ಗ್ರಾಮದ ಪರಿಶಿಷ್ಟ ಜಾತಿಯ ವೆಂಕಟರವಣಮ್ಮ ಅವರಿಗೆ ಷೇರ್ಖಾನ್ ಕೋಟೆ ಗ್ರಾಮದಲ್ಲಿ ಸರ್ಕಾರಿ ಜಮೀನು ಮಂಜೂರಾಗಿದೆ. ಇದೇ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದು, ಹಳೆ ದ್ವೇಷದ ಹಿನ್ನೆಲೆಯಲ್ಲಿ ಗ್ರಾಮದ ಪಿ.ಎ.ಮುರಳಿಕೃಷ್ಣ, ಜಿ.ಲೋಕೇಶ, ಆಂಜನೇಯಪ್ಪ, ನಾರಾಯಣಮ್ಮ ಸೇರಿದಂತೆ ಇತರರು ದೌರ್ಜನ್ಯ ನಡಸಿದ್ದಾರೆ. ₹60 ಸಾವಿರ ಬೆಲೆ ಬಾಳುವ ಮುಸುಕಿನ ಜೋಳ, ತೆಂಗಿನ ಮರಕ್ಕೆ ಬೆಂಕಿ ಹಾಕಿ ನಾಶ ಮಾಡಿದ್ದಾರೆ ಎಂದು ವೆಂಕಟರವಣಮ್ಮ ದೂರಿನಲ್ಲಿ ತಿಳಿಸಿದ್ದಾರೆ.