<p><strong>ಗುಡಿಬಂಡೆ</strong>: ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿರುವ ಆಧಾರ್ ಸೇವಾ ಕೇಂದ್ರ ಸುಮಾರು ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡಿದೆ. ಪಟ್ಟಣ ಸೇರಿದಂತೆ ತಾಲ್ಲೂಕಿನ ಜನರು ಸಮಸ್ಯೆ ಎದುರಿಸುವಂತಾಗಿದೆ.</p>.<p>ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ಗೆ ಮೊಬೈಲ್ ನಂಬರ್ ಜೋಡಣೆ ಮಾಡಿಸುವುದು, ಆಧಾರ್ ಅಪ್ಡೇಟ್ ಕಡ್ಡಾಯವಾಗಿದೆ. ಆದರೆ ಗುಡಿಬಂಡೆ ಪಟ್ಟಣದಲ್ಲಿ ಆಧಾರ್ ಸೇವಾ ಕೇಂದ್ರ ಇಲ್ಲದೆ ಜನಸಾಮಾನ್ಯರು ಪರದಾಡುವಂತಾಗಿದೆ.</p>.<p>ದೂರದ ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಅಥವಾ ಗೌರಿಬಿದನೂರು ಕಡೆಗೆ ಜನರು ಹೋಗಬೇಕಾದ ಪರಿಸ್ಥಿತಿ ಇದೆ.</p>.<p>ನಿಯಮದಂತೆ ಈ ಹಿಂದೆ ಎಲ್ಲಾ ನಾಡಕಚೇರಿ, ತಾಲ್ಲೂಕು ಕಚೇರಿ ಅಥವಾ ಅಂಚೆ ಕಚೇರಿಯಲ್ಲಿ ಆಧಾರ್ ಸೇವಾ ಕೇಂದ್ರ ತೆರೆದು ತಿದ್ದುಪಡಿ ಕಾರ್ಯನಡೆಸಬೇಕು. ಆದರೆ ಈಗ ಗುಡಿಬಂಡೆ ಪಟ್ಟಣದಲ್ಲಿ ಆಧಾರ್ ಸೇವಾ ಕೇಂದ್ರ ಸ್ಥಗಿತಗೊಳಿಸಿರುವುದರಿಂದ ಸಮಸ್ಯೆ ಉದ್ಭವಿಸಿದೆ.</p>.<p>ವೃದ್ಧರು, ಅಂಗವಿಕಲರಿಗೆ ತೊಂದರೆ: ಗುಡಿಬಂಡೆ ಕರ್ನಾಟಕ ಗ್ರಾಮೀಣ ಬ್ಯಾಂಕ್, ತಾಲ್ಲೂಕು ಹಾಗೂ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಧಾರ್ ಸೇವಾ ಕೇಂದ್ರ ಸ್ಥಗಿತಗೊಂಡಿರುವುದರಿಂದ ವಯಸ್ಕರು, ಅಂಗವಿಕಲರು ತೊಂದರೆ ಅನುಭವಿಸುವಂತಾಗಿದೆ.</p>.<p>ಆಧಾರ್ ಕಾರ್ಡ್ ಸಮಸ್ಯೆ ಒಂದು ಕಡೆಯಾದರೆ ಇನ್ನೊಂದು ಕಡೆ ಪಡಿತರ ಚೀಟಿ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳನ್ನು ಮಾಡಿಸಲು ಗುಡಿಬಂಡೆಯಲ್ಲಿ ಕರ್ನಾಟಕ ಓನ್ ಕೇಂದ್ರವೂ ಇಲ್ಲ.</p>.<p>ದೂರದ ಹಂಪಸಂದ್ರ, ಉಲ್ಲೋಡು, ವರ್ಲಕೊಂಡ ಗ್ರಾಮ ಓನ್ ಕೇಂದ್ರಗಳಿಗೆ ಹೋಗಬೇಕು. ಕರ್ನಾಟಕ ಓನ್ ಕೇಂದ್ರ ಹಾಗೂ ಆಧಾರ್ ಕಾರ್ಡ್ ಸೇವಾ ಕೇಂದ್ರಗಳನ್ನು ಶೀಘ್ರವಾಗಿ ಪ್ರಾರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುವರು.</p>.<p>ಗುಡಿಬಂಡೆ ಕರ್ನಾಟಕ ಓನ್ ಕೇಂದ್ರವನ್ನು ನಿಯಮಾನುಸಾರ ಸ್ಥಳೀಯ ನಿವಾಸಿಗಳಿಗೆ ನೀಡಬೇಕು. ಆದರೆ ಯಾವುದೇ ಕಂಪ್ಯೂಟರ್ ಕೇಂದ್ರ ಇಲ್ಲದ ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲ್ಲೂಕು ಕಚೇರಿಯ ಆಹಾರ ಶಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರಿಗೆ ಓನ್ ಕೇಂದ್ರ ನೀಡಲಾಗಿದೆ ಎನ್ನುವ ಮಾತಿದೆ.</p>.<p>ಆದರೆ ಇದುವರೆಗೆ ಗುಡಿಬಂಡೆಯಲ್ಲಿ ಕರ್ನಾಟಕ ಓನ್ ಕೇಂದ್ರ ಕಾರ್ಯಾರಂಭವಾಗಿಲ್ಲ. </p>.<p>ಆಧಾರ್ ಹಾಗೂ ಪಡಿತರ ಚೀಟಿ ಮಾಡಿಸಲು ಬೇರೆ ತಾಲ್ಲೂಕಿಗೆ ಹೋದಾಗ ಹೆಚ್ಚಿನ ಜನರಿದ್ದರೆ ಕಾದು-ಕಾದು ವಾಪಸಾಗಬೇಕಾದ ಸ್ಥಿತಿ ಇದೆ. ಕೆಲವೊಮ್ಮೆ ಸರ್ವರ್ ಸಮಸ್ಯೆ ಎದುರಾಗುತ್ತದೆ.</p>.<p>ಇದರಿಂದ ಜನಸಾಮಾನ್ಯರ ಸಮಯ ಹಾಗೂ ಹಣ ಎರಡೂ ಕೂಡ ವ್ಯರ್ಥವಾಗುತ್ತಿದೆ. ಎಲ್ಲ ಬ್ಯಾಂಕ್ ಹಾಗೂ ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಆಧಾರ್ ಅನಿವಾರ್ಯ. </p>.<p>‘ತಾಲ್ಲೂಕು ಕೇಂದ್ರ ಗುಡಿಬಂಡೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಆಧಾರ್ ಕೇಂದ್ರ ಸ್ಥಗಿತವಾಗಿದೆ. ಬಾಗೇಪಲ್ಲಿ, ಚಿಕ್ಕಬಳ್ಳಾಪುರಕ್ಕೆ ಹೋಗಬೇಕಾಗಿದೆ. ಅಲ್ಲಿ ಹೋದರೂ ಕೂಡ ಸರ್ವರ್ ಸಮಸ್ಯೆ ಎದುರಾಗುತ್ತದೆ. ಕೂಡಲೇ ಮೇಲಧಿಕಾರಿಗಳು ಎಚ್ಚೆತ್ತು ಸಮಸ್ಯೆ ಬಗೆಹರಿಸಬೇಕು ಎಂದು ಪಟ್ಟಣದ ಗೋಪಿ ಆಗ್ರಹಿಸುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಡಿಬಂಡೆ</strong>: ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿರುವ ಆಧಾರ್ ಸೇವಾ ಕೇಂದ್ರ ಸುಮಾರು ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡಿದೆ. ಪಟ್ಟಣ ಸೇರಿದಂತೆ ತಾಲ್ಲೂಕಿನ ಜನರು ಸಮಸ್ಯೆ ಎದುರಿಸುವಂತಾಗಿದೆ.</p>.<p>ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ಗೆ ಮೊಬೈಲ್ ನಂಬರ್ ಜೋಡಣೆ ಮಾಡಿಸುವುದು, ಆಧಾರ್ ಅಪ್ಡೇಟ್ ಕಡ್ಡಾಯವಾಗಿದೆ. ಆದರೆ ಗುಡಿಬಂಡೆ ಪಟ್ಟಣದಲ್ಲಿ ಆಧಾರ್ ಸೇವಾ ಕೇಂದ್ರ ಇಲ್ಲದೆ ಜನಸಾಮಾನ್ಯರು ಪರದಾಡುವಂತಾಗಿದೆ.</p>.<p>ದೂರದ ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಅಥವಾ ಗೌರಿಬಿದನೂರು ಕಡೆಗೆ ಜನರು ಹೋಗಬೇಕಾದ ಪರಿಸ್ಥಿತಿ ಇದೆ.</p>.<p>ನಿಯಮದಂತೆ ಈ ಹಿಂದೆ ಎಲ್ಲಾ ನಾಡಕಚೇರಿ, ತಾಲ್ಲೂಕು ಕಚೇರಿ ಅಥವಾ ಅಂಚೆ ಕಚೇರಿಯಲ್ಲಿ ಆಧಾರ್ ಸೇವಾ ಕೇಂದ್ರ ತೆರೆದು ತಿದ್ದುಪಡಿ ಕಾರ್ಯನಡೆಸಬೇಕು. ಆದರೆ ಈಗ ಗುಡಿಬಂಡೆ ಪಟ್ಟಣದಲ್ಲಿ ಆಧಾರ್ ಸೇವಾ ಕೇಂದ್ರ ಸ್ಥಗಿತಗೊಳಿಸಿರುವುದರಿಂದ ಸಮಸ್ಯೆ ಉದ್ಭವಿಸಿದೆ.</p>.<p>ವೃದ್ಧರು, ಅಂಗವಿಕಲರಿಗೆ ತೊಂದರೆ: ಗುಡಿಬಂಡೆ ಕರ್ನಾಟಕ ಗ್ರಾಮೀಣ ಬ್ಯಾಂಕ್, ತಾಲ್ಲೂಕು ಹಾಗೂ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಧಾರ್ ಸೇವಾ ಕೇಂದ್ರ ಸ್ಥಗಿತಗೊಂಡಿರುವುದರಿಂದ ವಯಸ್ಕರು, ಅಂಗವಿಕಲರು ತೊಂದರೆ ಅನುಭವಿಸುವಂತಾಗಿದೆ.</p>.<p>ಆಧಾರ್ ಕಾರ್ಡ್ ಸಮಸ್ಯೆ ಒಂದು ಕಡೆಯಾದರೆ ಇನ್ನೊಂದು ಕಡೆ ಪಡಿತರ ಚೀಟಿ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳನ್ನು ಮಾಡಿಸಲು ಗುಡಿಬಂಡೆಯಲ್ಲಿ ಕರ್ನಾಟಕ ಓನ್ ಕೇಂದ್ರವೂ ಇಲ್ಲ.</p>.<p>ದೂರದ ಹಂಪಸಂದ್ರ, ಉಲ್ಲೋಡು, ವರ್ಲಕೊಂಡ ಗ್ರಾಮ ಓನ್ ಕೇಂದ್ರಗಳಿಗೆ ಹೋಗಬೇಕು. ಕರ್ನಾಟಕ ಓನ್ ಕೇಂದ್ರ ಹಾಗೂ ಆಧಾರ್ ಕಾರ್ಡ್ ಸೇವಾ ಕೇಂದ್ರಗಳನ್ನು ಶೀಘ್ರವಾಗಿ ಪ್ರಾರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುವರು.</p>.<p>ಗುಡಿಬಂಡೆ ಕರ್ನಾಟಕ ಓನ್ ಕೇಂದ್ರವನ್ನು ನಿಯಮಾನುಸಾರ ಸ್ಥಳೀಯ ನಿವಾಸಿಗಳಿಗೆ ನೀಡಬೇಕು. ಆದರೆ ಯಾವುದೇ ಕಂಪ್ಯೂಟರ್ ಕೇಂದ್ರ ಇಲ್ಲದ ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲ್ಲೂಕು ಕಚೇರಿಯ ಆಹಾರ ಶಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರಿಗೆ ಓನ್ ಕೇಂದ್ರ ನೀಡಲಾಗಿದೆ ಎನ್ನುವ ಮಾತಿದೆ.</p>.<p>ಆದರೆ ಇದುವರೆಗೆ ಗುಡಿಬಂಡೆಯಲ್ಲಿ ಕರ್ನಾಟಕ ಓನ್ ಕೇಂದ್ರ ಕಾರ್ಯಾರಂಭವಾಗಿಲ್ಲ. </p>.<p>ಆಧಾರ್ ಹಾಗೂ ಪಡಿತರ ಚೀಟಿ ಮಾಡಿಸಲು ಬೇರೆ ತಾಲ್ಲೂಕಿಗೆ ಹೋದಾಗ ಹೆಚ್ಚಿನ ಜನರಿದ್ದರೆ ಕಾದು-ಕಾದು ವಾಪಸಾಗಬೇಕಾದ ಸ್ಥಿತಿ ಇದೆ. ಕೆಲವೊಮ್ಮೆ ಸರ್ವರ್ ಸಮಸ್ಯೆ ಎದುರಾಗುತ್ತದೆ.</p>.<p>ಇದರಿಂದ ಜನಸಾಮಾನ್ಯರ ಸಮಯ ಹಾಗೂ ಹಣ ಎರಡೂ ಕೂಡ ವ್ಯರ್ಥವಾಗುತ್ತಿದೆ. ಎಲ್ಲ ಬ್ಯಾಂಕ್ ಹಾಗೂ ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಆಧಾರ್ ಅನಿವಾರ್ಯ. </p>.<p>‘ತಾಲ್ಲೂಕು ಕೇಂದ್ರ ಗುಡಿಬಂಡೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಆಧಾರ್ ಕೇಂದ್ರ ಸ್ಥಗಿತವಾಗಿದೆ. ಬಾಗೇಪಲ್ಲಿ, ಚಿಕ್ಕಬಳ್ಳಾಪುರಕ್ಕೆ ಹೋಗಬೇಕಾಗಿದೆ. ಅಲ್ಲಿ ಹೋದರೂ ಕೂಡ ಸರ್ವರ್ ಸಮಸ್ಯೆ ಎದುರಾಗುತ್ತದೆ. ಕೂಡಲೇ ಮೇಲಧಿಕಾರಿಗಳು ಎಚ್ಚೆತ್ತು ಸಮಸ್ಯೆ ಬಗೆಹರಿಸಬೇಕು ಎಂದು ಪಟ್ಟಣದ ಗೋಪಿ ಆಗ್ರಹಿಸುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>