<p><strong>ಯಳಂದೂರು:</strong> ಇನ್ನೂ ಮುಂದೆ ಬಾಲಕಿಯರು ಧೈರ್ಯವಾಗಿ ಠಾಣೆಗೆ ಬಂದು ಪೊಲೀಸರನ್ನು ಮಾತನಾಡಿಸಬಹುದು. ಕಾಯ್ದೆ, ಕಾನೂನುಗಳ ಬಗ್ಗೆ ಪ್ರಶ್ನಿಸಬಹುದು. ಭಯ ಪಡಬೇಕಿಲ್ಲ ಎಂದು ಪಿಎಸ್ಐ ನಂದೀಶ್ ಕುಮಾರ್ ಹೇಳಿದರು.</p>.<p>ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಆಯೋಜಿಸಿದ್ದ ತೆರೆದಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಹಿಂದಿನ ದಿನಗಳಲ್ಲಿ ಪೊಲೀಸರನ್ನು ಕಂಡರೆ ವಿದ್ಯಾರ್ಥಿಗಳು ಓಡುತ್ತಿದ್ದರು. ಸಮಾಜದಲ್ಲೂ ಆರಕ್ಷರ ಬಗ್ಗೆ ಉತ್ತಮ ಒಡನಾಟ ಇರಲಿಲ್ಲ. ಆದರೆ, ಈಗ ಕಾನೂನು ಮತ್ತು ಕಾಯ್ದೆ ಜನಪರವಾಗಿದ್ದು, ಮಕ್ಕಳಿಗೂ ಐಪಿಸಿ ಕೋಡ್ ಕಾನೂನುಗಳ ಬಗ್ಗೆ ತಿಳಿ ಹೇಳಬೇಕಿದೆ ಎಂದರು.</p>.<p>ಮಹಿಳಾ ಜೆಎಸ್ಎಸ್ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿನಿಯರು ಹತ್ತಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಪೋಕ್ಸೊ ಕಾಯ್ದೆ, ವಾರೆಂಟ್, ಮಕ್ಕಳ ರಕ್ಷಣೆ, ಬಾಲಕಿಯರಿಗೆ ಇರುವ ಸೌಲಭ್ಯಗಳ ಬಗ್ಗೆ ಸಂವಾದ ನಡೆಯಿತು.</p>.<p>ಎಎಸ್ಐ ಚಂದ್ರಶೇಖರ್, ಸಿಬ್ಬಂದಿ ನಾಗೇಂದ್ರ, ಎ ಎಸ್ ಜೆ ಪಿ ಯೂ ಘಟಕದ ಪೊಲೀಸ್ ಕಾನ್ಸ್ಟೆಬಲ್ ಕವಿತಾ ಹಾಗೂ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು:</strong> ಇನ್ನೂ ಮುಂದೆ ಬಾಲಕಿಯರು ಧೈರ್ಯವಾಗಿ ಠಾಣೆಗೆ ಬಂದು ಪೊಲೀಸರನ್ನು ಮಾತನಾಡಿಸಬಹುದು. ಕಾಯ್ದೆ, ಕಾನೂನುಗಳ ಬಗ್ಗೆ ಪ್ರಶ್ನಿಸಬಹುದು. ಭಯ ಪಡಬೇಕಿಲ್ಲ ಎಂದು ಪಿಎಸ್ಐ ನಂದೀಶ್ ಕುಮಾರ್ ಹೇಳಿದರು.</p>.<p>ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಆಯೋಜಿಸಿದ್ದ ತೆರೆದಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಹಿಂದಿನ ದಿನಗಳಲ್ಲಿ ಪೊಲೀಸರನ್ನು ಕಂಡರೆ ವಿದ್ಯಾರ್ಥಿಗಳು ಓಡುತ್ತಿದ್ದರು. ಸಮಾಜದಲ್ಲೂ ಆರಕ್ಷರ ಬಗ್ಗೆ ಉತ್ತಮ ಒಡನಾಟ ಇರಲಿಲ್ಲ. ಆದರೆ, ಈಗ ಕಾನೂನು ಮತ್ತು ಕಾಯ್ದೆ ಜನಪರವಾಗಿದ್ದು, ಮಕ್ಕಳಿಗೂ ಐಪಿಸಿ ಕೋಡ್ ಕಾನೂನುಗಳ ಬಗ್ಗೆ ತಿಳಿ ಹೇಳಬೇಕಿದೆ ಎಂದರು.</p>.<p>ಮಹಿಳಾ ಜೆಎಸ್ಎಸ್ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿನಿಯರು ಹತ್ತಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಪೋಕ್ಸೊ ಕಾಯ್ದೆ, ವಾರೆಂಟ್, ಮಕ್ಕಳ ರಕ್ಷಣೆ, ಬಾಲಕಿಯರಿಗೆ ಇರುವ ಸೌಲಭ್ಯಗಳ ಬಗ್ಗೆ ಸಂವಾದ ನಡೆಯಿತು.</p>.<p>ಎಎಸ್ಐ ಚಂದ್ರಶೇಖರ್, ಸಿಬ್ಬಂದಿ ನಾಗೇಂದ್ರ, ಎ ಎಸ್ ಜೆ ಪಿ ಯೂ ಘಟಕದ ಪೊಲೀಸ್ ಕಾನ್ಸ್ಟೆಬಲ್ ಕವಿತಾ ಹಾಗೂ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>