<p><strong>ಶಿಡ್ಲಘಟ್ಟ</strong>: ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಮಿಕರ ಕೊರತೆ ಬಹಳಷ್ಟಿದೆ. ಸಕಾಲದಲ್ಲಿ ಕೊಯ್ಲು, ಒಕ್ಕಣೆಮಾಡಲು ಕಷ್ಟವಾಗುವಂಥ ಪರಿಸ್ಥಿತಿ ಇದೆ. ಈ ಕಾರಣದಿಂದ ರೈತರು ತಾಂತ್ರಿಕತೆಯ, ಯಂತ್ರಗಳ ಮೊರೆಹೋಗುತ್ತಿದ್ದಾರೆ. ಈಗೀಗ ತಾಲ್ಲೂಕಿಗೆ ಕೊಯ್ಲು ಮಾಡುವ ಯಂತ್ರಗಳು ಹಾಗೂ ಒಕ್ಕಣೆಯ ನಂತರ ಧಾನ್ಯ ಶುದ್ಧೀಕರಣ ಯಂತ್ರಗಳೂ ಆಗಮಿಸಿವೆ.</p>.<p>ತಾಲ್ಲೂಕಿನಲ್ಲಿ ರಾಗಿ ಶುದ್ಧೀಕರಣ ಯಂತ್ರಗಳಿಗೆ ಬೇಡಿಕೆ ಹೆಚ್ಚಿದ್ದು, ರೈತರು ಯಂತ್ರಗಳು ಕೆಲಸ ಮಾಡುತ್ತಿರುವಲ್ಲಿಗೆ ಬಂದು ಮುಂಗಡವಾಗಿ ಬುಕ್ಕಿಂಗ್ ಮಾಡುತ್ತಿದ್ದಾರೆ. ಒಬ್ಬೊಬ್ಬ ರೈತರೂ ಐದಾರು ದಿನಗಳು ಕಾಯುವ ರೀತಿಯಲ್ಲಿ ಈ ಯಂತ್ರಗಳಿಗೆ ಬೇಡಿಕೆ ಕುದುರಿದೆ.</p>.<p>ಕೃಷಿ ಯಂತ್ರೋಪಕರಣಗಳ ವಿನ್ಯಾಸ ಮಾಡುವ ತಜ್ಞರು ರೈತರ ಅವಶ್ಯಕತೆಗಳನ್ನು ಮನಗಂಡು ಅವರ ಅನುಕೂಲವಾಗುವ ರೀತಿಯಲ್ಲಿ ಸಾಕಷ್ಟು ಕೃಷಿ ಯಂತ್ರಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಅವುಗಳಲ್ಲಿ ರಾಗಿ ಶುದ್ಧೀಕರಣ ಯಂತ್ರವೂ ಸೇರಿದೆ.</p>.<p>ಸಾಮಾನ್ಯವಾಗಿ ಒಕ್ಕಣೆ ಮಾಡಿದ ನಂತರ ಧಾನ್ಯಗಳನ್ನು ಶುದ್ಧೀಕರಿಸಲು ತೂರಲಾಗುತ್ತದೆ. ಇದು ಒಕ್ಕಣೆ ಮಾಡಿದ ತಕ್ಷಣ ಆಗಬೇಕಾದ ಕೆಲಸ. ಸಕಾಲದಲ್ಲಿ ಇದು ಆಗದಿದ್ದರೆ ರೈತರು ಉಳಿದ ಕೃಷಿ ಕೆಲಸ ಕಾರ್ಯಗಳತ್ತ ಗಮನ ನೀಡಲು ಆಗುವುದಿಲ್ಲ. ಹಾಗಾಗಿ ಇದೀಗ ಎಲ್ಲರೂ ಈ ಕೃಷಿ ಯಂತ್ರಗಳ ಮೊರೆಹೋಗುತ್ತಿದ್ದಾರೆ.</p>.<p>‘ನಾವು ಅಣ್ಣತಮ್ಮಂದಿರು ಈ ರೀತಿಯ ನಾಲ್ಕು ಯಂತ್ರ ಇಟ್ಟುಕೊಂಡಿದ್ದೇವೆ. 2015ರಿಂದ ಇದನ್ನೇ ನಾವು ಜೀವನೋಪಾಯ ಮಾಡಿಕೊಂಡಿದ್ದೇವೆ. ಕಟಾವಾಗಿ ಒಣಗಿಸಿದ ರಾಗಿಯನ್ನು ಯಂತ್ರದಲ್ಲಿ ತೆನೆ ಸಮೇತ ಹಾಕಿ ಶುದ್ಧೀಕರಿಸುತ್ತೇವೆ. ಈ ಯಂತ್ರದಲ್ಲಿ ಕಸ ಕಡ್ಡಿ, ಕಲ್ಲು, ಮಣ್ಣನ್ನು ಸುಲಭವಾಗಿ ಬೇರ್ಪಡಿಸಬಹುದು. ಅತ್ಯಂತ ಕಡಿಮೆ ಸಮಯದಲ್ಲಿ ಗುಣಮಟ್ಟದ ರಾಗಿ ರೈತರಿಗೆ ಲಭಿಸುತ್ತದೆ. ತೆನೆಯಾದರೆ ಒಂದು ಪಲ್ಲಕ್ಕೆ ₹100, ಕಸಕಡ್ಡಿ ಇರುವ ರಾಗಿಯಾದರೆ ಒಂದು ಪಲ್ಲಕ್ಕೆ ₹80 ಪಡೆಯುತ್ತೇವೆ’ ಎಂದು ಯಂತ್ರದ ಮಾಲೀಕರಾದ ಅಂಕತಟ್ಟಿ ಮುನಿರಾಜು ಮತ್ತು ಶ್ರೀನಿವಾಸ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ</strong>: ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಮಿಕರ ಕೊರತೆ ಬಹಳಷ್ಟಿದೆ. ಸಕಾಲದಲ್ಲಿ ಕೊಯ್ಲು, ಒಕ್ಕಣೆಮಾಡಲು ಕಷ್ಟವಾಗುವಂಥ ಪರಿಸ್ಥಿತಿ ಇದೆ. ಈ ಕಾರಣದಿಂದ ರೈತರು ತಾಂತ್ರಿಕತೆಯ, ಯಂತ್ರಗಳ ಮೊರೆಹೋಗುತ್ತಿದ್ದಾರೆ. ಈಗೀಗ ತಾಲ್ಲೂಕಿಗೆ ಕೊಯ್ಲು ಮಾಡುವ ಯಂತ್ರಗಳು ಹಾಗೂ ಒಕ್ಕಣೆಯ ನಂತರ ಧಾನ್ಯ ಶುದ್ಧೀಕರಣ ಯಂತ್ರಗಳೂ ಆಗಮಿಸಿವೆ.</p>.<p>ತಾಲ್ಲೂಕಿನಲ್ಲಿ ರಾಗಿ ಶುದ್ಧೀಕರಣ ಯಂತ್ರಗಳಿಗೆ ಬೇಡಿಕೆ ಹೆಚ್ಚಿದ್ದು, ರೈತರು ಯಂತ್ರಗಳು ಕೆಲಸ ಮಾಡುತ್ತಿರುವಲ್ಲಿಗೆ ಬಂದು ಮುಂಗಡವಾಗಿ ಬುಕ್ಕಿಂಗ್ ಮಾಡುತ್ತಿದ್ದಾರೆ. ಒಬ್ಬೊಬ್ಬ ರೈತರೂ ಐದಾರು ದಿನಗಳು ಕಾಯುವ ರೀತಿಯಲ್ಲಿ ಈ ಯಂತ್ರಗಳಿಗೆ ಬೇಡಿಕೆ ಕುದುರಿದೆ.</p>.<p>ಕೃಷಿ ಯಂತ್ರೋಪಕರಣಗಳ ವಿನ್ಯಾಸ ಮಾಡುವ ತಜ್ಞರು ರೈತರ ಅವಶ್ಯಕತೆಗಳನ್ನು ಮನಗಂಡು ಅವರ ಅನುಕೂಲವಾಗುವ ರೀತಿಯಲ್ಲಿ ಸಾಕಷ್ಟು ಕೃಷಿ ಯಂತ್ರಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಅವುಗಳಲ್ಲಿ ರಾಗಿ ಶುದ್ಧೀಕರಣ ಯಂತ್ರವೂ ಸೇರಿದೆ.</p>.<p>ಸಾಮಾನ್ಯವಾಗಿ ಒಕ್ಕಣೆ ಮಾಡಿದ ನಂತರ ಧಾನ್ಯಗಳನ್ನು ಶುದ್ಧೀಕರಿಸಲು ತೂರಲಾಗುತ್ತದೆ. ಇದು ಒಕ್ಕಣೆ ಮಾಡಿದ ತಕ್ಷಣ ಆಗಬೇಕಾದ ಕೆಲಸ. ಸಕಾಲದಲ್ಲಿ ಇದು ಆಗದಿದ್ದರೆ ರೈತರು ಉಳಿದ ಕೃಷಿ ಕೆಲಸ ಕಾರ್ಯಗಳತ್ತ ಗಮನ ನೀಡಲು ಆಗುವುದಿಲ್ಲ. ಹಾಗಾಗಿ ಇದೀಗ ಎಲ್ಲರೂ ಈ ಕೃಷಿ ಯಂತ್ರಗಳ ಮೊರೆಹೋಗುತ್ತಿದ್ದಾರೆ.</p>.<p>‘ನಾವು ಅಣ್ಣತಮ್ಮಂದಿರು ಈ ರೀತಿಯ ನಾಲ್ಕು ಯಂತ್ರ ಇಟ್ಟುಕೊಂಡಿದ್ದೇವೆ. 2015ರಿಂದ ಇದನ್ನೇ ನಾವು ಜೀವನೋಪಾಯ ಮಾಡಿಕೊಂಡಿದ್ದೇವೆ. ಕಟಾವಾಗಿ ಒಣಗಿಸಿದ ರಾಗಿಯನ್ನು ಯಂತ್ರದಲ್ಲಿ ತೆನೆ ಸಮೇತ ಹಾಕಿ ಶುದ್ಧೀಕರಿಸುತ್ತೇವೆ. ಈ ಯಂತ್ರದಲ್ಲಿ ಕಸ ಕಡ್ಡಿ, ಕಲ್ಲು, ಮಣ್ಣನ್ನು ಸುಲಭವಾಗಿ ಬೇರ್ಪಡಿಸಬಹುದು. ಅತ್ಯಂತ ಕಡಿಮೆ ಸಮಯದಲ್ಲಿ ಗುಣಮಟ್ಟದ ರಾಗಿ ರೈತರಿಗೆ ಲಭಿಸುತ್ತದೆ. ತೆನೆಯಾದರೆ ಒಂದು ಪಲ್ಲಕ್ಕೆ ₹100, ಕಸಕಡ್ಡಿ ಇರುವ ರಾಗಿಯಾದರೆ ಒಂದು ಪಲ್ಲಕ್ಕೆ ₹80 ಪಡೆಯುತ್ತೇವೆ’ ಎಂದು ಯಂತ್ರದ ಮಾಲೀಕರಾದ ಅಂಕತಟ್ಟಿ ಮುನಿರಾಜು ಮತ್ತು ಶ್ರೀನಿವಾಸ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>