‘ಸುಬ್ಬಾರೆಡ್ಡಿ ಅವರು ಕೆಲವೇ ತಿಂಗಳಲ್ಲಿ ನಿವೃತ್ತಿಯಾಗುತ್ತಿದ್ದಾರೆ ಎನ್ನುವುದು ತಿಳಿಯುತ್ತಿದ್ದಂತೆ, ಕಳೆದ ಜೂನ್ 18 ರಂದು ಅವರನ್ನು ₨5 ಲಕ್ಷವನ್ನು ವಾಪಸ್ ನೀಡುವಂತೆ ಕೇಳಿದರೆ, ಹಣ ನೀಡಿರುವ ಬಗ್ಗೆ ನಿಮ್ಮಲ್ಲಿ ಏನು ಸಾಕ್ಷಿ ಇದೆ ಎಂದು ಪ್ರಶ್ನಿಸುವ ಜತೆಗೆ ಜಾತಿನಿಂದನೆಯನ್ನು ಸಹ ಮಾಡಿ, ಕೆಲಸದಿಂದ ತೆಗೆದು ಹಾಕಿದರು. ಇದರಿಂದ ಮನನೊಂದು ನಾನು ಆತ್ಮಹತ್ಯೆಗೆ ಸಹ ಯತ್ನಿಸಿದ್ದೆ. ಸಕಾಲಕ್ಕೆ ನನ್ನ ಪತಿ ರಕ್ಷಿಸಿದ ಕಾರಣ ಬದುಕಿಕೊಂಡೆ’ ಎಂದು ತಿಳಿಸಿದರು.