<p><strong>ಚಿಕ್ಕಬಳ್ಳಾಪುರ</strong>: ಜಿಲ್ಲೆಯ ವಿವಿಧೆಡೆ ಗುರುವಾರ ರಾತ್ರಿ ಭಾರಿ ಮಳೆ ಸುರಿದಿದೆ. ನಗರದಿಂದ ಮಂಚನಬಲೆ ಗ್ರಾಮಕ್ಕೆ ಸಾಗುವ ರಸ್ತೆಯ ಕೆಳಸೇತುವೆ ಜಲಾವೃತವಾಗಿದೆ.</p><p>ಇಲ್ಲಿ ಕಾರುಗಳು, ಬೈಕ್ಗಳು ಸಿಲುಕಿದ್ದು ಚಾಲಕರು ಹೊರ ಬರಲು ಹರಸಾಹಸಪಟ್ಟರು. ಈ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಯಿತು. </p><p>ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ದ್ರಾಕ್ಷಿ ತೋಟ, ಹೂ ತೋಟಗಳಿಗೆ ನೀರು ನುಗ್ಗಿದೆ. ವಾಪಸಂದ್ರದ ಮುಖ್ಯರಸ್ತೆ ಜಲಾವೃತವಾಗಿದ್ದು, ಮತ್ತು ದೊಡ್ಡಮೋರಿ ತುಂಬಿ ಹರಿಯಿತು.</p><p><strong>ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ</strong></p><p><strong>ಬರೂರು (ಬೀದರ್ ಜಿಲ್ಲೆ):</strong> ಮಳೆ ನೀರಿನಿಂದ ಮುಳುಗಿದ್ದ ಸೇತುವೆ ದಾಟುವಾಗ, ಗ್ರಾಮದ ಗದ್ದಾಮಿಧಿ ಪ್ರಭಾಕರ ರೆಡ್ಡಿ (65) ಎಂಬವರು ಕೊಚ್ಚಿ ಕೊಂಡು ಹೋದ ಘಟನೆ ತಾಲ್ಲೂಕಿನ ಬರೂರು ಸಮೀಪ ನಡೆದಿದೆ.</p><p>ಗುರುವಾರ ಗ್ರಾಮದಿಂದ ಗಂಗವಾರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಸೇತುವೆ ದಾಟುವಾಗ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. </p><p>ಅಗ್ನಿಶಾಮಕ ಸಿಬ್ಬಂದಿ, ಮೀನುಗಾರರು ಶೋಧ ಕಾರ್ಯ ಕೈಗೊಂಡಿದ್ದು, ಶುಕ್ರವಾರ ಸಂಜೆವರೆಗೂ ಪ್ರಭಾಕರ ರೆಡ್ಡಿ ಪತ್ತೆಯಾಗಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ಜಿಲ್ಲೆಯ ವಿವಿಧೆಡೆ ಗುರುವಾರ ರಾತ್ರಿ ಭಾರಿ ಮಳೆ ಸುರಿದಿದೆ. ನಗರದಿಂದ ಮಂಚನಬಲೆ ಗ್ರಾಮಕ್ಕೆ ಸಾಗುವ ರಸ್ತೆಯ ಕೆಳಸೇತುವೆ ಜಲಾವೃತವಾಗಿದೆ.</p><p>ಇಲ್ಲಿ ಕಾರುಗಳು, ಬೈಕ್ಗಳು ಸಿಲುಕಿದ್ದು ಚಾಲಕರು ಹೊರ ಬರಲು ಹರಸಾಹಸಪಟ್ಟರು. ಈ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಯಿತು. </p><p>ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ದ್ರಾಕ್ಷಿ ತೋಟ, ಹೂ ತೋಟಗಳಿಗೆ ನೀರು ನುಗ್ಗಿದೆ. ವಾಪಸಂದ್ರದ ಮುಖ್ಯರಸ್ತೆ ಜಲಾವೃತವಾಗಿದ್ದು, ಮತ್ತು ದೊಡ್ಡಮೋರಿ ತುಂಬಿ ಹರಿಯಿತು.</p><p><strong>ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ</strong></p><p><strong>ಬರೂರು (ಬೀದರ್ ಜಿಲ್ಲೆ):</strong> ಮಳೆ ನೀರಿನಿಂದ ಮುಳುಗಿದ್ದ ಸೇತುವೆ ದಾಟುವಾಗ, ಗ್ರಾಮದ ಗದ್ದಾಮಿಧಿ ಪ್ರಭಾಕರ ರೆಡ್ಡಿ (65) ಎಂಬವರು ಕೊಚ್ಚಿ ಕೊಂಡು ಹೋದ ಘಟನೆ ತಾಲ್ಲೂಕಿನ ಬರೂರು ಸಮೀಪ ನಡೆದಿದೆ.</p><p>ಗುರುವಾರ ಗ್ರಾಮದಿಂದ ಗಂಗವಾರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಸೇತುವೆ ದಾಟುವಾಗ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. </p><p>ಅಗ್ನಿಶಾಮಕ ಸಿಬ್ಬಂದಿ, ಮೀನುಗಾರರು ಶೋಧ ಕಾರ್ಯ ಕೈಗೊಂಡಿದ್ದು, ಶುಕ್ರವಾರ ಸಂಜೆವರೆಗೂ ಪ್ರಭಾಕರ ರೆಡ್ಡಿ ಪತ್ತೆಯಾಗಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>