ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್–ಸಚಿವ ಸುಧಾಕರ್‌ ನಡುವೆ ಶೀತಲ ಸಮರ?

Published : 29 ಜನವರಿ 2024, 7:30 IST
Last Updated : 29 ಜನವರಿ 2024, 7:30 IST
ಫಾಲೋ ಮಾಡಿ
Comments
ಪ್ರದೀಪ್‌ ಈಶ್ವರ್‌
ಪ್ರದೀಪ್‌ ಈಶ್ವರ್‌
ತಮ್ಮದೇ ಆಡಳಿತವಿದ್ದರೂ ಪ್ರತಿಭಟಿಸಿದ್ದ ಬೆಂಬಲಿಗರು
ಮಂಡಿಕಲ್ಲು ಮತ್ತು ಪೆರೇಸಂದ್ರ ಜನರ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಕಂಟಕವಾಗಿರುವ ಕ್ರಷರ್‌ಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಯೇ ಸಿದ್ಧ ಎಂದು ಕಳೆದ ಅಕ್ಟೋಬರ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರ ನುಡಿದಿದ್ದರು. ಶಾಸಕರ ಬೆಂಬಲಿಗರು ಕ್ರಷರ್‌ ಬಂದ್‌ಗೆ ಆಗ್ರಹಿಸಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಸಹ ನಡೆಸಿದ್ದರು. ಆದರೆ ಈ ಜಟಾಪಟಿ ನಡೆಯುವಾಗಲೇ ‘ಗಣಿಗಾರಿಕೆಯನ್ನು ಪೂರ್ಣವಾಗಿ ಬಂದ್ ಮಾಡಬೇಕು ಎನ್ನುವುದು ಅವೈಜ್ಞಾನಿಕ ಮತ್ತು ಕಾನೂನುಬದ್ಧವಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದರು. ‘ಗಣಿಗಾರಿಕೆಯ ಬಂದ್‌’ನ ವಿಚಾರ ಕಂದಾಯ ಸಚಿವರ ಮಟ್ಟದವರೆಗೂ ತಲುಪಿತ್ತು. ಇಲ್ಲಿಂದಲೇ ಸಚಿವರು ಮತ್ತು ಶಾಸಕರ ನಡುವೆ ತಾಳಮೇಳ ತಪ್ಪಿತು ಎನ್ನುತ್ತಾರೆ  ಕಾಂಗ್ರೆಸ್‌ನ ಪ್ರಮುಖ ಮುಖಂಡರೊಬ್ಬರು. 
ಹಿರಿಯ ನಾಯಕರ ಮುನಿಸು
ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಪ್ರದೀಪ್ ಈಶ್ವರ್ ಬಣ ಮತ್ತು ಹಿರಿಯ ಕಾಂಗ್ರೆಸ್ಸಿಗರು ಎನ್ನುವ ಮತ್ತೊಂದು ಬಣವೂ ಇದೆ. ಪ್ರದೀಪ್ ಅವರು ಶಾಸಕರಾದ ಸ್ವಲ್ಪ ದಿನಗಳಲ್ಲಿಯೇ ಹಿರಿಯ ನಾಯಕರಿಗೆ ಸ್ಪಂದಿಸುತ್ತಿಲ್ಲ ಎನ್ನುವ ಆರೋಪವಿತ್ತು. ಈಗಲೂ ಸ್ಪಂದಿಸುತ್ತಿಲ್ಲ ಎಂದು ಪಕ್ಷದ ಹಿರಿಯ ನಾಯಕರು ತಿಳಿಸುವರು. ‘ಚುನಾವಣೆಯಲ್ಲಿ ಪ್ರದೀಪ್ ಅವರ ವಿರುದ್ಧ ಕೆಲಸ ಮಾಡಿದವರು ಈಗ ‘ನಮ್ಮ’ ಶಾಸಕರು ಎಂದು ಜೊತೆಯಾಗಿದ್ದಾರೆ. ಆದರೆ ಅವರಿಗಾಗಿ ಕೆಲಸ ಮಾಡಿದ ನಾವು ದೂರವಾಗಿದ್ದೇವೆ. ಲೋಕಸಭೆ ಚುನಾವಣೆ ಮುಗಿಯಲಿ. ನಂತರ ಯಾವ ಯಾವ ತಿರುವು ಪಡೆಯುತ್ತದೆಯೊ ನೋಡಬೇಕು’ ಎಂದು ಕಾಂಗ್ರೆಸ್ ‍ಪ್ರಮುಖ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT