<p><strong>ಚಿಕ್ಕಬಳ್ಳಾಪುರ: </strong>ವಿಧಾನ ಪರಿಷತ್ ಚುನಾವಣೆ ಡಿ.4ರ ನಂತರ ಕಾವೇರುತ್ತದೆ. ಅಂತಹ ಸಮಯದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಬೆಂಬಲಿತ ಮತದಾರರು ಜಾಗೃತರಾಗಿರಬೇಕು. ಆಸೆ, ಆಮಿಷಗಳಿಗೆ, ಬೆದರಿಕೆಗಳಿಗೆ ಬಗ್ಗಬಾರದು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.</p>.<p>ನಗರದಲ್ಲಿ ಮಂಗಳವಾರ ಕಾಂಗ್ರೆಸ್ನಿಂದ ನಡೆದ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.</p>.<p>ನಾಲ್ಕೈದು ದಿನಗಳಲ್ಲಿ ಚುನಾವಣೆ ಬಿಸಿ ಏರಲಿದೆ. ಮುಖಂಡರು ಹಾಗೂ ಕಾರ್ಯಕರ್ತರು ಶ್ರದ್ಧೆಯಿಂದ ಮತದಾರರನ್ನು ಸಂಪರ್ಕದಲ್ಲಿ ಇಟ್ಟುಕೊಳ್ಳಬೇಕು.ಚಿಕ್ಕಬಳ್ಳಾಪುರವೇ ಎರಡೂ ಜಿಲ್ಲೆ ಅಲ್ಲ ಎಂದರು.</p>.<p>ಚುನಾವಣೆ ಪೂರ್ವದಲ್ಲಿನ ನಡವಳಿಕೆಗಳು ನಂತರ ಬದಲಾವಣೆ ಆಗುತ್ತವೆ. ಇದರಿಂದ ಜನರಿಗೆ ಬೇಸರ ಆಗುತ್ತದೆ.ಅಭಿವೃದ್ಧಿಯೊಂದೇ ಸಾಲದು. ಜನರನ್ನು ಪ್ರೀತಿ ವಾತ್ಸಲ್ಯದಿಂದ ನೋಡಬೇಕು. ಜನರ ನಡುವೆ ಶಾಸಕ ಉದ್ಭವ ಆಗಬೇಕು. ಮೇಲಿನಿಂದ ಉದುರಬಾರದು. ಜನರ ನಡುವೆ ಉದ್ಭವವಾಗುವ ಶಾಸಕರನ್ನು ಜನರೇ ರಕ್ಷಿಸುತ್ತಾರೆ ಎಂದು ಹೇಳಿದರು.</p>.<p>ಈಗ ಚುನಾವಣೆ ಪ್ರಚಾರದ ದೃಷ್ಟಿಯಿಂದ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಪಕ್ಷ ಸಂಘಟನೆ ಮುಂದುವರಿಯುತ್ತದೆ ಎಂದರು.</p>.<p>ಈಗ ಕಾಂಗ್ರೆಸ್ನವರು ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತ್ತಿದ್ದೇವೆ. ಆದರೆ ಇದೇ ಜನರು ಕಾಂಗ್ರೆಸ್ಗೆ ಬಹುಮತ ಕೊಟ್ಟಿದ್ದರು. ಈಗ ದೂರ ಸರಿಸಿದ್ದಾರೆ. ಮತ್ತೆ ನಾವು ಮೈಮರೆಯಬಾರದು. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ ಎಂದು ಹೇಳಿದರು.</p>.<p>ಇಲ್ಲಿಯೇ ಹುಟ್ಟಿ, ಬೆಳೆದು, ಪೈಲ್ವಾನರಾದವರ ಕಾಲುಗಳು ಈಗ ತಾಯಿಯ ಎದೆಯ ಮೇಲಿದೆ ಎಂದು ಸಚಿವ ಡಾ.ಸುಧಾಕರ್ ಹೆಸರು ಹೇಳದೆ ಟೀಕಿಸಿದರು.</p>.<p>ಪ್ರತಿ ಮನುಷ್ಯ ವಾಪಸ್ ಮಣ್ಣಿಗೆ ಹೋಗಬೇಕು. ಆಕಾಶದಲ್ಲಿ ದಹನ ಮಾಡುವುಕ್ಕೆ ಆಗುವುದಿಲ್ಲ. ಸತ್ತ ಸಂದರ್ಭದಲ್ಲಿ ಥೂಇದ್ಯಾಕಪ್ಪ ತಂದುಹಾಕಿದೆ ಎಂದು ಭೂಮಿ ತಾಯಿ ಹೇಳಬಾರದು. ಯೋಗ್ಯವಾಗಿ ಬದುಕಿದರೆ ಭೂ ತಾಯಿ ಬಾ ಕಂದ ಎಂದು ಅಪ್ಪಿಕೊಳ್ಳುತ್ತಾಳೆ ಎಂದು ಹೇಳಿದರು.</p>.<p>ರಾಜಕಾರಣ ಎಂದರೆ ಜೂಜು ಅಲ್ಲ. ರಾಜಕಾರಣ ಎಂದರೆ ಬದುಕಿಗೆ ಪರ್ಯಾಯ ಮಾರ್ಗವೂ ಅಲ್ಲ. ದೇಶದ ಜನರ ನಂಬಿಕೆಯ ಉಗ್ರಾಣ ಎಂದರು.</p>.<p>ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಮಾತನಾಡಿ, ನಮ್ಮ ಪಕ್ಷದ ಅಭ್ಯರ್ಥಿಅನಿಲ್ ಕುಮಾರ್ ನಿಷ್ಠಾವಂತ ಕಾರ್ಯಕರ್ತರು. ಆಸೆ ಆಮಿಷಗಳಿಗೆ ಎದುರಾಗಿ ಕಾಂಗ್ರೆಸ್ನಲ್ಲಿ ಬಂಡೆಯ ರೀತಿಯಲ್ಲಿ ನಿಂತವರು. ಎಲ್ಲರ ಜತೆ ಸಮಾಲೋಚಿಸಿದ ನಂತರವೇ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂದು ಹೇಳಿದರು. </p>.<p>ಮುಳಬಾಗಿಲಿನಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಚಿಂತಾಮಣಿಯಲ್ಲಿ ಡಾ.ಎಂ.ಸಿ.ಸುಧಾಕರ್, ಕೋಲಾರದಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ನಮ್ಮ ಬೆಂಬಲಕ್ಕೆ ಇದ್ದಾರೆ. ಇದು ನಮಗೆ ಮತ್ತಷ್ಟು ಹುರುಪು ತಂದಿದೆ ಎಂದು ಹೇಳಿದರು.</p>.<p>ಚುನಾವಣೆ ಸಮಯದಲ್ಲಿ ಗಿಡುಗಗಳು ಹಾರಾಡುತ್ತಿರುತ್ತವೆ. ಆ ಗಿಡುಗಗಳಿಗೆ ಬಲಿ ಆಗಬಾರದು. ಬಿಜೆಪಿಗೆ ಇತಿಹಾಸವೂ ಇಲ್ಲ. ಭವಿಷ್ಯವೂ ಇಲ್ಲ. ಅವರದ್ದು ಅಧಿಕಾರದ ರಾಜಕಾರಣ ಎಂದು ಟೀಕಿಸಿದರು.</p>.<p>ಶಾಸಕಎನ್.ಎಚ್.ಶಿವಶಂಕರರೆಡ್ಡಿ, ಅಭ್ಯರ್ಥಿ ಅನಿಲ್ ಕುಮಾರ್ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯನಜೀರ್ ಅಹಮ್ಮದ್, ಮಾಜಿ ಶಾಸಕ ಸಂಪಂಗಿ, ಎಸ್.ಎಂ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ,ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್, ಮುನೇಗೌಡ, ಮುಖಂಡರಾದ ಆಂಜನಪ್ಪ, ಪ್ರಕಾಶ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ: </strong>ವಿಧಾನ ಪರಿಷತ್ ಚುನಾವಣೆ ಡಿ.4ರ ನಂತರ ಕಾವೇರುತ್ತದೆ. ಅಂತಹ ಸಮಯದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಬೆಂಬಲಿತ ಮತದಾರರು ಜಾಗೃತರಾಗಿರಬೇಕು. ಆಸೆ, ಆಮಿಷಗಳಿಗೆ, ಬೆದರಿಕೆಗಳಿಗೆ ಬಗ್ಗಬಾರದು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.</p>.<p>ನಗರದಲ್ಲಿ ಮಂಗಳವಾರ ಕಾಂಗ್ರೆಸ್ನಿಂದ ನಡೆದ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.</p>.<p>ನಾಲ್ಕೈದು ದಿನಗಳಲ್ಲಿ ಚುನಾವಣೆ ಬಿಸಿ ಏರಲಿದೆ. ಮುಖಂಡರು ಹಾಗೂ ಕಾರ್ಯಕರ್ತರು ಶ್ರದ್ಧೆಯಿಂದ ಮತದಾರರನ್ನು ಸಂಪರ್ಕದಲ್ಲಿ ಇಟ್ಟುಕೊಳ್ಳಬೇಕು.ಚಿಕ್ಕಬಳ್ಳಾಪುರವೇ ಎರಡೂ ಜಿಲ್ಲೆ ಅಲ್ಲ ಎಂದರು.</p>.<p>ಚುನಾವಣೆ ಪೂರ್ವದಲ್ಲಿನ ನಡವಳಿಕೆಗಳು ನಂತರ ಬದಲಾವಣೆ ಆಗುತ್ತವೆ. ಇದರಿಂದ ಜನರಿಗೆ ಬೇಸರ ಆಗುತ್ತದೆ.ಅಭಿವೃದ್ಧಿಯೊಂದೇ ಸಾಲದು. ಜನರನ್ನು ಪ್ರೀತಿ ವಾತ್ಸಲ್ಯದಿಂದ ನೋಡಬೇಕು. ಜನರ ನಡುವೆ ಶಾಸಕ ಉದ್ಭವ ಆಗಬೇಕು. ಮೇಲಿನಿಂದ ಉದುರಬಾರದು. ಜನರ ನಡುವೆ ಉದ್ಭವವಾಗುವ ಶಾಸಕರನ್ನು ಜನರೇ ರಕ್ಷಿಸುತ್ತಾರೆ ಎಂದು ಹೇಳಿದರು.</p>.<p>ಈಗ ಚುನಾವಣೆ ಪ್ರಚಾರದ ದೃಷ್ಟಿಯಿಂದ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಪಕ್ಷ ಸಂಘಟನೆ ಮುಂದುವರಿಯುತ್ತದೆ ಎಂದರು.</p>.<p>ಈಗ ಕಾಂಗ್ರೆಸ್ನವರು ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತ್ತಿದ್ದೇವೆ. ಆದರೆ ಇದೇ ಜನರು ಕಾಂಗ್ರೆಸ್ಗೆ ಬಹುಮತ ಕೊಟ್ಟಿದ್ದರು. ಈಗ ದೂರ ಸರಿಸಿದ್ದಾರೆ. ಮತ್ತೆ ನಾವು ಮೈಮರೆಯಬಾರದು. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ ಎಂದು ಹೇಳಿದರು.</p>.<p>ಇಲ್ಲಿಯೇ ಹುಟ್ಟಿ, ಬೆಳೆದು, ಪೈಲ್ವಾನರಾದವರ ಕಾಲುಗಳು ಈಗ ತಾಯಿಯ ಎದೆಯ ಮೇಲಿದೆ ಎಂದು ಸಚಿವ ಡಾ.ಸುಧಾಕರ್ ಹೆಸರು ಹೇಳದೆ ಟೀಕಿಸಿದರು.</p>.<p>ಪ್ರತಿ ಮನುಷ್ಯ ವಾಪಸ್ ಮಣ್ಣಿಗೆ ಹೋಗಬೇಕು. ಆಕಾಶದಲ್ಲಿ ದಹನ ಮಾಡುವುಕ್ಕೆ ಆಗುವುದಿಲ್ಲ. ಸತ್ತ ಸಂದರ್ಭದಲ್ಲಿ ಥೂಇದ್ಯಾಕಪ್ಪ ತಂದುಹಾಕಿದೆ ಎಂದು ಭೂಮಿ ತಾಯಿ ಹೇಳಬಾರದು. ಯೋಗ್ಯವಾಗಿ ಬದುಕಿದರೆ ಭೂ ತಾಯಿ ಬಾ ಕಂದ ಎಂದು ಅಪ್ಪಿಕೊಳ್ಳುತ್ತಾಳೆ ಎಂದು ಹೇಳಿದರು.</p>.<p>ರಾಜಕಾರಣ ಎಂದರೆ ಜೂಜು ಅಲ್ಲ. ರಾಜಕಾರಣ ಎಂದರೆ ಬದುಕಿಗೆ ಪರ್ಯಾಯ ಮಾರ್ಗವೂ ಅಲ್ಲ. ದೇಶದ ಜನರ ನಂಬಿಕೆಯ ಉಗ್ರಾಣ ಎಂದರು.</p>.<p>ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಮಾತನಾಡಿ, ನಮ್ಮ ಪಕ್ಷದ ಅಭ್ಯರ್ಥಿಅನಿಲ್ ಕುಮಾರ್ ನಿಷ್ಠಾವಂತ ಕಾರ್ಯಕರ್ತರು. ಆಸೆ ಆಮಿಷಗಳಿಗೆ ಎದುರಾಗಿ ಕಾಂಗ್ರೆಸ್ನಲ್ಲಿ ಬಂಡೆಯ ರೀತಿಯಲ್ಲಿ ನಿಂತವರು. ಎಲ್ಲರ ಜತೆ ಸಮಾಲೋಚಿಸಿದ ನಂತರವೇ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂದು ಹೇಳಿದರು. </p>.<p>ಮುಳಬಾಗಿಲಿನಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಚಿಂತಾಮಣಿಯಲ್ಲಿ ಡಾ.ಎಂ.ಸಿ.ಸುಧಾಕರ್, ಕೋಲಾರದಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ನಮ್ಮ ಬೆಂಬಲಕ್ಕೆ ಇದ್ದಾರೆ. ಇದು ನಮಗೆ ಮತ್ತಷ್ಟು ಹುರುಪು ತಂದಿದೆ ಎಂದು ಹೇಳಿದರು.</p>.<p>ಚುನಾವಣೆ ಸಮಯದಲ್ಲಿ ಗಿಡುಗಗಳು ಹಾರಾಡುತ್ತಿರುತ್ತವೆ. ಆ ಗಿಡುಗಗಳಿಗೆ ಬಲಿ ಆಗಬಾರದು. ಬಿಜೆಪಿಗೆ ಇತಿಹಾಸವೂ ಇಲ್ಲ. ಭವಿಷ್ಯವೂ ಇಲ್ಲ. ಅವರದ್ದು ಅಧಿಕಾರದ ರಾಜಕಾರಣ ಎಂದು ಟೀಕಿಸಿದರು.</p>.<p>ಶಾಸಕಎನ್.ಎಚ್.ಶಿವಶಂಕರರೆಡ್ಡಿ, ಅಭ್ಯರ್ಥಿ ಅನಿಲ್ ಕುಮಾರ್ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯನಜೀರ್ ಅಹಮ್ಮದ್, ಮಾಜಿ ಶಾಸಕ ಸಂಪಂಗಿ, ಎಸ್.ಎಂ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ,ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್, ಮುನೇಗೌಡ, ಮುಖಂಡರಾದ ಆಂಜನಪ್ಪ, ಪ್ರಕಾಶ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>