ಚಿಕ್ಕಬಳ್ಳಾಪುರ: ತಾಲ್ಲೂಕಿನ ನಾಯನಹಳ್ಳಿಯಜಿ.ಎಸ್. ಪರಮಶಿವಯ್ಯ ನೀರಾವರಿ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರಕ್ಕೆಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿಗೌಡ ಅವರು ಭೇಟಿ ನೀಡಿದ್ದರು.
ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಅವರನ್ನುಶಾಶ್ವತ ನೀರಾವರಿ ಹೋರಾಟ ಸಮಿತಿ ಮತ್ತು ಯುವಶಕ್ತಿ ಸಂಘಟನೆಯ ಸದಸ್ಯರು ಸ್ವಾಗತಿಸಿದರು. ಅಲ್ಲಿಂದ ಅವರನ್ನು ನಾಯಕನಹಳ್ಳಿಗೆ ಕರೆ ತರಲಾಯಿತು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ, ಉಷಾ, ಅಗಲಗುರ್ಕಿ ಚಲಪತಿ, ರತ್ನಮ್ಮ, ವಿಜಯ ಬಾವರೆಡ್ಡಿ, ಪ್ರಭಾ ಹಾಜರಿದ್ದರು.