ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇಳೂರು: ರಸ್ತೆ ತಿರುವು ವಿಸ್ತರಣೆಗೆ ಆಗ್ರಹ

Last Updated 27 ಆಗಸ್ಟ್ 2021, 3:02 IST
ಅಕ್ಷರ ಗಾತ್ರ

ಚೇಳೂರು: ತಾಲ್ಲೂಕಿನ ಕೊಂಡಿಕೊಂಡೆ ಗಂಗಮ್ಮ ಬೆಟ್ಟದ ಕೆಳಗಿನ ರಸ್ತೆ ತಿರುವನ್ನು ವಿಸ್ತರಣೆ ಮಾಡಿ ಪ್ರತಿನಿತ್ಯ ನಡೆಯುತ್ತಿರುವ ಅಪಘಾತಗಳಿಂದ ಅಮೂಲ್ಯ ಜೀವಗಳನ್ನು ಕಾಪಾಡಬೇಕು ಎಂದು ಕೊಂಡಿಕೊಂಡೆ ಮಜರಾ ಐದು ಗ್ರಾಮಗಳ ಜನರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಚೇಳೂರಿನಿಂದ ಬಾಗೇಪಲ್ಲಿಗೆ ಹೋಗುವ ಮುಖ್ಯರಸ್ತೆಯ ಷೇರ್‌ಖಾನ್ ಕೋಟೆ, ಪುಲ್ಲುಗಲ್ಲು ಮತ್ತು ಮೂಗಿರೆಡ್ಡಿಪಲ್ಲಿಯ ಹಲವು ಕಡೆ ಅವೈಜ್ಞಾನಿಕವಾಗಿ ರಸ್ತೆ ತಿರುವು ಇದೆ. ಇದರಿಂದ ದ್ವಿಚಕ್ರವಾಹನ ಸವಾರರು ಪ್ರಾಣ ಭೀತಿಯಿಂದ ಸಂಚರಿಸುವ ದುಃಸ್ಥಿತಿ ಎದುರಾಗಿದೆ.

‌ಒಂದು ವರ್ಷದ ಹಿಂದೆ ಈ ತಿರುವು ಮೂವರನ್ನು ಬಲಿ ತೆಗೆದುಕೊಂಡಿತ್ತು. ನಂತರದ ದಿನಗಳಲ್ಲಿ ಚಿಂತಾಮಣಿ ನಗರದ ದಂಪತಿ ಇಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಜೊತೆಗೆ ವಾರದ ಹಿಂದೆ ಗೊಟ್ಲಪಲ್ಲಿ ಗ್ರಾಮದ ಪಿಯು ವಿದ್ಯಾರ್ಥಿಯ ದ್ವಿಚಕ್ರವಾಹನಕ್ಕೆ ಟೆಂಪೊ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಈ ಎಲ್ಲಾ ಅಪಘಾತ ಕಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಪಾಯದ ರಸ್ತೆ ತಿರುವು ಎಂದು ನಾಮಫಲಕ ಹಾಕಿದ್ದರು.

ಆದರೆ, ರಸ್ತೆ ತಿರುವಿನಲ್ಲಿ ಗಿಡಗಳು ಬೆಳೆದಿದ್ದು, ಎದುರುಗಡೆಯಿಂದ ಬರುವ ವಾಹನಗಳು ಕಾಣದೇ ಅಪಘಾತ ಸಂಭವಿಸುತ್ತಿವೆ. ಅತಿವೇಗವಾಗಿ ಬಂದು ಅಪಘಾತಗಳಾಗಿ ಮೃತಪಟ್ಟುತ್ತಿರುವುದು ಮತ್ತೊಂದುಕಾರಣವಾಗಿದೆ.

‘ಮುಖ್ಯರಸ್ತೆಯಲ್ಲಿ ಈ ತಿರುವು ಇದೆ. ಅಲ್ಲಿ ವಾಹನ ಸವಾರರಿಗೆ ಮುನ್ಸೂಚನೆ ನೀಡುವ ರಸ್ತೆಯ ಚಿಹ್ನೆಗಳನ್ನು ಹಾಕಿರಬೇಕು. ಜತೆಗೆ, ವಾಹನಗಳವೇಗಮಿತಿನಿಯಂತ್ರಿಸುವುದಕ್ಕೂಸೂಕ್ತಸುರಕ್ಷಾಕ್ರಮಅಳವಡಿಸಬೇಕು.ರಸ್ತೆವಿಸ್ತರಣೆಮಾಡಬೇಕು’ಎಂದುಮೂಗಿರೆಡ್ಡಿಪಲ್ಲಿ ನಿವಾಸಿ ವೆಂಕಟರವಣ ನಾಯ್ಕ್ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT