ಈ ರಸ್ತೆಯು ಊಲವಾಡಿ ಕಡೆಯ ಗ್ರಾಮಗಳಿಗೆ, ಗಾಂಧಿನಗರ, ಕರಿಯಪ್ಪಲ್ಲಿ, ಟಿಪ್ಪುನಗರ ಮತ್ತಿತರ ಕಡೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. 4-5 ವರ್ಷಗಳಿಂದ ರಸ್ತೆ ಹಾಳಾಗಿದ್ದರೂ ಶಾಸಕರು, ಸಂಸದರು ಸದಸ್ಯರು, ಸಚಿವರು ಸೇರಿದಂತೆ ಯಾರು ಗಮನಹರಿಸುತ್ತಿಲ್ಲ. ಬಿಜೆಪಿ ಸಭೆಯಲ್ಲಿ ಭಾಗವಹಿಸಲು ಸಚಿವರು ಅದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ರಸ್ತೆಯ ದುಸ್ಥಿತಿಯನ್ನು ಕಂಡು ಅಧಿಕಾರಿಗಳನ್ನು ತರಾಟೆ ತೆಗದುಕೊಳ್ಳುತ್ತಾಋಎ ಎಂದು ನಿರೀಕ್ಷೆ ಮಾಡಿದ್ದೇವು. ಸಚಿವರು ಈ ಬಗ್ಗೆ ಮಾತನಾಡದಿರುವುದು ನಾಗರಿಕರಲ್ಲಿ ತೀವ್ರ ಅಸಮದಾನ ಉಂಟಾಗಿದೆ.