ಶೇ 10ರಷ್ಟು ಬೆಳೆ ಬರುವುದಿಲ್ಲ
‘ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿದೆ. ಅಲ್ಪ ಸ್ವಲ್ಪ ಕಾಯಿ ಕಚ್ಚಿದ್ದ ಮಾವು ಉದುರಲು ಆರಂಭವಾಗಿದೆ. ಹೂವು ಬಿಡುವ ಸಂದರ್ಭದಲ್ಲಿಯೇ ಬಿಸಿಲಿನ ತಾಪಕ್ಕೆ ಹೂಗಳು ಉದುರಿತ್ತು. ಈಗ ಅಲ್ಪಸ್ವಲ್ಪ ಇದ್ದ ಕಾಯಿ ಸಹ ಉದುರಿ ಬರಿ ಗಿಡಗಳನ್ನು ನೋಡುವಂತಾಗಿದೆ’ ಎನ್ನುತ್ತಾರೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲು ಗ್ರಾಮದ ಮಾವು ಬೆಳೆಗಾರ ವೆಂಕಟೇಶ್. ‘ಎರಡು ಎಕರೆ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದೇವೆ. ಈ ಮುಂಚಿನ ವರ್ಷಗಳಿಗೆ ಹೋಲಿಸಿದರೆ ಶೇ 10 ಸಹ ಬೆಳೆ ಈ ಬಾರಿ ಇಲ್ಲ. ನಾನು ಈಗಾಗಲೇ ₹ 65 ಸಾವಿರವನ್ನು ಬೆಳೆಗಾಗಿ ಖರ್ಚು ಮಾಡಿದ್ದೇವೆ. ₹ 5 ಸಾವಿರ ವಾಪಸ್ ಬರುವುದು ಸಹ ಅನುಮಾನ’ ಎಂದರು.