈ ಕೆರೆ ಕಾಮಗಾರಿ ಸಾಧ್ಯವಾಗಿಸಿದೆ.</p>.<p>ತಾಲ್ಲೂಕಿನ 27 ಕೆರೆಗಳಲ್ಲಿ ಅರ್ಧದಷ್ಟು ಕೆರೆಗಳು ಬೇಸಿಗೆಯಲ್ಲಿ ಬತ್ತಿ ಹೋಗುತ್ತವೆ.ಆದರೆ, 999 ಎಕರೆಗಳಷ್ಟು ವಿಸ್ತಾರವಿರುವ ಅಗರ ಕೆರೆಯು, ಆರು ತಿಂಗಳಿಗೆ ಸಾಕಾಗುವಷ್ಟು ನೀರು ಹಿಡಿದಿಡುವ ಸಾಮರ್ಥ್ಯ ಹೊಂದಿದೆ. ಆದರೆ, ಕಳೆ ಗಿಡ ಮತ್ತು ಹೂಳಿನ ಸಮಸ್ಯೆ ಕೆರೆಯನ್ನು ಬಾಧಿಸುತ್ತಿತ್ತು.</p>.<p>ಕೋವಿಡ್ ಸಮಯದಲ್ಲಿಅಗರ ಗ್ರಾಮ ಪಂಚಾಯಿತಿಯು ನರೇಗಾ ಯೋಜನೆಯಡಿ ಕೆರೆ ಅಭಿವೃದ್ಧಿಗೆ ಒತ್ತುನೀಡಿದ ಪರಿಣಾಮ, ಈ ಬಾರಿ ಮಳೆ ನೀರು ಸಂಗ್ರಹವಾಗಲು ಕಾರಣವಾಗಿದೆ.</p>.<p>‘ಅಗರ ಹೋಬಳಿ ವ್ಯಾಪ್ತಿಯ ಸುಮಾರು 3,500 ಕೃಷಿಕರ ಜಮೀನುಗಳಿಗೆ ಈ ಕೆರೆಯ ನೀರು ಹರಿಯುತ್ತಿದೆ.ಕೆರೆಗೆ ಸಂಪರ್ಕಿಸುವ ಜಲದಾರಿಗಳ ಒತ್ತುವರಿಯನ್ನು ತೆರವುಗೊಳಿಸಿರುವುದರಿಂದ ಕೆರೆಗೆ ನೀರು ಹರಿಯುವಿಕೆ ಸರಾಗವಾಗಿದೆ. ಇದರಿಂದ ಅಲ್ಫಾವಧಿಯ ಬೆಳೆ ಬೆಳೆಯಲು ಸಾಧ್ಯವಾಗಿದೆ’ ಎಂದು ಕಿನಕಳ್ಳಿಕೃಷಿಕ ಮಂಜುನಾಥ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ದೊಡ್ಡ ಕಬಿನಿ ಕಾಲುವೆಯಿಂದ ಸುವರ್ಣಾವತಿಗೆ ನೀರು ಹರಿಸಿ, ಗಣಿಗನೂರು ಕಟ್ಟೆ ಮೂಲಕಅಗರ ಕೆರೆಗೆ ನೀರು ಹರಿಯುತ್ತದೆ. ಆದರೆ, ಸುವರ್ಣಾವತಿ ಏತ ನೀರಾವರಿ ಯೋಜನೆಗೆ ಚಾಲನೆನೀಡಿದರೆ, ಈ ಭಾಗದ ರೈತರಿಗೆ ವರ್ಷದಲ್ಲಿ ಎರಡು ಬಾರಿ ಕೃಷಿ ಕೈಗೊಳ್ಳಬಹುದು’ ಎಂದು ಗ್ರಾಮದ ಮುಖಂಡ ವೆಂಕಟೇಶ್ ಅವರು ಅಭಿಪ್ರಾಯ ಪಟ್ಟರು.</p>.<p>‘ಶಾಸಕರ ಅನುದಾನದಿಂದ ಈ ಬಾರಿ 4 ತೂಬು (ನೀರು ನಿಯಂತ್ರಣ ಸಾಧನ) ಮತ್ತು ₹1.5 ಕೋಟಿವೆಚ್ಚದಲ್ಲಿ ಕಾಮಗಾರಿ ಪೂರೈಸಲಾಗಿದೆ. ಇದರಿಂದ ನೀರಿನ ಹರಿವಿನಲ್ಲಿ ಹೆಚ್ಚಳಆಗಿದ್ದು, ಎರಡು ತಿಂಗಳ ನೀರು ಹೆಚ್ಚುವರಿಯಾಗಿ ಕೆರೆ ಸೇರಿದೆ’ ಎಂದು ಅವರು ವಿವರಿಸಿದರು.</p>.<p class="Subhead">ಅಂತರ್ಜಲ ವೃದ್ಧಿ: ಕೆರೆ ಅಭಿವೃದ್ಧಿ ಹಾಗೂ ಅದರಿಂದಾಗಿರುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಸ್.ಮಂಜುನಾಥ್ ಅವರು, ‘ಅಗರ ಕೆರೆ 999 ಎಕೆರೆ ವಿಸ್ತೀರ್ಣ ಹೊಂದಿದೆ. ನರೇಗಾ ಯೋಜನೆಯಡಿ ₹ 35 ಲಕ್ಷ ವೆಚ್ಛದಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ 359ಕ್ಕೂ ಹೆಚ್ಚಿನ ಕೊಳವೆಬಾವಿಗಳಲ್ಲಿ ಅಂತರ್ಜಲ ಏರಿದೆ’ ಎಂದರು.</p>.<p class="Briefhead">ಕೆರೆ ಅಭಿವೃದ್ಧಿಗೆ ಒತ್ತು: ಶಾಸಕ</p>.<p>ಅಗರ ಕೆರೆಯು 1,250 ಎಕರೆ ಕೃಷಿ ಜಮೀನಿಗೆ ನೀರು ಹರಿಸುತ್ತದೆ. ಕೆರೆಯ ಸುತ್ತಲೂ ₹40 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ. ಇತರಕೆರೆಗಳಿಗೆ ಕಾಯಕಲ್ಪ ಕಲ್ಪಿಸಲು ₹1.60 ಕೋಟಿ ಭರಿಸಲಾಗಿದೆ. 20ಕ್ಕೂ ಹೆಚ್ಚಿನಜಲಾವರಗಳಲ್ಲಿ ಹೂಳು ತೆಗೆದು, 8 ಕೆರೆಗಳಲ್ಲಿ ನೀರು ತುಂಬಿಸಲು ಆದ್ಯತೆನೀಡಲಾಗಿದೆ ಎಂದು ಶಾಸಕಎನ್. ಮಹೇಶ್ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>––</p>.<p>ಎತ್ತರದಲ್ಲಿರುವ ಇರುವ ಭೂಮಿಗೆ ಕೆರೆ ನೀರು ಜೀವದಾಯಿ. ಕೆರೆಯಲ್ಲಿ ಯಾವಾಗಲೂ ನೀರು ನಿಲ್ಲಿಸಲು ಪಂಚಾಯಿತಿ ಮುಂದಾಗಬೇಕು.</p>.<p>ವೆಂಕಟೇಶ್, ಅಗರ</p>.<p>–––––––––</p>.<p>ಇದೇ ಮೊದಲ ಸಲ ಅಗರ ಕೆರೆ ನೀರು ನಂಬಿ ಭತ್ತ ಬೆಳೆಯಲು ಮುಂದಾಗಿದ್ಧೇವೆ. ಜಲ ಮೂಲಗಳನ್ನು ಸ್ವಚ್ಛಗೊಳಿಸಲು ಗಮನ ಹರಿಸಬೇಕು</p>.<p>–ಸಿದ್ದಪ್ಪ, ಬಸವಪುರ</p>.<p>––––––––––</p>.<p>ಕೆರೆ ನೀರಾವರಿಯಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಕಳೆಗಿಡ ಕತ್ತರಿಸಿ, ನರೇಗಾ ಮೂಲಕ ಉದ್ಯೋಗ ಸೃಷ್ಟಿಸಲು ಕಾಳಜಿ ವಹಿಸಬೇಕು</p>.<p>ಶಂಭುಲಿಂಗನಾಯಕ, ಕೆಸ್ತೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>