ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಸೌರಭ ಇಂದು

Last Updated 1 ಜನವರಿ 2021, 2:08 IST
ಅಕ್ಷರ ಗಾತ್ರ

ಚಿಂತಾಮಣಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜ. 1ರಂದು ಮಧ್ಯಾಹ್ನ 1ಗಂಟೆಗೆ ತಾಲ್ಲೂಕಿನ ಕೈವಾರದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ತಿಳಿಸಿದ್ದಾರೆ.

ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಂ ಅಧ್ಯಕ್ಷತೆಯಲ್ಲಿ ಶಾಸಕ ಎಂ. ಕೃಷ್ಣಾರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾ ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯೆ ಎನ್. ಪವಿತ್ರಾ ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್. ನಾಗರಾಜ್, ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್. ರಘು ಭಾಗವಹಿಸುತ್ತಾರೆ.

ಗೊಲ್ಲಹಳ್ಳಿ ಶಿವಪ್ರಸಾದ್ ತಂಡದಿಂದ ಜನಪದ ಗಾಯನ, ಮಹಾಲಿಂಗಯ್ಯ ಮಠದ್ ಮತ್ತು ತಂಡದಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಕೈವಾರ ರಾಮಣ್ಣ ಮತ್ತು ತಂಡದಿಂದ ತತ್ವಪದಗಳ ಗಾಯನ, ಜಯನಾಟ್ಯ ಕಲಾ ಅಕಾಡೆಮಿಯಿಂದ ಸಮೂಹ ನೃತ್ಯರೂಪಕ, ನಾಡೋಜ ಪ್ರಶಸ್ತಿ ಪುರಸ್ಕೃತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಮತ್ತು ತಂಡದಿಂದ ತಮಟೆ ವಾದನ, ಜಗಮಕೋಟೆಯ ಎನ್. ಮರಿಯಪ್ಪ ತಂಡದಿಂದ ವೀರಗಾಸೆ, ಎಸ್. ಗೊಲ್ಲಹಳ್ಳಿ ನಾರಾಯಣಪ್ಪ ಮತ್ತು ತಂಡದಿಂದ ಕೀಲು ಕುದುರೆ/ಗಾರುಡಿ ಗೊಂಬೆ, ಮೈಸೂರಿನ ಪಲ್ಲವಿ ಮತ್ತು ಐಶ್ವರ್ಯ ತಂಡದಿಂದ ಪೂಜಾ ಕುಣಿತ ಮತ್ತು ಒನಕೆ ಕುಣಿತವಿದೆ.

ಎ.ಎಲ್. ವೆಂಕಟೇಶಪ್ಪ ಮತ್ತು ತಂಡದಿಂದ ಕಥಾಕೀರ್ತನ, ಬೊಮ್ಮಲಾಟಪುರದ ಶಂಕರಪ್ಪ ಮತ್ತು ತಂಡದಿಂದ ತೊಗಲು ಬೊಂಬೆಯಾಟ, ಬಿಜಾಪುರದ ಶಿವನಗೌಡ ಕೋಟಿ ಮತ್ತು ತಂಡದಿಂದ ಶ್ರೀಕೃಷ್ಣ ಪಾರಿಜಾತ ಕಾರ್ಯಕ್ರಮವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT