ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಗುಡಿಬಂಡೆ ತಹಶೀಲ್ದಾರ್ ಮುನಿರಾಜು, ‘ಮೃತ ಲಕ್ಷ್ಮಯ್ಯ ಅವರಿಗೆ ಎರಡೂವರೆ ಎಕರೆ ಜಮೀನಿದೆ. ಇತ್ತೀಚೆಗೆ ಕೊಳವೆಬಾವಿ ವಿಫಲಗೊಂಡಿತ್ತು. ಜತೆಗೆ ಕೆಲವರ ಬಳಿ ಕೈಸಾಲ ಕೂಡ ಮಾಡಿದ್ದರು’ ಎಂದು ಮೃತರ ಸಹೋದರ ಹೇಳಿಕೆ ನೀಡಿದ್ದಾರೆ. ಸಾವಿನ ನಿಖರ ಕಾರಣ ತನಿಖೆಯ ನಂತರವಷ್ಟೇ ತಿಳಿದು ಬರಬೇಕು’ ಎಂದು ಹೇಳಿದರು.