‘ನಾವು ಅಣ್ಣತಮ್ಮಂದಿರು ಈ ರೀತಿಯ ನಾಲ್ಕು ಯಂತ್ರ ಇಟ್ಟುಕೊಂಡಿದ್ದೇವೆ. 2015ರಿಂದ ಇದನ್ನೇ ನಾವು ಜೀವನೋಪಾಯ ಮಾಡಿಕೊಂಡಿದ್ದೇವೆ. ಕಟಾವಾಗಿ ಒಣಗಿಸಿದ ರಾಗಿಯನ್ನು ಯಂತ್ರದಲ್ಲಿ ತೆನೆ ಸಮೇತ ಹಾಕಿ ಶುದ್ಧೀಕರಿಸುತ್ತೇವೆ. ಈ ಯಂತ್ರದಲ್ಲಿ ಕಸ ಕಡ್ಡಿ, ಕಲ್ಲು, ಮಣ್ಣನ್ನು ಸುಲಭವಾಗಿ ಬೇರ್ಪಡಿಸಬಹುದು. ಅತ್ಯಂತ ಕಡಿಮೆ ಸಮಯದಲ್ಲಿ ಗುಣಮಟ್ಟದ ರಾಗಿ ರೈತರಿಗೆ ಲಭಿಸುತ್ತದೆ. ತೆನೆಯಾದರೆ ಒಂದು ಪಲ್ಲಕ್ಕೆ ₹100, ಕಸಕಡ್ಡಿ ಇರುವ ರಾಗಿಯಾದರೆ ಒಂದು ಪಲ್ಲಕ್ಕೆ ₹80 ಪಡೆಯುತ್ತೇವೆ’ ಎಂದು ಯಂತ್ರದ ಮಾಲೀಕರಾದ ಅಂಕತಟ್ಟಿ ಮುನಿರಾಜು ಮತ್ತು ಶ್ರೀನಿವಾಸ್ ತಿಳಿಸಿದರು.