<p><strong>ಚಿಂತಾಮಣಿ</strong>: ತಾಲ್ಲೂಕಿನ ಕೈವಾರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಶಾಖೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಇತ್ತೀಚೆಗೆ ಪ್ರವಚನ ಹಮ್ಮಿಕೊಳ್ಳಲಾಯಿತು. </p>.<p>ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಸಂಚಾಲಕಿ ಬಿ.ಕೆ. ಸರೋಜ ಮಾತನಾಡಿ, ‘ಜ್ಞಾನ ಮತ್ತು ಯೋಗದಿಂದ ಆತ್ಮಕ್ಕೆ ಬಲ ಮತ್ತು ಆತ್ಮಗಳ ಪರಿವರ್ತನೆಯಿಂದ ಪ್ರಕೃತಿ ಪರಿವರ್ತನೆಯಾಗಲಿದೆ. ಪ್ರಕೃತಿಯ ಪರಿವರ್ತನೆಯಿಂದ ವೈಕುಂಠದ ಸ್ವರ್ಗ ಸ್ಥಾಪನೆಯಾಗಲಿದೆ’ ಎಂದು ಹೇಳಿದರು. </p>.<p>ಕಲಿಯುಗದ ಘೋರ ಕತ್ತಲೆಯಿಂದ ಸತ್ಯಯುಗದ ಪ್ರಕಾಶದೆಡೆಗೆ ಕರೆದೊಯ್ಯುವ ಜ್ಞಾನವೇ ದೀಪಾವಳಿ. ವಿಶ್ವದ ಆತ್ಮಗಳನ್ನು ಬೆಳಗಿಸುವ ಜ್ಯೋತಿ, ಅಜ್ಞಾನದ ಅಂಧಕಾರವನ್ನು ಜ್ಞಾನದಿಂದ ಬೆಳಗಿಸುವ ಹಬ್ಬವೇ ದೀಪಾವಳಿ. ದೇಹದ ಅಹಂಕಾರ ಅಳಿದಾಗ ಆತ್ಮದ ಜ್ಯೋತಿ ಬೆಳಗುವುದೇ ಸತ್ಯ ದೀಪಾವಳಿ ಎಂದರು.</p>.<p>ಶಿಕ್ಷಕ ಶ್ರೀಧರ್ ಹಿರೇಮಠ ಮಾತನಾಡಿ, ಕುಂಬಾರ ಮಾಡಿದ ಹಣತೆ, ರೈತ ಬೆಳೆದ ಹತ್ತಿ, ಗಾಣಿಗೆ ತಯಾರಿಸಿದ ಎಣ್ಣೆಯಿಂದ ದೀಪ ಬೆಳಗುತ್ತದೆ. ದೀಪದ ಧರ್ಮ ಬೆಳಕು ನೀಡುವುದು. ಯಾವುದೇ ಧರ್ಮದವರು ದೀಪ ಹಚ್ಚಿದರೂ ಬೆಳಕು ನೀಡುತ್ತದೆ. ದೀಪಕ್ಕೆ ಯಾವುದೇ ಧರ್ಮವಿಲ್ಲ ಎಂದು ಹೇಳಿದರು.</p>.<p>ನಿತಿನ್ ಕೃಷ್ಣನ ವೇಷ, ಸೃಜನ ಮತ್ತು ನಿಖಿತಾ ಲಕ್ಸ್ಮಿ ಸರಸ್ವತಿ ವೇಷ ಧರಿಸಿದ್ದರು. ಎಲ್ಲರೂ ದೀಪ ಹಚ್ಚಿ ತದೇಕಚಿತ್ತಾದಿಂದ ನೋಡುತ್ತಾ, ಈ ದೀಪದಂತೆ ನಮ್ಮ ಆತ್ಮ ಬೆಳಗಲಿ, ನಮ್ಮಲ್ಲಿ ಇರುವ ಅಜ್ಞಾನ ತೊಲಗಿಸಿ ಜ್ಞಾನದ ಬೆಳಕು ನೀಡಲಿ ಎಂದು ಪ್ರಾರ್ಥನೆ ಮಾಡಿದರು.</p>.<p>ರಮಾದೇವಿ, ಪಿಳ್ಳನ್ನ, ಪುಷ್ಪಲತಾ, ಕೃಷ್ಣ, ಶಾರದಾ, ಪ್ರಜ್ಞಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ</strong>: ತಾಲ್ಲೂಕಿನ ಕೈವಾರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಶಾಖೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಇತ್ತೀಚೆಗೆ ಪ್ರವಚನ ಹಮ್ಮಿಕೊಳ್ಳಲಾಯಿತು. </p>.<p>ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಸಂಚಾಲಕಿ ಬಿ.ಕೆ. ಸರೋಜ ಮಾತನಾಡಿ, ‘ಜ್ಞಾನ ಮತ್ತು ಯೋಗದಿಂದ ಆತ್ಮಕ್ಕೆ ಬಲ ಮತ್ತು ಆತ್ಮಗಳ ಪರಿವರ್ತನೆಯಿಂದ ಪ್ರಕೃತಿ ಪರಿವರ್ತನೆಯಾಗಲಿದೆ. ಪ್ರಕೃತಿಯ ಪರಿವರ್ತನೆಯಿಂದ ವೈಕುಂಠದ ಸ್ವರ್ಗ ಸ್ಥಾಪನೆಯಾಗಲಿದೆ’ ಎಂದು ಹೇಳಿದರು. </p>.<p>ಕಲಿಯುಗದ ಘೋರ ಕತ್ತಲೆಯಿಂದ ಸತ್ಯಯುಗದ ಪ್ರಕಾಶದೆಡೆಗೆ ಕರೆದೊಯ್ಯುವ ಜ್ಞಾನವೇ ದೀಪಾವಳಿ. ವಿಶ್ವದ ಆತ್ಮಗಳನ್ನು ಬೆಳಗಿಸುವ ಜ್ಯೋತಿ, ಅಜ್ಞಾನದ ಅಂಧಕಾರವನ್ನು ಜ್ಞಾನದಿಂದ ಬೆಳಗಿಸುವ ಹಬ್ಬವೇ ದೀಪಾವಳಿ. ದೇಹದ ಅಹಂಕಾರ ಅಳಿದಾಗ ಆತ್ಮದ ಜ್ಯೋತಿ ಬೆಳಗುವುದೇ ಸತ್ಯ ದೀಪಾವಳಿ ಎಂದರು.</p>.<p>ಶಿಕ್ಷಕ ಶ್ರೀಧರ್ ಹಿರೇಮಠ ಮಾತನಾಡಿ, ಕುಂಬಾರ ಮಾಡಿದ ಹಣತೆ, ರೈತ ಬೆಳೆದ ಹತ್ತಿ, ಗಾಣಿಗೆ ತಯಾರಿಸಿದ ಎಣ್ಣೆಯಿಂದ ದೀಪ ಬೆಳಗುತ್ತದೆ. ದೀಪದ ಧರ್ಮ ಬೆಳಕು ನೀಡುವುದು. ಯಾವುದೇ ಧರ್ಮದವರು ದೀಪ ಹಚ್ಚಿದರೂ ಬೆಳಕು ನೀಡುತ್ತದೆ. ದೀಪಕ್ಕೆ ಯಾವುದೇ ಧರ್ಮವಿಲ್ಲ ಎಂದು ಹೇಳಿದರು.</p>.<p>ನಿತಿನ್ ಕೃಷ್ಣನ ವೇಷ, ಸೃಜನ ಮತ್ತು ನಿಖಿತಾ ಲಕ್ಸ್ಮಿ ಸರಸ್ವತಿ ವೇಷ ಧರಿಸಿದ್ದರು. ಎಲ್ಲರೂ ದೀಪ ಹಚ್ಚಿ ತದೇಕಚಿತ್ತಾದಿಂದ ನೋಡುತ್ತಾ, ಈ ದೀಪದಂತೆ ನಮ್ಮ ಆತ್ಮ ಬೆಳಗಲಿ, ನಮ್ಮಲ್ಲಿ ಇರುವ ಅಜ್ಞಾನ ತೊಲಗಿಸಿ ಜ್ಞಾನದ ಬೆಳಕು ನೀಡಲಿ ಎಂದು ಪ್ರಾರ್ಥನೆ ಮಾಡಿದರು.</p>.<p>ರಮಾದೇವಿ, ಪಿಳ್ಳನ್ನ, ಪುಷ್ಪಲತಾ, ಕೃಷ್ಣ, ಶಾರದಾ, ಪ್ರಜ್ಞಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>