<p><strong>ಚೇಳೂರು: </strong>ಜಿಲ್ಲಾದ್ಯಂತ ಜಡಿಮಳೆಗೆ ಜನಜೀವನ ಮುದುಡಿದೆ. ಕೆಲವು ದಿನಗಳಿಂದ ಆರಂಭವಾದ ಜಡಿಮಳೆ ಒಂದು ವಾರ ಕಳೆದರೂ ಇನ್ನೂ ನಿಂತಿಲ್ಲ. ದಿನವಿಡೀ ನಿತ್ಯ ಸುರಿಯುತ್ತಿರುವ ಜಡಿಮಳೆ ಜನತೆಯನ್ನು ಹೈರಾಣಾಗಿಸಿದೆ. ಜೊತೆಗೆ ಬೆಳೆಗಳಿಗೂ ಹಾನಿಯಾಗಿದೆ.</p>.<p>ಸೋಮವಾರ ಚೇಳೂರು ತಾಪಮಾನ ಕನಿಷ್ಠ 20 ಡಿಗ್ರಿಯಿಂದ ಗರಿಷ್ಠ 24 ಡಿಗ್ರಿ ದಾಖಲಾಗಿತು. ಸೂರ್ಯನ ಕಿರಣವನ್ನೇ ಕಾಣದೇ ಮೋಡ ಮುಸುಕಿದ ಚುಮುಚುಮು ಚಳಿಯ ತಂಪಾದ ವಾತಾವರಣ ಮಲೆನಾಡನ್ನೂ ಹಿಮ್ಮೆಟ್ಟಿಸುವಂತಿದೆ.</p>.<p>ಜಡಿಮಳೆಗೆ ಜನತೆ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಅನಿವಾರ್ಯವಾಗಿ ಕೆಲಸ ಕಾರ್ಯಗಳಿದ್ದಲ್ಲಿ ಮಾತ್ರ ಮನೆಬಿಟ್ಟು ಹೊರಬರುತ್ತಿದ್ದಾರೆ. ಜಡಿ ಮಳೆ ಸುರಿಯುತ್ತಿದ್ದ ಸಂದರ್ಭಗಳಲ್ಲಂತೂ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿತ್ತು. ಹೊರಗಡೆ ಬಂದವರು ಕೂಡ ಚಳಿಯಿಂದ ಬೆಚ್ಚಗಿರಲು ಸ್ವೆಟರ್ಗಳನ್ನು ಹಾಕಿಕೊಂಡು ಓಡಾಡುತ್ತಿದ್ದಾರೆ.</p>.<p>ಕೆಸರು ಗದ್ದೆಯಾದ ರಸ್ತೆಗಳು: ಚೇಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಪಟ್ಟಣದಲ್ಲಿ ತುಂತುರು ಮಳೆ ಬೀಳುತ್ತಿದೆ. ಆಗೊಮ್ಮೆ ಈಗೊಮ್ಮೆ ಸಾಧಾರಣೆ ಮಳೆಯಾಗುತ್ತಿದೆ. ಮಳೆಯ ಪರಿಣಾಮ ರಸ್ತೆಯು ಸಂಪೂರ್ಣ ಕೆಸರು ಗೆದ್ದಯಾಗಿ, ಸಂಚಾರಕ್ಕೆ ತೀವ್ರ ಅಡಚಣೆ ಎದುರಾಗಿದೆ. ವಾಹನ ಸವಾರರು ಜಾರಿ ಬೀಳುತ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ.</p>.<p>ಪಟ್ಟಣದ ಎಂ.ಜಿ.ವೃತ್ತದಲ್ಲಿ ಎಎಸ್ಐ ನಾಗರಾಜ್ ಮತ್ತು ಪೋಲಿಸ್ ಸಿಬ್ಬಂದಿ ಹಲವು ಜಾರುವ ರಸ್ತೆಯ ಬಗ್ಗೆ ಎಚ್ಚರಿಕೆಯ ಸಂದೇಶ ಹಾಕಿ ಜನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಮಳೆಗಾಲ ಮುಗಿಯುವವರೆಗೆ ಜಾರುವ ರಸ್ತೆಗಳಲ್ಲಿ ಸಂಚಾರ ಪೊಲೀಸರು ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೇಳೂರು: </strong>ಜಿಲ್ಲಾದ್ಯಂತ ಜಡಿಮಳೆಗೆ ಜನಜೀವನ ಮುದುಡಿದೆ. ಕೆಲವು ದಿನಗಳಿಂದ ಆರಂಭವಾದ ಜಡಿಮಳೆ ಒಂದು ವಾರ ಕಳೆದರೂ ಇನ್ನೂ ನಿಂತಿಲ್ಲ. ದಿನವಿಡೀ ನಿತ್ಯ ಸುರಿಯುತ್ತಿರುವ ಜಡಿಮಳೆ ಜನತೆಯನ್ನು ಹೈರಾಣಾಗಿಸಿದೆ. ಜೊತೆಗೆ ಬೆಳೆಗಳಿಗೂ ಹಾನಿಯಾಗಿದೆ.</p>.<p>ಸೋಮವಾರ ಚೇಳೂರು ತಾಪಮಾನ ಕನಿಷ್ಠ 20 ಡಿಗ್ರಿಯಿಂದ ಗರಿಷ್ಠ 24 ಡಿಗ್ರಿ ದಾಖಲಾಗಿತು. ಸೂರ್ಯನ ಕಿರಣವನ್ನೇ ಕಾಣದೇ ಮೋಡ ಮುಸುಕಿದ ಚುಮುಚುಮು ಚಳಿಯ ತಂಪಾದ ವಾತಾವರಣ ಮಲೆನಾಡನ್ನೂ ಹಿಮ್ಮೆಟ್ಟಿಸುವಂತಿದೆ.</p>.<p>ಜಡಿಮಳೆಗೆ ಜನತೆ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಅನಿವಾರ್ಯವಾಗಿ ಕೆಲಸ ಕಾರ್ಯಗಳಿದ್ದಲ್ಲಿ ಮಾತ್ರ ಮನೆಬಿಟ್ಟು ಹೊರಬರುತ್ತಿದ್ದಾರೆ. ಜಡಿ ಮಳೆ ಸುರಿಯುತ್ತಿದ್ದ ಸಂದರ್ಭಗಳಲ್ಲಂತೂ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿತ್ತು. ಹೊರಗಡೆ ಬಂದವರು ಕೂಡ ಚಳಿಯಿಂದ ಬೆಚ್ಚಗಿರಲು ಸ್ವೆಟರ್ಗಳನ್ನು ಹಾಕಿಕೊಂಡು ಓಡಾಡುತ್ತಿದ್ದಾರೆ.</p>.<p>ಕೆಸರು ಗದ್ದೆಯಾದ ರಸ್ತೆಗಳು: ಚೇಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಪಟ್ಟಣದಲ್ಲಿ ತುಂತುರು ಮಳೆ ಬೀಳುತ್ತಿದೆ. ಆಗೊಮ್ಮೆ ಈಗೊಮ್ಮೆ ಸಾಧಾರಣೆ ಮಳೆಯಾಗುತ್ತಿದೆ. ಮಳೆಯ ಪರಿಣಾಮ ರಸ್ತೆಯು ಸಂಪೂರ್ಣ ಕೆಸರು ಗೆದ್ದಯಾಗಿ, ಸಂಚಾರಕ್ಕೆ ತೀವ್ರ ಅಡಚಣೆ ಎದುರಾಗಿದೆ. ವಾಹನ ಸವಾರರು ಜಾರಿ ಬೀಳುತ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ.</p>.<p>ಪಟ್ಟಣದ ಎಂ.ಜಿ.ವೃತ್ತದಲ್ಲಿ ಎಎಸ್ಐ ನಾಗರಾಜ್ ಮತ್ತು ಪೋಲಿಸ್ ಸಿಬ್ಬಂದಿ ಹಲವು ಜಾರುವ ರಸ್ತೆಯ ಬಗ್ಗೆ ಎಚ್ಚರಿಕೆಯ ಸಂದೇಶ ಹಾಕಿ ಜನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಮಳೆಗಾಲ ಮುಗಿಯುವವರೆಗೆ ಜಾರುವ ರಸ್ತೆಗಳಲ್ಲಿ ಸಂಚಾರ ಪೊಲೀಸರು ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>