ಚಿಕ್ಕಬಳ್ಳಾಪುರ: ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ಅಶೋಕ ಕುಮಾರ್ ನೇತೃತ್ವದ ಬರ ಅಧ್ಯಯನ ತಂಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದೆ.
ಮೊದಲಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ತಂಡ ನಂತರ ಚೊಕ್ಕಹಳ್ಳಿಗೆ ಭೇಟಿ ನೀಡಿತು.
ರೈತ ಮಂಜುನಾಥ್ ಅವರು ಜಮೀನು ಪರಿಶೀಲಿಸಿತು.
ಎರಡು ಎಕರೆಯಲ್ಲಿ ರಾಗಿ, ಹುರುಳಿ, ಜೋಳ, ನೆಲಗಡಲೆ ಇಟ್ಟಿದ್ದೆವು. ಬೆಳೆ ಪೂರ್ಣ ಹಾಳಾಗಿದೆ. ₹ 2 ಲಕ್ಷ ನಷ್ಟವಾಗಿದೆ ಎಂದು ಮಂಜುನಾಥ್ ಅಳಲು ತೋಡಿಕೊಂಡರು.