<p><strong>ಚೇಳೂರು:</strong> ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್ಎಚ್ಡಿಪಿ) ಅಡಿಯಲ್ಲಿ ₹20 ಕೋಟಿ ಅನುದಾನದಲ್ಲಿ ಚೇಳೂರಿನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಮತ್ತು ಭೂಮಿಪೂಜೆಯನ್ನು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಭಾನುವಾರ ನೆರವೇರಿಸಿದರು.</p>.<p>‘ಬಾಗೇಪಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿನ ಜನರು ಗ್ರಾಮೀಣ ಪ್ರದೇಶದಲ್ಲಿನ ಹದಗೆಟ್ಟಿರುವ ರಸ್ತೆಗಳ ಬಗ್ಗೆ ತಿಳಿಸಿದ್ದರು. ಮುಂದಿನ ಆರು ತಿಂಗಳೊಳಗೆ ಚೇಳೂರು ತಾಲ್ಲೂಕಿನಲ್ಲಿ ರಸ್ತೆಗಳು ಟಾರ್ ರಸ್ತೆಗಳಾಗಿ ಕಾಣುತ್ತವೆ. ತಾಲ್ಲೂಕಿಗೆ ಮುಂದಿನ ವರ್ಷದಲ್ಲಿ ಪ್ರಜಾಸೌಧ ಮಂಜೂರಾತಿ ಮಾಡಿಸಿಕೊಡಿಸಲು ಮುಖ್ಯಮಂತ್ರಿ ಆಶ್ವಾಸನೆ ನೀಡಿದ್ದಾರೆ’ ಎಂದರು.</p>.<p>ಚೇಳೂರಿನಿಂದ-ಚಿಲಕಲನೇರ್ಪು ತನಕ ₹10 ಕೋಟಿ ವೆಚ್ಚದ ರಸ್ತೆ ಉದ್ಘಾಟನೆ ಮಾಡಲಾಯಿತು. ₹10 ಕೋಟಿ ವೆಚ್ಚದ ಚೇಳೂರಿನಿಂದ-ಷೇರ್ಖಾನ್ಕೋಟೆ ರಸ್ತೆಗೆ ಭೂಮಿಪೂಜೆ ನೆರವೇರಿಸಲಾಯಿತು. </p>.<p>‘ಚೇಳೂರು ತಾಲ್ಲೂಕಿನ 17 ಕಂದಾಯ ವೃತ್ತ ಗ್ರಾಮಗಳ ನೊಂದಣಿ ಸ್ಥಗಿತಗೊಂಡಿದ್ದು ಶೀಘ್ರವೇ ನೊಂದಣಿ ಪ್ರಕ್ರಿಯೆಗೆ ಅನುಕೂಲ ಮಾಡುತ್ತೇನೆ’ ಎಂದರು.</p>.<p>ತಹಶೀಲ್ದಾರ್ ಎ.ವಿ.ಶ್ರೀನಿವಾಸಲು ನಾಯುಡು, ಲೋಕೊಪಯೋಗಿ ಇಲಾಖೆ ಎ.ಇ.ಪ್ರದೀಪ್, ಈಶ್ವರ್ ಎಂ.ಎನ್, ಕೌಸ್ತರ್, ಕೆ.ವೆಂಕಟಾಚಲಪತಿ, ಪಿ.ಆರ್.ಚಲಂ, ರಾಮಾಂಜನೇಯರೆಡ್ಡಿ, ಕಡ್ಡೀಲು ವೆಂಕಟರಮಣ, ಕೆ.ಸಹದೇವರೆಡ್ಡಿ, ಜೆಎನ್ ಜಾಲಾರಿ, ಸುರೇಂದ್ರ, ಸಾಹುಕಾರ ಶ್ರೀನಿವಾಸ ರೆಡ್ಡಿ, ಕೆ.ಜಿ.ವೆಂಕಟರಮಣ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೇಳೂರು:</strong> ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್ಎಚ್ಡಿಪಿ) ಅಡಿಯಲ್ಲಿ ₹20 ಕೋಟಿ ಅನುದಾನದಲ್ಲಿ ಚೇಳೂರಿನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಮತ್ತು ಭೂಮಿಪೂಜೆಯನ್ನು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಭಾನುವಾರ ನೆರವೇರಿಸಿದರು.</p>.<p>‘ಬಾಗೇಪಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿನ ಜನರು ಗ್ರಾಮೀಣ ಪ್ರದೇಶದಲ್ಲಿನ ಹದಗೆಟ್ಟಿರುವ ರಸ್ತೆಗಳ ಬಗ್ಗೆ ತಿಳಿಸಿದ್ದರು. ಮುಂದಿನ ಆರು ತಿಂಗಳೊಳಗೆ ಚೇಳೂರು ತಾಲ್ಲೂಕಿನಲ್ಲಿ ರಸ್ತೆಗಳು ಟಾರ್ ರಸ್ತೆಗಳಾಗಿ ಕಾಣುತ್ತವೆ. ತಾಲ್ಲೂಕಿಗೆ ಮುಂದಿನ ವರ್ಷದಲ್ಲಿ ಪ್ರಜಾಸೌಧ ಮಂಜೂರಾತಿ ಮಾಡಿಸಿಕೊಡಿಸಲು ಮುಖ್ಯಮಂತ್ರಿ ಆಶ್ವಾಸನೆ ನೀಡಿದ್ದಾರೆ’ ಎಂದರು.</p>.<p>ಚೇಳೂರಿನಿಂದ-ಚಿಲಕಲನೇರ್ಪು ತನಕ ₹10 ಕೋಟಿ ವೆಚ್ಚದ ರಸ್ತೆ ಉದ್ಘಾಟನೆ ಮಾಡಲಾಯಿತು. ₹10 ಕೋಟಿ ವೆಚ್ಚದ ಚೇಳೂರಿನಿಂದ-ಷೇರ್ಖಾನ್ಕೋಟೆ ರಸ್ತೆಗೆ ಭೂಮಿಪೂಜೆ ನೆರವೇರಿಸಲಾಯಿತು. </p>.<p>‘ಚೇಳೂರು ತಾಲ್ಲೂಕಿನ 17 ಕಂದಾಯ ವೃತ್ತ ಗ್ರಾಮಗಳ ನೊಂದಣಿ ಸ್ಥಗಿತಗೊಂಡಿದ್ದು ಶೀಘ್ರವೇ ನೊಂದಣಿ ಪ್ರಕ್ರಿಯೆಗೆ ಅನುಕೂಲ ಮಾಡುತ್ತೇನೆ’ ಎಂದರು.</p>.<p>ತಹಶೀಲ್ದಾರ್ ಎ.ವಿ.ಶ್ರೀನಿವಾಸಲು ನಾಯುಡು, ಲೋಕೊಪಯೋಗಿ ಇಲಾಖೆ ಎ.ಇ.ಪ್ರದೀಪ್, ಈಶ್ವರ್ ಎಂ.ಎನ್, ಕೌಸ್ತರ್, ಕೆ.ವೆಂಕಟಾಚಲಪತಿ, ಪಿ.ಆರ್.ಚಲಂ, ರಾಮಾಂಜನೇಯರೆಡ್ಡಿ, ಕಡ್ಡೀಲು ವೆಂಕಟರಮಣ, ಕೆ.ಸಹದೇವರೆಡ್ಡಿ, ಜೆಎನ್ ಜಾಲಾರಿ, ಸುರೇಂದ್ರ, ಸಾಹುಕಾರ ಶ್ರೀನಿವಾಸ ರೆಡ್ಡಿ, ಕೆ.ಜಿ.ವೆಂಕಟರಮಣ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>