ಚಿಂತಾಮಣಿ: ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನಗರಸಭೆ ಮಾಜಿ ಸದಸ್ಯ ಶ್ರೀನಾಥರೆಡ್ಡಿ ನೇಮಕವಾಗಿದ್ದಾರೆ. ಯೋಜನಾ ಪ್ರಾಧಿಕಾರಕ್ಕೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಮಾರ್ಚ್ 16 ರಂದು ಆದೇಶ ಹೊರಡಿಸಿದೆ.
ನಗರದ ವೆಂಕಟಗಿರಿಕೋಟೆಯ ನಿವಾಸಿ ಸುರೇಶ್, ವೈದ್ಯ ಡಾ.ಮಹಬೂಬ್ ಪಾಷಾ, ಅಂಜನಿ ಬಡಾವಣೆಯ ನಿವಾಸಿ ಟೊಮೆಟೊ ವ್ಯಾಪಾರಿ ಆರ್.ಎಂ.ಜಿ.ಶ್ರೀನಿವಾಸ್ ಅವರನ್ನು ನಾಮನಿರ್ದೇಶನ ಮಾಡಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್ ಆದೇಶ ಮಾಡಿದ್ದಾರೆ.