‘ವಿಜಯನಗರ ಅರಸರಿಗೆ ನೀರಾವರಿಯ ಬಗ್ಗೆ ಇದ್ದ ಕಳಕಳಿಯನ್ನು ಅವರ ಕಾಲದಲ್ಲಿ ನಿರ್ಮಿಸಲಾದ ನೂರಾರು ಕೆರೆ ಕಟ್ಟೆಗಳ ಮೂಲಕವಾಗಿ ಅರಿತುಕೊಳ್ಳಬಹುದಾಗಿದೆ. ಇಂತಹ ದೊಂದು ಸಾಮಾಜಿಕ ಕಾರ್ಯವೈಖರಿಯನ್ನು ಪೆರಿಯ ಸಮುದ್ರದಲ್ಲಿ (ಪೆರೇಸಂದ್ರ), ತಂದೆ ತಾಯಿಯರ ಮೇಲಿನ ಪ್ರೀತಿ ಗೌರವ, ಊರ ಜನರಿಗೆ ಮತ್ತು ಮುಂದಿನ ತಲೆಮಾರಿನ ಪ್ರಜೆಗಳಿಗೆ ಜೀವನಾಶ್ರಯಕ್ಕಾಗಿ, ಬ್ರಾಹ್ಮಣರಿಗೆ ಗೌರವಪೂರ್ವಕವಾಗಿ, ಒಂದು ಕೆರೆ ಮತ್ತು ಊರನ್ನು ಕಟ್ಟಿದ ಮಹಾದಾನಿಗಳಾದ ಪೋಚೆನಾಯ್ಕನ ಮಕ್ಕಳು ಹಿರಿಯ ಚೀಲೇನಾಯ್ಕ ಮತ್ತು ಚಿಕ್ಕಚೀಲೆ ನಾಯಕ ಎಂಬ ಮಹಾದಾನಿಗಳನ್ನು ಗೌರವಪೂರ್ವಕವಾಗಿ ನೆನೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಇದನ್ನು ಮುಂದಿನ ಪೀಳಿಗೆಯವರಿಗೆ ತಿಳಿಸಲು, ನಾವುಗಳು ಹೆಮ್ಮೆಪಡಲು ಸಂರಕ್ಷಿಸಬೇಕು’ ಎಂದು ನುಡಿದರು.