ಅವಿಭಜಿತ ಜಿಲ್ಲೆಯಲ್ಲಿ ಪ್ರಥಮವಾಗಿ ನಿರ್ಮಾಣವಾಗಿದ್ದ ಗುರುಭವನ ಬಳಕೆಯಾಗದೆ ವಿಷಾದನೀಯ. ಶಿಕ್ಷಕರ ಸಂಘಟನೆಗಳ ಚಟುವಟಿಕೆಗಳಿಗೆ ಹಾಗೂ ನಿರ್ವಹಣೆ ಶುಲ್ಕವನ್ನು ಪಡೆದು ಶಿಕ್ಷಕರ ಸ್ವಂತ ಕಾರ್ಯಕ್ರಮಗಳಿಗೂ ಅನುಕೂಲವಾಗಲಿ ಎಂದು ಬಹುತೇಕ ಶಿಕ್ಷಕರ ವಂತಿಗೆ ಹಣದಿಂದಲೇ ನಿರ್ಮಾಣವಾಗಿರುವ ನಿಷ್ಕ್ರಿಯವಾಗಿರುವ ಬಗ್ಗೆ ಶಿಕ್ಷಕರ ಸಂಘಟನೆಗಳು ಹಾಗೂ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಾರಾಯಣರೆಡ್ಡಿ ನಿವೃತ್ತ ಬಿಇಒ ಬೀಗಮುದ್ರೆ ಸರಿಯಲ್ಲ ಗುರುಭವನಕ್ಕೆ ಬೀಗಮುದ್ರೆ ಹಾಕಿರುವುದು ಸರಿಯಲ್ಲ. ಭವನದ ಸಭಾಂಗಣದಲ್ಲಿ ಶಬ್ದದ ಎಕೋ ಬರುವುದರಿಂದ ಕಾರ್ಯಕ್ರಮ ನಡೆಸುತ್ತಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಯೊಂದಿಗೆ ಮಾತನಾಡಿ ಸೂಕ್ತ ಕ್ರಮಕೈಗೊಳ್ಳಲು ಪ್ರಯತ್ನಿಸಲಾಗುವುದು. ಆರ್.ಅಶೋಕಕುಮಾರ್ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ