ಆರೋಪಿಗಳು ಗ್ರಾಮದಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿದ್ದರು. ರಾತ್ರಿ ಬಾಗಿಲು ಮುಚ್ಚಿದ್ದ ಸಮಯದಲ್ಲಿ ದೂರುದಾರ ಲಕ್ಷ್ಮೀನಾರಾಯಣ ಅಂಗಡಿ ತೆಗೆದು ಬೀಡಿ, ಬೆಂಕಿ ಪೊಟ್ಟಣ ನೀಡುವಂತೆ ಒತ್ತಾಯಿಸಿದ್ದನು. ಬಾಗಿಲು ತೆಗೆಯುವುದಿಲ್ಲ ಎಂದು ಗಲಾಟೆಯಾಗಿ ಆರೋಪಿಗಳು ಲಕ್ಷ್ಮೀನಾರಾಯಣ ಅವರನ್ನು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಲಕ್ಷ್ಮೀನಾರಾಯಣ ಚಿಂತಾಮಣಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.