ಈ ಹೇಳಿಕೆಗೆ ಕಿಡಿಕಾರಿದ್ದ ವಿಶ್ವನಾಥ್ ಅವರು, ‘ಸುಧಾಕರ್ ಒಬ್ಬ ವೈದ್ಯ. ನಾನು ವಕೀಲ. ನಾನು ಸುಪ್ರೀಂ ಕೋರ್ಟ್ ತೀರ್ಪು ಓದಿಕೊಂಡಿರುವೆ. ಆ ತೀರ್ಪಿನಲ್ಲಿ ಅಪವಿತ್ರರು ಚುನಾವಣೆಗೆ ಸ್ಪರ್ಧಿಸಿ ಪವಿತ್ರರಾಗಿ ಬನ್ನಿ ಎಂದು ಹೇಳಲಾಗಿದೆ. ಎಲ್ಲಿಯೂ ಕೋರ್ಟ್ ಗೆಲುವು, ಸೋಲಿನ ಬಗ್ಗೆ ಹೇಳಿಲ್ಲ. ಸುಧಾಕರ್ ಅವರು ವಕೀಲರ ಬಳಿ ಹೋಗಿ ನ್ಯಾಯಾಲಯದ ತೀರ್ಪು ತಿಳಿದುಕೊಳ್ಳಲಿ. ಎಲ್ಲೋ ಪಾಠ ಹೇಳಿಸಿಕೊಂಡು ಬಂದು ಹೇಳುತ್ತಿದ್ದಾರೆ’ ಎಂದು ಸುಧಾಕರ್ ಅವರಿಗೆ ತಿರುಗೇಟು ನೀಡಿದ್ದರು.