ನಿತ್ಯ ಬೆಳಿಗ್ಗೆ ಗ್ರಾಮಗಳಲ್ಲಿ ಕೂಲಿಕಾರ್ಮಿಕರನ್ನು ಕರೆದೊಯ್ಯಲು ಆಟೊಗಳು ಬಂದು ನಿಲ್ಲುತ್ತವೆ. ಆದಾಗ್ಯೂ ಕೃಷಿ ಕಾರ್ಮಿಕರು ಸಿಗುವುದು ದುಸ್ತರವಾಗಿದೆ. ಕೆಲ ತಿಂಗಳುಗಳ ಹಿಂದೆ ಒಬ್ಬರನ್ನು ಕರೆದರೆ ಮೂರು, ನಾಲ್ಕು ಜನರು ಕೂಲಿಗೆ ತೆರಳಲು ಸಿದ್ಧರಾಗುತ್ತಿದ್ದರು. ಆದರೆ ಈಗ ಎಲ್ಲರೂ ಅವರಿಗಿರುವ ಚಿಕ್ಕ ಪ್ರಮಾಣದ ಜಮೀನನ್ನೆ ಹಸನು ಮಾಡುವಲ್ಲಿ ಆಸಕ್ತರಾಗಿದ್ದಾರೆ.