ದೊಡ್ಡಿವಾರಿಪಲ್ಲಿ ಗ್ರಾಮದ ವ್ಯಕ್ತಿಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಕ್ಲಾವಿಕಲ್ ಮೂಳೆಯ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ಮಾಡಿಸಲು ಸುದರ್ಶನ್ ₹ 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಪೈಕಿ ಮುಂಗಡವಾಗಿ ₹ 3 ಸಾವಿರ ಪಡೆದಿದ್ದಾರೆ. ಉಳಿದ ಹಣ ಪಡೆಯುವ ವೇಳೆಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಉಪಾಧೀಕ್ಷಕ ಪ್ರವೀಣ್ ಹಾಗೂ ತಂಡ ದಾಳಿ ನಡೆಸಿದೆ.