<p><strong>ಗೌರಿಬಿದನೂರು:</strong> ಮಹಾರಾಷ್ಟ್ರದ ಮುಂಬೈನಿಂದ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ 120 ಜನರು ಬಂದಿದ್ದು ತಾಲ್ಲೂಕಿನಲ್ಲಿ ಆತಂಕ ಹೆಚ್ಚಿಸಿದೆ.</p>.<p>ಸೋಮವಾರ ಲಾರಿ ಮತ್ತು ಟೆಂಪೊ ಮೂಲಕ 9 ಕಾರ್ಮಿಕರು ನೆರೆಯ ಆಂಧ್ರದ ಮೂಲಕ ತಾಲ್ಲೂಕಿಗೆ ಬಂದಿದ್ದರು. ಮಂಗಳವಾರ 4 ಸಾರಿಗೆ ಬಸ್ ಮೂಲಕ ಸುಮಾರು 120 ಮಂದಿ ಕಾರ್ಮಿಕರು ಮಧುಗಿರಿ ಮಾರ್ಗವಾಗಿ ಹಾಗೂ ಉಳಿದಂತೆ ಖಾಸಗಿ ವಾಹನಗಳ ಮೂಲಕ ಮುಂಬೈನಿಂದ ತಾಲ್ಲೂಕಿಗೆ ಬಂದಿದ್ದಾರೆ.</p>.<p>ತಾಲ್ಲೂಕಿನ ಗಡಿಭಾಗದ ಚೆಕ್ಪೋಸ್ಟ್ಗಳಲ್ಲಿ ಪೊಲೀಸ್ ಮತ್ತು ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಬಳಿಕ ನಗರದ ಹೊರವಲಯದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಎಲ್ಲರನ್ನು ಕ್ವಾರೆಂಟೈನ್ ಮಾಡಲಾಗಿದೆ.</p>.<p>ಆರೋಗ್ಯ ಇಲಾಖೆಯ ಅಧಿಕಾರಿ ಮುಂಬೈನಿಂದ ಬಂದ ಎಲ್ಲರ ದಾಖಲೆ ಸಂಗ್ರಹಿಸಿದ ಬಳಿಕ ರಕ್ತ ಹಾಗೂ ಗಂಟಲಿನ ದ್ರವ ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ. ಕ್ವಾರೆಂಟೈನ್ನಲ್ಲಿರುವ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೌರಿಬಿದನೂರು:</strong> ಮಹಾರಾಷ್ಟ್ರದ ಮುಂಬೈನಿಂದ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ 120 ಜನರು ಬಂದಿದ್ದು ತಾಲ್ಲೂಕಿನಲ್ಲಿ ಆತಂಕ ಹೆಚ್ಚಿಸಿದೆ.</p>.<p>ಸೋಮವಾರ ಲಾರಿ ಮತ್ತು ಟೆಂಪೊ ಮೂಲಕ 9 ಕಾರ್ಮಿಕರು ನೆರೆಯ ಆಂಧ್ರದ ಮೂಲಕ ತಾಲ್ಲೂಕಿಗೆ ಬಂದಿದ್ದರು. ಮಂಗಳವಾರ 4 ಸಾರಿಗೆ ಬಸ್ ಮೂಲಕ ಸುಮಾರು 120 ಮಂದಿ ಕಾರ್ಮಿಕರು ಮಧುಗಿರಿ ಮಾರ್ಗವಾಗಿ ಹಾಗೂ ಉಳಿದಂತೆ ಖಾಸಗಿ ವಾಹನಗಳ ಮೂಲಕ ಮುಂಬೈನಿಂದ ತಾಲ್ಲೂಕಿಗೆ ಬಂದಿದ್ದಾರೆ.</p>.<p>ತಾಲ್ಲೂಕಿನ ಗಡಿಭಾಗದ ಚೆಕ್ಪೋಸ್ಟ್ಗಳಲ್ಲಿ ಪೊಲೀಸ್ ಮತ್ತು ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಬಳಿಕ ನಗರದ ಹೊರವಲಯದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಎಲ್ಲರನ್ನು ಕ್ವಾರೆಂಟೈನ್ ಮಾಡಲಾಗಿದೆ.</p>.<p>ಆರೋಗ್ಯ ಇಲಾಖೆಯ ಅಧಿಕಾರಿ ಮುಂಬೈನಿಂದ ಬಂದ ಎಲ್ಲರ ದಾಖಲೆ ಸಂಗ್ರಹಿಸಿದ ಬಳಿಕ ರಕ್ತ ಹಾಗೂ ಗಂಟಲಿನ ದ್ರವ ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ. ಕ್ವಾರೆಂಟೈನ್ನಲ್ಲಿರುವ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>