ಸರ್ಕಾರಿ ಪ್ರೌಢಶಾಲೆಯನ್ನು ಕೆಪಿಎಸ್ ಶಾಲೆಯನ್ನಾಗಿ ಉನ್ನತೀಕರಿಸಿರುವುದರಿಂದ ಎಲ್ ಕೆ.ಜಿಯಿಂದ ಆರಂಭವಾಗಿ ದ್ವಿತೀಯ ಪಿಯುವರೆಗೆ ಒಂದೇ ಕಡೆ ಶಿಕ್ಷಣ ಸಿಗಲಿದೆ. ಇದರಿಂದ ಪ್ರಸ್ತುತ ಓದುತ್ತಿರುವ ಶಾಲೆಯಿಂದ ಟಿ.ಸಿ. ಪಡೆದು ವಿದ್ಯಾರ್ಥಿಗಳು ಬೇರೆ ಶಾಲೆಗೆ ದಾಖಲಾತಿಯಾಗುವುದನ್ನು ತಪ್ಪಿಸಲಿದೆ.
ಹೇಮಾವತಿ ಎಸ್ಡಿಎಂಸಿ ಅಧ್ಯಕ್ಷೆ
ಹಲವು ವರ್ಷಗಳ ಕನಸು ಈಗ ನನಸಾಗಿದೆ. ಸಕಲ ಸೌಲಭ್ಯಗಳೊಂದಿಗೆ ಹೆಚ್ಚಿನ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಶಾಲಾ ಮಕ್ಕಳು ಮತ್ತು ಪೋಷಕರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು.