<p><strong>ಬಾಗೇಪಲ್ಲಿ:</strong> ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿ ಮೂಲಕ ಪ್ರಶಾಂತಿ ನಿಲಯಕ್ಕೆ ರೈಲು ಮಾರ್ಗದ ಕಾಮಗಾರಿಯನ್ನು ಶೀಘ್ರವೇ ಘೋಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಪದಾಧಿಕಾರಿಗಳು ಬುಧವಾರ ರಾತ್ರಿ ಸಾರಿಗೆ ಬಸ್ ನಿಲ್ದಾಣದಲ್ಲಿ ಪಂಜಿನ ಮೆರವಣಿಗೆ ನಡೆಸಿದರು. </p><p>ಪಟ್ಟಣದ ಡಾ.ಎಚ್.ಎನ್.ವೃತ್ತದಿಂದ ಹೊರಟ ಪ್ರತಿಭಟನಾಕಾರರು ಡಿವಿಜಿ ಮುಖ್ಯ ರಸ್ತೆಯಲ್ಲಿ ಬೈಕ್ ರ್ಯಾಲಿ ಮಾಡಿದರು.</p><p>ಕರವೇ ತಾಲ್ಲೂಕು ಅಧ್ಯಕ್ಷ ಕೆ.ಎನ್.ಹರೀಶ್ ಮಾತನಾಡಿ, 2009 ರಲ್ಲಿ ಪುಟ್ಟಪರ್ತಿಯಿಂದ ಚಿಕ್ಕಬಳ್ಳಾಪುರ ರೈಲು ಯೋಜನೆ ಘೋಷಣೆ ಆಗಿದೆ. ಸರ್ವೆ ಕಾರ್ಯ ಮುಗಿದಿದೆ. ನಂತರ ರೈಲು ಕಾಮಗಾರಿ ಇದುವರಿಗೂ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಭಾಗದ ಜನರಿಗೆ ರೈಲು ಸೇವೆ ಮಾಡಿಲ್ಲ. ಕೇಂದ್ರ ಬಜೆಟ್ ನಲ್ಲಿ ಈ ಯೋಜನೆ ಬಗ್ಗೆ ಮಾತನಾಡಿಲ್ಲ. ಸಂಸದ ಡಾ.ಸುಧಾಕರ್ ಈ ರೈಲು ಯೋಜನೆ ಬಗ್ಗೆ ಮಾತಾಡಿಲ್ಲ ಎಂದು ಆರೋಪಿಸಿದರು.</p><p>ನಮ್ಮನ್ನ ಆಳ್ವಿಕೆ ಮಾಡುವ ಸರ್ಕಾರಗಳು ಪದೇಪದೇ ಜನರನ್ನ ವಂಚನೆ ಮಾಡುತ್ತಿವೆ. ಈ ಭಾಗದ ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ ಆಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚಿಕ್ಕಬಳ್ಳಾಪುರಕ್ಕೆ ಘೋಷಣೆ ಆಗಿರುವಂತ ರೈಲ್ವೆ ಯೋಜನೆಯನ್ನ ಈ ಕೂಡಲೇ ಅನುಷ್ಠಾನಕ್ಕೆ ತರಬೇಕು. ಈ ಭಾಗದ ಆಂಧ್ರಪ್ರದೇಶ ಮತ್ತು ಸ್ಥಳೀಯ ಕೂಲಿ ಕಾರ್ಮಿಕರಿಗೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ರೈಲು ಯೋಜನೆಯನ್ನು ಜಾರಿ ಮಾಡಿ, ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.</p><p>ಜಿಲ್ಲಾ ಮಹಿಳಾ ಅಧ್ಯಕ್ಷೆ ಸುಜಾತಮ್ಮ ತಾಲೂಕು ಉಪಾಧ್ಯಕ್ಷ ಅಲೀಮ್ , ಚಿನ್ನು , ಶಂಕರ್ , ರಘು ಕೆ , ಮಂಜುನಾಥ್ , ರಾಧಿಕ , ಗಣೇಶ್, ಜಿಲ್ಲಾ ಸಂಚಾಲಕ ನರಸಿಂಹ ಮೂರ್ತಿ , ವಿದ್ಯಾರ್ಥಿ ಘಟಕದ ಗಂಗರಾಜು , ರಾಮಾಂಜಿ , ಕೃಷ್ಣಪ್ಪ , ನಾರಾಯಣ ಸ್ವಾಮಿ , ಶಾಂತ ಕುಮಾರ್ , ಜಾನಿ , ಬಾಬಾ ಮತ್ತಿತರರು ಇದ್ದರು.</p>
<p><strong>ಬಾಗೇಪಲ್ಲಿ:</strong> ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿ ಮೂಲಕ ಪ್ರಶಾಂತಿ ನಿಲಯಕ್ಕೆ ರೈಲು ಮಾರ್ಗದ ಕಾಮಗಾರಿಯನ್ನು ಶೀಘ್ರವೇ ಘೋಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಪದಾಧಿಕಾರಿಗಳು ಬುಧವಾರ ರಾತ್ರಿ ಸಾರಿಗೆ ಬಸ್ ನಿಲ್ದಾಣದಲ್ಲಿ ಪಂಜಿನ ಮೆರವಣಿಗೆ ನಡೆಸಿದರು. </p><p>ಪಟ್ಟಣದ ಡಾ.ಎಚ್.ಎನ್.ವೃತ್ತದಿಂದ ಹೊರಟ ಪ್ರತಿಭಟನಾಕಾರರು ಡಿವಿಜಿ ಮುಖ್ಯ ರಸ್ತೆಯಲ್ಲಿ ಬೈಕ್ ರ್ಯಾಲಿ ಮಾಡಿದರು.</p><p>ಕರವೇ ತಾಲ್ಲೂಕು ಅಧ್ಯಕ್ಷ ಕೆ.ಎನ್.ಹರೀಶ್ ಮಾತನಾಡಿ, 2009 ರಲ್ಲಿ ಪುಟ್ಟಪರ್ತಿಯಿಂದ ಚಿಕ್ಕಬಳ್ಳಾಪುರ ರೈಲು ಯೋಜನೆ ಘೋಷಣೆ ಆಗಿದೆ. ಸರ್ವೆ ಕಾರ್ಯ ಮುಗಿದಿದೆ. ನಂತರ ರೈಲು ಕಾಮಗಾರಿ ಇದುವರಿಗೂ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಭಾಗದ ಜನರಿಗೆ ರೈಲು ಸೇವೆ ಮಾಡಿಲ್ಲ. ಕೇಂದ್ರ ಬಜೆಟ್ ನಲ್ಲಿ ಈ ಯೋಜನೆ ಬಗ್ಗೆ ಮಾತನಾಡಿಲ್ಲ. ಸಂಸದ ಡಾ.ಸುಧಾಕರ್ ಈ ರೈಲು ಯೋಜನೆ ಬಗ್ಗೆ ಮಾತಾಡಿಲ್ಲ ಎಂದು ಆರೋಪಿಸಿದರು.</p><p>ನಮ್ಮನ್ನ ಆಳ್ವಿಕೆ ಮಾಡುವ ಸರ್ಕಾರಗಳು ಪದೇಪದೇ ಜನರನ್ನ ವಂಚನೆ ಮಾಡುತ್ತಿವೆ. ಈ ಭಾಗದ ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ ಆಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚಿಕ್ಕಬಳ್ಳಾಪುರಕ್ಕೆ ಘೋಷಣೆ ಆಗಿರುವಂತ ರೈಲ್ವೆ ಯೋಜನೆಯನ್ನ ಈ ಕೂಡಲೇ ಅನುಷ್ಠಾನಕ್ಕೆ ತರಬೇಕು. ಈ ಭಾಗದ ಆಂಧ್ರಪ್ರದೇಶ ಮತ್ತು ಸ್ಥಳೀಯ ಕೂಲಿ ಕಾರ್ಮಿಕರಿಗೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ರೈಲು ಯೋಜನೆಯನ್ನು ಜಾರಿ ಮಾಡಿ, ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.</p><p>ಜಿಲ್ಲಾ ಮಹಿಳಾ ಅಧ್ಯಕ್ಷೆ ಸುಜಾತಮ್ಮ ತಾಲೂಕು ಉಪಾಧ್ಯಕ್ಷ ಅಲೀಮ್ , ಚಿನ್ನು , ಶಂಕರ್ , ರಘು ಕೆ , ಮಂಜುನಾಥ್ , ರಾಧಿಕ , ಗಣೇಶ್, ಜಿಲ್ಲಾ ಸಂಚಾಲಕ ನರಸಿಂಹ ಮೂರ್ತಿ , ವಿದ್ಯಾರ್ಥಿ ಘಟಕದ ಗಂಗರಾಜು , ರಾಮಾಂಜಿ , ಕೃಷ್ಣಪ್ಪ , ನಾರಾಯಣ ಸ್ವಾಮಿ , ಶಾಂತ ಕುಮಾರ್ , ಜಾನಿ , ಬಾಬಾ ಮತ್ತಿತರರು ಇದ್ದರು.</p>