<p><strong>ಗೌರಿಬಿದನೂರು</strong>: ತಾಲ್ಲೂಕಿನ ಕಲ್ಲೂಡಿ ಗ್ರಾಮದ ಕಲ್ಲಿನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಮಾದಿಗ ದಂಡೋರ ಹಾಗೂ ಭಾರತೀಯರ ಸೇವಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಭಾನುವಾರ ಏರ್ಪಡಿಸಲಾಯಿತು. </p>.<p>ಆದಿಜಾಂಬವ ಮಹಾಸಂಸ್ಥಾನ ಮಠ ಕೋಡಿಹಳ್ಳಿ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ದಂಪತಿಗಳ ಜೀವನದಲ್ಲಿ ಸಣ್ಣಪುಟ್ಟ ಗಲಾಟೆ, ಜಗಳ, ವೈಮನಸ್ಸು ಬರುವುದು ಸರ್ವೇ ಸಾಮಾನ್ಯ. ಎಲ್ಲವನ್ನೂ ಇಬ್ಬರೂ ಪ್ರೀತಿಯಿಂದ ಸ್ವೀಕರಿಸುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. </p>.<p>ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಮಾತನಾಡಿ, ವಿಚಾರವಾದಿಗಳು ಮತ್ತು ಬುದ್ದಿವಂತರು ಇಂತಹ ಸಾಮೂಹಿಕ ವಿವಾಹಗಳಲ್ಲಿ ಮದುವೆ ಮಾಡಿಕೊಳ್ಳುತ್ತಾರೆ ಎಂದರು.</p>.<p>ಕರ್ನಾಟಕ ಮಾದಿಗ ದಂಡೋರ ರಾಜ್ಯ ಘಟಕದ ಅಧ್ಯಕ್ಷ ಎಂ. ಶಂಕರಪ್ಪ ಮಾತನಾಡಿ, ನವ ದಂಪತಿಗಳು ಯಾವುದೇ ಕಾರಣಕ್ಕೂ ಜಗಳವಾಡಬಾರದು ಎಂದರು.</p>.<p>ಕಾರ್ಯಕ್ರಮದಲ್ಲಿ ಭಾರತೀಯ ಸೇನಾ ಸಮಿತಿ ರಾಷ್ಟ್ರ ಅಧ್ಯಕ್ಷ ಹೂಡಿ ರಾಮಚಂದ್ರ, ಅಮರ್, ಕಾಂತರಾಜು, ಪ್ರಕಾಶ್, ಕೃಷ್ಣಪ್ಪ, ವಿಜಯರಾಘವ, ಎ. ಗಂಗಾಧರಪ್ಪ, ರಾಮಾಂಜಿನಮ್ಮ, ಅರುಂಧತಿ, ನಾಗರಾಜ ನಾಯಕ್, ಬಾಬಣ್ಣ, ಮುನಿಯಪ್ಪ, ಮಲ್ಲಸಂದ್ರ ಗಂಗಾಧರಪ್ಪ, ಎಚ್.ಎಲ್. ವೆಂಕಟೇಶ್, ಜಿ. ನರಸಿಂಹಮೂರ್ತಿ ಪಾಲ್ಗೊಂಡಿದ್ದರು.</p>
<p><strong>ಗೌರಿಬಿದನೂರು</strong>: ತಾಲ್ಲೂಕಿನ ಕಲ್ಲೂಡಿ ಗ್ರಾಮದ ಕಲ್ಲಿನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಮಾದಿಗ ದಂಡೋರ ಹಾಗೂ ಭಾರತೀಯರ ಸೇವಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಭಾನುವಾರ ಏರ್ಪಡಿಸಲಾಯಿತು. </p>.<p>ಆದಿಜಾಂಬವ ಮಹಾಸಂಸ್ಥಾನ ಮಠ ಕೋಡಿಹಳ್ಳಿ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ದಂಪತಿಗಳ ಜೀವನದಲ್ಲಿ ಸಣ್ಣಪುಟ್ಟ ಗಲಾಟೆ, ಜಗಳ, ವೈಮನಸ್ಸು ಬರುವುದು ಸರ್ವೇ ಸಾಮಾನ್ಯ. ಎಲ್ಲವನ್ನೂ ಇಬ್ಬರೂ ಪ್ರೀತಿಯಿಂದ ಸ್ವೀಕರಿಸುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. </p>.<p>ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಮಾತನಾಡಿ, ವಿಚಾರವಾದಿಗಳು ಮತ್ತು ಬುದ್ದಿವಂತರು ಇಂತಹ ಸಾಮೂಹಿಕ ವಿವಾಹಗಳಲ್ಲಿ ಮದುವೆ ಮಾಡಿಕೊಳ್ಳುತ್ತಾರೆ ಎಂದರು.</p>.<p>ಕರ್ನಾಟಕ ಮಾದಿಗ ದಂಡೋರ ರಾಜ್ಯ ಘಟಕದ ಅಧ್ಯಕ್ಷ ಎಂ. ಶಂಕರಪ್ಪ ಮಾತನಾಡಿ, ನವ ದಂಪತಿಗಳು ಯಾವುದೇ ಕಾರಣಕ್ಕೂ ಜಗಳವಾಡಬಾರದು ಎಂದರು.</p>.<p>ಕಾರ್ಯಕ್ರಮದಲ್ಲಿ ಭಾರತೀಯ ಸೇನಾ ಸಮಿತಿ ರಾಷ್ಟ್ರ ಅಧ್ಯಕ್ಷ ಹೂಡಿ ರಾಮಚಂದ್ರ, ಅಮರ್, ಕಾಂತರಾಜು, ಪ್ರಕಾಶ್, ಕೃಷ್ಣಪ್ಪ, ವಿಜಯರಾಘವ, ಎ. ಗಂಗಾಧರಪ್ಪ, ರಾಮಾಂಜಿನಮ್ಮ, ಅರುಂಧತಿ, ನಾಗರಾಜ ನಾಯಕ್, ಬಾಬಣ್ಣ, ಮುನಿಯಪ್ಪ, ಮಲ್ಲಸಂದ್ರ ಗಂಗಾಧರಪ್ಪ, ಎಚ್.ಎಲ್. ವೆಂಕಟೇಶ್, ಜಿ. ನರಸಿಂಹಮೂರ್ತಿ ಪಾಲ್ಗೊಂಡಿದ್ದರು.</p>