ಬಿಸಿತುಪ್ಪವಾದ ಆಯುಕ್ತರ ಕ್ರಮ; ವರ್ಗಾವಣೆಗೂ ಲಾಬಿ
ಮರು ಹರಾಜು ಪ್ರಕ್ರಿಯೆಗಳು ನಡೆಯದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ 18ರಷ್ಟು ಮಳಿಗೆಗಳನ್ನು ಮೀಸಲಿಡದೆ ಸರ್ಕಾರದ ನಿಯಮಗಳನ್ನೇ ನಗರಸಭೆ ಮುರಿದಿದೆ. ಆದರೆ ಮಂಜುನಾಥ್ ಅವರ ನಗರಸಭೆ ಪೌರಾಯುಕ್ತರಾಗಿ ಬಂದ ನಂತರ ಮರು ಹರಾಜಿಗೆ ಚಾಲನೆ ನೀಡಿದರು. ಅವರ ಕಾನೂನು ಕ್ರಮಗಳು ಮಾರುಕಟ್ಟೆಯ ವ್ಯಾಪಾರಿಗಳಿಗೆ ಬಿಸಿತುಪ್ಪವಾಗಿವೆ. ಅವರ ವರ್ಗಾವಣೆಗೂ ಚಿತಾವಣೆ ಸಹ ನಡೆದಿತ್ತು. ಕೆಲವರು ಅವರ ವರ್ಗಾವಣೆಗೆ ಹಣ ಸಹ ಸಂಗ್ರಹಿಸಿದ್ದರು ಎನ್ನುವ ಮಾತುಗಳಿವೆ. ಈ ನಡುವೆಯೇ ನಗರಸಭೆ ಹರಾಜಿಗೆ ದಿಟ್ಟ ನಿರ್ಧಾರ ಕೈಗೊಂಡಿದೆ.