‘ರಜೆ ಇದ್ದಾಗ ಭಾಗ್ಯಲಕ್ಷ್ಮಿ ಪಿಲ್ಲಗುಂಡ್ಲಹಳ್ಳಿಗೆ ಬರುತ್ತಾಳೆ. ನನ್ನ ತಂಗಿಯರು ಇನ್ನೂ ಚಿಕ್ಕವರು. ಅಪ್ಪ, ಅಮ್ಮ ಇಲ್ಲ ಎನ್ನುವ ನೋವು ಅವರನ್ನು ಹೆಚ್ಚು ಕಾಡುತ್ತಿದೆ. ಆದರೆ, ಅದನ್ನು ನನ್ನ ಬಳಿಯೂ ಹೆಚ್ಚು ಹೇಳಿಕೊಳ್ಳುವುದಿಲ್ಲ. ಅಪ್ಪ, ಅಮ್ಮ ಇದ್ದಿದ್ದರೆ ಎಲ್ಲ ಭಾವನೆಗಳನ್ನು ಅವರ ಜತೆ ಹಂಚಿಕೊಳ್ಳಬಹುದಿತ್ತು’ ಎಂದು ಕಣ್ಣಂಚಿನಲ್ಲಿ ಜಿನುಗಿದ ಹನಿಗಳನ್ನು ಒರೆಸಿಕೊಂಡರು.