ಅವಿಭಜಿತ ಕೋಲಾರ ಜಿಲ್ಲೆಯ ಜನರು ನೀರಿನ ಕೊರತೆ, ಅಂತರ್ಜಲ ಕೊರತೆ ಸಮಸ್ಯೆ ನಿವಾರಣೆಗಾಗಿ ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ ಇಲಾಖೆಗಳಿಂದ ಈಗಾಗಲೇ ಕೃಷಿ ಹೊಂಡಗಳು, ಇಂಗು ಗುಂಡಿ, ಚೆಕ್ ಡ್ಯಾಂ, ಬದುಗಳ ನಿರ್ಮಾಣ ಮುಂತಾದ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಅಟಲ್ ಭೂಜಲ ಯೋಜನೆಯಿಂದ ಮತ್ತಷ್ಟು ಬಲ ಬರುತ್ತದೆ. ಯೋಜನೆಯನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.