<p><strong>ಚಿಕ್ಕಬಳ್ಳಾಪುರ</strong>: ಒಂದೆಡೆ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಅವರು ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿನ ಬೇರೆ ಪಕ್ಷಗಳ ನಾಯಕರಿಗೆ ಗಾಳ ಹಾಕುತ್ತಲೇ ಇದ್ದಾರೆ. ಅವರ ಆಪರೇಷನ್ ಕಾರ್ಯಾಚರಣೆಯ ದೃಷ್ಟಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ.</p>.<p>ಈ ನಡುವೆಯೇ ಕಾಂಗ್ರೆಸ್ ಮುಖಂಡರೂ ಆದ ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಅವರನ್ನು ರಾಜ್ಯ ಸರ್ಕಾರ ಡಾ ಎಚ್.ನರಸಿಂಹಯ್ಯ ಅಭಿವೃದ್ದಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿದೆ. ಈ ಮೂಲಕ ಗೌರಿಬಿದನೂರು ರಾಜಕೀಯ ಮತ್ತೊಂದು ಸುತ್ತಿನಲ್ಲಿ ರಂಗೇರಿದೆ.</p>.<p>ಈ ಇಬ್ಬರು ನಾಯಕರ ದೃಷ್ಟಿ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯ ಮೇಲಿದೆ. ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ರಾಜಕೀಯವನ್ನು ಗಮನಿಸಿದರೆ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ರಾಜಕಾರಣ ಆಗಾಗ್ಗೆ ತೀವ್ರವಾಗಿ ಕಾವೇರುತ್ತಿದೆ.</p>.<p>ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಹಿರಿಯ ನಾಯಕ ಶಿವಶಂಕರ ರೆಡ್ಡಿ ‘ಮಾಜಿ’ ಆಗಿದ್ದಾರೆ. ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಕಾಂಗ್ರೆಸ್ ಬೆಂಬಲಿಸಿದ್ದಾರೆ. </p>.<p>ಮಾಜಿ ಸಚಿವರೂ ಆದ ಶಿವಶಂಕರ ರೆಡ್ಡಿ ರಾಜ್ಯ ಮಟ್ಟದಲ್ಲಿನ ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನೇ ಪಡೆಯಬಹುದಿತ್ತು. ಆದರೆ ಅವರು ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯಚಟುವಟಿಕೆ ಹೊಂದಿರುವ ಎಚ್.ಎನ್.ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಈ ಮೂಲಕ ‘ಮಾಜಿ’ಯಾದರೂ ಕ್ಷೇತ್ರದ ಮೇಲೆ ಹಿಡಿತ ಸಡಿಲಿಸಬಾರದು ಎನ್ನುವ ಇರಾದೆ ಅವರದ್ದು.</p>.<p>ಶಿವಶಂಕರ ರೆಡ್ಡಿ ಅವರಿಗೆ ಅಧ್ಯಕ್ಷ ಸ್ಥಾನ ದೊರೆತಿರುವುದಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಅವರ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ. ಮತ್ತೆ ತಮ್ಮ ನಾಯಕನಿಗೆ ರಾಜಕೀಯವಾಗಿ ಹಿಡಿದ ದೊರೆತಿದೆ ಎಂದೇ ಖುಷಿಯಲ್ಲಿ ಇದ್ದಾರೆ.</p>.<p>2023ರ ವಿಧಾನಸಭಾ ಚುನಾವಣೆ ಪೂರ್ವದಿಂದಲೂ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನ ನಾಯಕರು, ಕಾರ್ಯಕರ್ತರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಹೀಗೆ ಎಲ್ಲ ಪಕ್ಷಗಳ ನಾಯಕರು, ಕಾರ್ಯಕರ್ತರು ಗೌಡರ ಗೆಲುವಿಗೆ ಕಾರಣ. </p>.<p>ಚುನಾವಣೆಯ ಗೆಲುವಿನ ತರುವಾಯವೂ ಪುಟ್ಟಸ್ವಾಮಿಗೌಡ ಅವರ ಆಪರೇಷನ್ ಕಾರ್ಯಾಚರಣೆ ನಿಂತಿಲ್ಲ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಹಿಡಿದು ಕ್ಷೇತ್ರದಲ್ಲಿನ ಎಲ್ಲ ಹಂತದಲ್ಲಿನ ಚುನಾವಣೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪುಟ್ಟಸ್ವಾಮಿಗೌಡ ಅವರು ಮತ್ತೆ ಮುಖಂಡರನ್ನು ಸೆಳೆಯುತ್ತಿದ್ದಾರೆ. </p>.<p>ಕಾಂಗ್ರೆಸ್ ಬೆಂಬಲಿಸಿರುವ ಕೆ.ಎಚ್.ಪುಟ್ಟಸ್ವಾಮಿ ಗೌಡ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಬಣದಿಂದಲೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆ ಹೆಚ್ಚಿದೆ. ಮತ್ತೊಂದೆಡೆ ಚದುರುತ್ತಿರುವ ಪಕ್ಷದ ಮುಖಂಡರನ್ನು ಕಾರ್ಯಕರ್ತರನ್ನು ಒಗ್ಗೂಡಿಸುವ ಜವಾಬ್ದಾರಿ ಶಿವಶಂಕರ ರೆಡ್ಡಿ ಅವರ ಮೇಲಿದೆ.</p>.<p>ಹೀಗೆ ಶಿವಶಂಕರ ರೆಡ್ಡಿ ಅವರನ್ನು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿರುವುದು ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಚರ್ಚೆಗೂ ಕಾರಣವಾಗಿದೆ. </p>.<p>ನಾಮನಿರ್ದೇಶನದ್ದೂ ಹಗ್ಗಜಗ್ಗಾಟ: ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಮತ್ತು ಮಾಜಿ ಶಾಸಕರ ನಡುವಿನ ಹಗ್ಗಜಗ್ಗಾಟದಿಂದ ಇಂದಿಗೂ ನಾಮನಿರ್ದೇಶನದ ಆಯ್ಕೆಗಳು ಅಂತಿಮವಾಗಿಲ್ಲ. ಈ ಕಾರಣದಿಂದ ತಮ್ಮ ಬೆಂಬಲಿಗರಿಗೆ ನಾಮನಿರ್ದೇಶನದ ಹುದ್ದೆಗಳನ್ನು ಕೊಡಿಸಲು ಈ ಇಬ್ಬರು ನಾಯಕರಿಗೂ ಸಾಧ್ಯವಾಗಿಲ್ಲ.</p>.<p>ಮುಂದುವರಿದ ಗೌಡರ ಆಪರೇಷನ್ ಜಿ.ಪಂ, ತಾ.ಪಂ ಚುನಾವಣೆಯೇ ದೃಷ್ಟಿ ಸಾಧ್ಯವಾಗದ ನಾಮನಿರ್ದೇಶನ ಹುದ್ದೆಗೆ ನೇಮಕ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ಒಂದೆಡೆ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಅವರು ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿನ ಬೇರೆ ಪಕ್ಷಗಳ ನಾಯಕರಿಗೆ ಗಾಳ ಹಾಕುತ್ತಲೇ ಇದ್ದಾರೆ. ಅವರ ಆಪರೇಷನ್ ಕಾರ್ಯಾಚರಣೆಯ ದೃಷ್ಟಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ.</p>.<p>ಈ ನಡುವೆಯೇ ಕಾಂಗ್ರೆಸ್ ಮುಖಂಡರೂ ಆದ ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಅವರನ್ನು ರಾಜ್ಯ ಸರ್ಕಾರ ಡಾ ಎಚ್.ನರಸಿಂಹಯ್ಯ ಅಭಿವೃದ್ದಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿದೆ. ಈ ಮೂಲಕ ಗೌರಿಬಿದನೂರು ರಾಜಕೀಯ ಮತ್ತೊಂದು ಸುತ್ತಿನಲ್ಲಿ ರಂಗೇರಿದೆ.</p>.<p>ಈ ಇಬ್ಬರು ನಾಯಕರ ದೃಷ್ಟಿ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯ ಮೇಲಿದೆ. ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ರಾಜಕೀಯವನ್ನು ಗಮನಿಸಿದರೆ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ರಾಜಕಾರಣ ಆಗಾಗ್ಗೆ ತೀವ್ರವಾಗಿ ಕಾವೇರುತ್ತಿದೆ.</p>.<p>ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಹಿರಿಯ ನಾಯಕ ಶಿವಶಂಕರ ರೆಡ್ಡಿ ‘ಮಾಜಿ’ ಆಗಿದ್ದಾರೆ. ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಕಾಂಗ್ರೆಸ್ ಬೆಂಬಲಿಸಿದ್ದಾರೆ. </p>.<p>ಮಾಜಿ ಸಚಿವರೂ ಆದ ಶಿವಶಂಕರ ರೆಡ್ಡಿ ರಾಜ್ಯ ಮಟ್ಟದಲ್ಲಿನ ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನೇ ಪಡೆಯಬಹುದಿತ್ತು. ಆದರೆ ಅವರು ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯಚಟುವಟಿಕೆ ಹೊಂದಿರುವ ಎಚ್.ಎನ್.ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಈ ಮೂಲಕ ‘ಮಾಜಿ’ಯಾದರೂ ಕ್ಷೇತ್ರದ ಮೇಲೆ ಹಿಡಿತ ಸಡಿಲಿಸಬಾರದು ಎನ್ನುವ ಇರಾದೆ ಅವರದ್ದು.</p>.<p>ಶಿವಶಂಕರ ರೆಡ್ಡಿ ಅವರಿಗೆ ಅಧ್ಯಕ್ಷ ಸ್ಥಾನ ದೊರೆತಿರುವುದಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಅವರ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ. ಮತ್ತೆ ತಮ್ಮ ನಾಯಕನಿಗೆ ರಾಜಕೀಯವಾಗಿ ಹಿಡಿದ ದೊರೆತಿದೆ ಎಂದೇ ಖುಷಿಯಲ್ಲಿ ಇದ್ದಾರೆ.</p>.<p>2023ರ ವಿಧಾನಸಭಾ ಚುನಾವಣೆ ಪೂರ್ವದಿಂದಲೂ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನ ನಾಯಕರು, ಕಾರ್ಯಕರ್ತರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಹೀಗೆ ಎಲ್ಲ ಪಕ್ಷಗಳ ನಾಯಕರು, ಕಾರ್ಯಕರ್ತರು ಗೌಡರ ಗೆಲುವಿಗೆ ಕಾರಣ. </p>.<p>ಚುನಾವಣೆಯ ಗೆಲುವಿನ ತರುವಾಯವೂ ಪುಟ್ಟಸ್ವಾಮಿಗೌಡ ಅವರ ಆಪರೇಷನ್ ಕಾರ್ಯಾಚರಣೆ ನಿಂತಿಲ್ಲ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಹಿಡಿದು ಕ್ಷೇತ್ರದಲ್ಲಿನ ಎಲ್ಲ ಹಂತದಲ್ಲಿನ ಚುನಾವಣೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪುಟ್ಟಸ್ವಾಮಿಗೌಡ ಅವರು ಮತ್ತೆ ಮುಖಂಡರನ್ನು ಸೆಳೆಯುತ್ತಿದ್ದಾರೆ. </p>.<p>ಕಾಂಗ್ರೆಸ್ ಬೆಂಬಲಿಸಿರುವ ಕೆ.ಎಚ್.ಪುಟ್ಟಸ್ವಾಮಿ ಗೌಡ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಬಣದಿಂದಲೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆ ಹೆಚ್ಚಿದೆ. ಮತ್ತೊಂದೆಡೆ ಚದುರುತ್ತಿರುವ ಪಕ್ಷದ ಮುಖಂಡರನ್ನು ಕಾರ್ಯಕರ್ತರನ್ನು ಒಗ್ಗೂಡಿಸುವ ಜವಾಬ್ದಾರಿ ಶಿವಶಂಕರ ರೆಡ್ಡಿ ಅವರ ಮೇಲಿದೆ.</p>.<p>ಹೀಗೆ ಶಿವಶಂಕರ ರೆಡ್ಡಿ ಅವರನ್ನು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿರುವುದು ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಚರ್ಚೆಗೂ ಕಾರಣವಾಗಿದೆ. </p>.<p>ನಾಮನಿರ್ದೇಶನದ್ದೂ ಹಗ್ಗಜಗ್ಗಾಟ: ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಮತ್ತು ಮಾಜಿ ಶಾಸಕರ ನಡುವಿನ ಹಗ್ಗಜಗ್ಗಾಟದಿಂದ ಇಂದಿಗೂ ನಾಮನಿರ್ದೇಶನದ ಆಯ್ಕೆಗಳು ಅಂತಿಮವಾಗಿಲ್ಲ. ಈ ಕಾರಣದಿಂದ ತಮ್ಮ ಬೆಂಬಲಿಗರಿಗೆ ನಾಮನಿರ್ದೇಶನದ ಹುದ್ದೆಗಳನ್ನು ಕೊಡಿಸಲು ಈ ಇಬ್ಬರು ನಾಯಕರಿಗೂ ಸಾಧ್ಯವಾಗಿಲ್ಲ.</p>.<p>ಮುಂದುವರಿದ ಗೌಡರ ಆಪರೇಷನ್ ಜಿ.ಪಂ, ತಾ.ಪಂ ಚುನಾವಣೆಯೇ ದೃಷ್ಟಿ ಸಾಧ್ಯವಾಗದ ನಾಮನಿರ್ದೇಶನ ಹುದ್ದೆಗೆ ನೇಮಕ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>