ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಬಾಗೇಪಲ್ಲಿ | ಬಾಗೇಪಲ್ಲಿ ದಾಹ ನೀಗುವುದೇ ಕೃಷ್ಣಾ ನದಿ ನೀರು

ಆಂಧ್ರಪ್ರದೇಶದ ಕುಪ್ಪಂಗೆ ಹರಿದ ಕೃಷ್ಣಾ ನದಿ ನೀರು ತಾಲ್ಲೂಕಿಗೂ ಹರಿಸಲು ಒತ್ತಾಯ
Published : 3 ಸೆಪ್ಟೆಂಬರ್ 2025, 5:32 IST
Last Updated : 3 ಸೆಪ್ಟೆಂಬರ್ 2025, 5:32 IST
ಫಾಲೋ ಮಾಡಿ
Comments
ಆಂಧ್ರದ ಜತೆ ಸರ್ಕಾರ ಚರ್ಚಿಸಲಿ
ಬಯಲುಸೀಮೆ ಬಾಗೇಪಲ್ಲಿಗೆ ಕೃಷ್ಣಾ ನದಿ ನೀರಿನ ಪಾಲನ್ನು ಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಆಂಧ್ರಪ್ರದೇಶ ಸರ್ಕಾರದ ಜೊತೆ ಚರ್ಚೆ ಮಾಡಬೇಕು. ಆಂಧ್ರಪ್ರದೇಶದ ದೇಮೆಕೇತೆಪಲ್ಲಿ ಗ್ರಾಮದ ಕಾಲುವೆಯಿಂದ ಬಯಲುಸೀಮೆ ತಾಲ್ಲೂಕುಗಳಿಗೆ ಕೃಷ್ಣಾ ನದಿಯ ನೀರು ಹರಿಸಬೇಕು ಎಂದು ಪ್ರಗತಿಪರ ರೈತ ಸೋಮಶೇಖರರೆಡ್ಡಿ ಸರ್ಕಾರಕ್ಕೆ ಒತ್ತಾಯಿಸಿದರು.  250 ಕಿ.ಮೀ. ದೂರದಲ್ಲಿರುವ ಕೃಷ್ಣಾ ನದಿಯಿಂದ ಕುಪ್ಪುಂಗೆ ನೀರು ಹರಿಸುವುದು ಆಂಧ್ರಪ್ರದೇಶ ಸರ್ಕಾರಕ್ಕೆ ಸಾಧ್ಯವಿರುವಾಗ ರಾಜ್ಯ ಸರ್ಕಾರಕ್ಕೆ ಈ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಿಲ್ಲ ಏಕೆ ಎಂದು ಶಾಶ್ವತ ನೀರಾವರಿ ಹೋರಾಟಗಾರ ಡಾ. ಅನಿಲ್ ಕುಮಾರ್ ಪ್ರಶ್ನಿಸಿದರು.  ಅತ್ಯಂತ ಕಡಿಮೆ ವೆಚ್ಚ ಮತ್ತು ಅವಧಿಯಲ್ಲಿ ತಾಲ್ಲೂಕಿಗೆ ಕೃಷ್ಣೆಯನ್ನು ಹರಿಸಲು ಸಾಧ್ಯವಿದೆ ಎಂದು ಅವರು ಪ್ರತಿಪಾದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT