<p>ಪಾತಪಾಳ್ಯ: ‘ದೇಶದ ಒಳಿತಿಗಾಗಿ ಮುಸ್ಲಿಂ ಬಾಂಧವರಿಂದ ನಡೆಯುತ್ತಿರುವ ಖವ್ವಾಲಿ ಸಂಸ್ಕೃತಿ ಮತ್ತಷ್ಟು ಬೆಳೆಯಬೇಕು’ ಎಂದು ಬಾಗೇಪಲ್ಲಿಯ ಡಾ.ಅನಿಲ್ ಕುಮಾರ್ ಹೇಳಿದರು.</p>.<p>ಪಾತಪಾಳ್ಯ ಹೋಬಳಿಯ ನಾರೇಮದ್ದೇಪಲ್ಲಿ ಗ್ರಾಮದಲ್ಲಿ ಹಿಂದೂ- ಮುಸ್ಲಿಂಮರ ಏಕತೆಗೆ ಶ್ರಮಿಸಿದ ಅವಧೂತ ಸಯ್ಯದ್ ಮಹಬೂಬ್ ಷಾ ಖಾದ್ರಿ ಕಾಮಸಾನ್ ಪಲ್ಲಿ (ಮುರ್ಕ್ಷಿದ್) ಪ್ರೇರಣೆಯಿಂದ ಹಜರತ್ ಮಜಬುಬ್ ಸುಬಹಾನಿ (ರ.ಅ.ಸೊ) ಗ್ಯಾರಿ ಶರೀಫ್ 10ನೇ ಉರುಸ್ ಅಂಗವಾಗಿ ಏರ್ಪಡಿಸಿದ್ದ ಗಂಧೋತ್ಸವದಲ್ಲಿ ಅವರು ಮಾತನಾಡಿದರು.</p>.<p>ಭಾರತ ಭಿನ್ನ ಸಂಸ್ಕೃತಿ ಮತ್ತು ಧರ್ಮಗಳ ತವರೂರು. ಯಾವುದೇ ಧರ್ಮದವರು ಮಾಡುವ ಆಚರಣೆಗಳು ದೇಶದ ಹಿತ ಮತ್ತು ಜನರ ಒಳಿತನ್ನು ಬಯಸುತ್ತವೆ. ಎಲ್ಲಾ ಧರ್ಮಗಳ ಸಂಸ್ಕೃತಿ ಮತ್ತು ಆಚರಣೆಯನ್ನು ಪ್ರತಿಯೊಬ್ಬರು ಗೌರವಿಸಿ ಬೆಳೆಸಬೇಕು ಎಂದರು.</p>.<p>ಜೋಟಿ ಶಬ್ನಂ ಕೊಲಾಪುರ ಮತ್ತು ಹಬ್ಬಳಿ ಶಹಬಾಜ್ದ್ ರಾಜ್ ಚಿಷ್ಠಿ ಜುಗಲ್ ತಂಡಗಳು ಸೆಣಸಾಟಕ್ಕೆ ಇಳಿದಂತೆ ಹಾಡುಗಾರಿಕೆ ನಡೆಸಿಕೊಟ್ಟವು. ಹಜರತ್ ಇಮಾಮ್ ಸಾಬ್, ಪೊಲೀಸ್ ಮಹಬೂಬ್ ಬಾಷಾ, ಎನ್.ಎಫ್. ಇನಾಯತ್ ಉಲ್ಲಾ, ಎನ್.ಎಂ. ಮಬ್ಬಾಷ , ಅನ್ವರ್ ಸಾಬ್, ಹಮೀದ್ ಸಾಬ್, ಟಿಪಿಎಸ್ ಮಾಜಿ ಅಧ್ಯಕ್ಷೆ ಸುಜಾತಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಪ್ರಶಾಂತ್, ಪಾಪಿರೆಡ್ಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಾತಪಾಳ್ಯ: ‘ದೇಶದ ಒಳಿತಿಗಾಗಿ ಮುಸ್ಲಿಂ ಬಾಂಧವರಿಂದ ನಡೆಯುತ್ತಿರುವ ಖವ್ವಾಲಿ ಸಂಸ್ಕೃತಿ ಮತ್ತಷ್ಟು ಬೆಳೆಯಬೇಕು’ ಎಂದು ಬಾಗೇಪಲ್ಲಿಯ ಡಾ.ಅನಿಲ್ ಕುಮಾರ್ ಹೇಳಿದರು.</p>.<p>ಪಾತಪಾಳ್ಯ ಹೋಬಳಿಯ ನಾರೇಮದ್ದೇಪಲ್ಲಿ ಗ್ರಾಮದಲ್ಲಿ ಹಿಂದೂ- ಮುಸ್ಲಿಂಮರ ಏಕತೆಗೆ ಶ್ರಮಿಸಿದ ಅವಧೂತ ಸಯ್ಯದ್ ಮಹಬೂಬ್ ಷಾ ಖಾದ್ರಿ ಕಾಮಸಾನ್ ಪಲ್ಲಿ (ಮುರ್ಕ್ಷಿದ್) ಪ್ರೇರಣೆಯಿಂದ ಹಜರತ್ ಮಜಬುಬ್ ಸುಬಹಾನಿ (ರ.ಅ.ಸೊ) ಗ್ಯಾರಿ ಶರೀಫ್ 10ನೇ ಉರುಸ್ ಅಂಗವಾಗಿ ಏರ್ಪಡಿಸಿದ್ದ ಗಂಧೋತ್ಸವದಲ್ಲಿ ಅವರು ಮಾತನಾಡಿದರು.</p>.<p>ಭಾರತ ಭಿನ್ನ ಸಂಸ್ಕೃತಿ ಮತ್ತು ಧರ್ಮಗಳ ತವರೂರು. ಯಾವುದೇ ಧರ್ಮದವರು ಮಾಡುವ ಆಚರಣೆಗಳು ದೇಶದ ಹಿತ ಮತ್ತು ಜನರ ಒಳಿತನ್ನು ಬಯಸುತ್ತವೆ. ಎಲ್ಲಾ ಧರ್ಮಗಳ ಸಂಸ್ಕೃತಿ ಮತ್ತು ಆಚರಣೆಯನ್ನು ಪ್ರತಿಯೊಬ್ಬರು ಗೌರವಿಸಿ ಬೆಳೆಸಬೇಕು ಎಂದರು.</p>.<p>ಜೋಟಿ ಶಬ್ನಂ ಕೊಲಾಪುರ ಮತ್ತು ಹಬ್ಬಳಿ ಶಹಬಾಜ್ದ್ ರಾಜ್ ಚಿಷ್ಠಿ ಜುಗಲ್ ತಂಡಗಳು ಸೆಣಸಾಟಕ್ಕೆ ಇಳಿದಂತೆ ಹಾಡುಗಾರಿಕೆ ನಡೆಸಿಕೊಟ್ಟವು. ಹಜರತ್ ಇಮಾಮ್ ಸಾಬ್, ಪೊಲೀಸ್ ಮಹಬೂಬ್ ಬಾಷಾ, ಎನ್.ಎಫ್. ಇನಾಯತ್ ಉಲ್ಲಾ, ಎನ್.ಎಂ. ಮಬ್ಬಾಷ , ಅನ್ವರ್ ಸಾಬ್, ಹಮೀದ್ ಸಾಬ್, ಟಿಪಿಎಸ್ ಮಾಜಿ ಅಧ್ಯಕ್ಷೆ ಸುಜಾತಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಪ್ರಶಾಂತ್, ಪಾಪಿರೆಡ್ಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>