<p><strong>ಚಿಂತಾಮಣಿ: </strong>ಲಾಕ್ಡೌನ್ ಕಾರಣ 5 ತಿಂಗಳಿಂದ ಮುಚ್ಚಿದ್ದ ದೇವಾಲಯಗಳಿಗೆ ಭಕ್ತರು ಭೇಟಿ ನೀಡಲು ಆರಂಭಿಸಿದ್ದಾರೆ.</p>.<p>ತಾಲ್ಲೂಕಿನ ಕೈವಾರ ಕ್ಷೇತ್ರದಲ್ಲಿ ಭಕ್ತರ ಕಲರವ ಇರುತ್ತಿತ್ತು. ಲಾಕ್ಡೌನ್ನಿಂದ ಕಳಾಹೀನವಾಗಿದ್ದ ದೇವಾಲಯಗಳ ನಗರಿ ನಿಧಾನವಾಗಿ ಸಹಜ ಸ್ಥಿತಿಗೆ ತಲುಪುತ್ತಿದೆ. ಗ್ರಾಮದ ಯೋಗಿನಾರೇಯಣ ಮಠ, ಅಮರ ನಾರೇಯಣಸ್ವಾಮಿ ದೇವಾಲಯ, ಭೀಮಲಿಂಗೇಶ್ವರಸ್ವಾಮಿ ದೇವಾಲಯ, ಯೋಗಿನಾರೇಯಣ ಗುಹೆಗೆ ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ.</p>.<p>ಕೋವಿಡ್- 19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಎಲ್ಲ ಕೈಂಕರ್ಯಗಳು ಮೊದಲಿನಂತೆ ನಡೆಯುತ್ತಿವೆ. ಎಲ್ಲ ದೇವಾಲಯಗಳಲ್ಲಿ ಭಕ್ತರ ಕಲರವ ಹೆಚ್ಚುತ್ತಿದೆ.</p>.<p>ದೇವಾಲಯಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಜರ್ ಮಾಡಲಾಗುತ್ತಿದೆ. ಮುಖಗವಸು ಧರಿಸಿರುವ ಭಕ್ತರು ದರ್ಶನಕ್ಕೆ ಸರತಿ ಸಾಲಿನಲ್ಲಿ ಬರುವ ವ್ಯವಸ್ಥೆ ಮಾಡಲಾಗಿದೆ.</p>.<p>ಯೋಗಿನಾರೇಯಣ ಮಠದಲ್ಲಿ ಎಲ್ಲ ಸೇವಾ ಕೈಂಕರ್ಯಗಳು ಹಿಂದಿನಂತೆ ನಡೆಯುತ್ತಿವೆ. ಮಧ್ಯಾಹ್ನ ಮತ್ತು ರಾತ್ರಿ ಅನ್ನದಾನ ವ್ಯವಸ್ಥೆ ಇದೆ. ಭಕ್ತರ ವಿಶ್ರಾಂತಿಗೆ ಕೊಠಡಿ ವ್ಯವಸ್ಥೆ ಇದೆ. ಭಕ್ತರು ಭಜನೆ, ಜಪ ಮಾಡಲು ಅವಕಾಶ ನೀಡಲಾಗಿದೆ.</p>.<p>ಅಮರನಾರೇಯಣ ಸ್ವಾಮಿ ದೇವಾಲಯ, ಭೀಮಲಿಂಗೇಶ್ವರಸ್ವಾಮಿ ದೇಗುಲಕ್ಕೂ ಭಕ್ತರು ಬರುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ದಟ್ಟಣೆ ಕಡಿಮೆ ಇರುತ್ತದೆ. ವಾರಾಂತ್ಯದಲ್ಲಿ(ಶನಿವಾರ, ಭಾನುವಾರ) ಭಕ್ತರ ಭೇಟಿ<br />ಹೆಚ್ಚಿರುತ್ತದೆ.</p>.<p>ಮುಖಗವಸು ಧರಿಸಿರಬೇಕು. ಗುಂಪಾಗಿ ಹೋಗಬಾರದು, ಕೈ ಕುಲಕಬಾರದು. ಅಂತರ ಕಾಪಾಡಿಕೊಳ್ಳಬೇಕು. ವಯಸ್ಸಾದ ಹಿರಿಯರು ಮತ್ತು ಮಕ್ಕಳಿಗೆ ಪ್ರವೇಶವಿಲ್ಲ ಎನ್ನುವ ಸೂಚನಾ ಫಲಕ ದೇಗುಲಗಳ ದ್ವಾರದ ಬಳಿ ಅಂಟಿಸಲಾಗಿದೆ.</p>.<p>ದೇಗುಲ ತೆರೆಯಲಾಗಿದ್ದರೂ ಬೆರಳೆಣಿಕೆಯಷ್ಟು ಮಂದಿ ಬರುತ್ತಿದ್ದಾರೆ. ಜನರಿಗೆ ಸೋಂಕಿನ ಭಯ, ಅಂಜಿಕೆ ಕಡಿಮೆಯಾಗಿಲ್ಲ. ದೇವರು, ಧಾರ್ಮಿಕ ಆಚರಣೆಗಿಂತ ಆರೋಗ್ಯ ಮುಖ್ಯ. ಸೋಂಕಿನ ಸಂಖ್ಯೆ ಕಡಿಮೆಯಾದರೆ ಜನರು ದೇವಸ್ಥಾನಕ್ಕೆ ಬರುತ್ತಾರೆ ಎಂದು ಹಿರಿಯ ಪ್ರವಚನಕಾರ ತಳಗವಾರ ಆನಂದ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ: </strong>ಲಾಕ್ಡೌನ್ ಕಾರಣ 5 ತಿಂಗಳಿಂದ ಮುಚ್ಚಿದ್ದ ದೇವಾಲಯಗಳಿಗೆ ಭಕ್ತರು ಭೇಟಿ ನೀಡಲು ಆರಂಭಿಸಿದ್ದಾರೆ.</p>.<p>ತಾಲ್ಲೂಕಿನ ಕೈವಾರ ಕ್ಷೇತ್ರದಲ್ಲಿ ಭಕ್ತರ ಕಲರವ ಇರುತ್ತಿತ್ತು. ಲಾಕ್ಡೌನ್ನಿಂದ ಕಳಾಹೀನವಾಗಿದ್ದ ದೇವಾಲಯಗಳ ನಗರಿ ನಿಧಾನವಾಗಿ ಸಹಜ ಸ್ಥಿತಿಗೆ ತಲುಪುತ್ತಿದೆ. ಗ್ರಾಮದ ಯೋಗಿನಾರೇಯಣ ಮಠ, ಅಮರ ನಾರೇಯಣಸ್ವಾಮಿ ದೇವಾಲಯ, ಭೀಮಲಿಂಗೇಶ್ವರಸ್ವಾಮಿ ದೇವಾಲಯ, ಯೋಗಿನಾರೇಯಣ ಗುಹೆಗೆ ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ.</p>.<p>ಕೋವಿಡ್- 19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಎಲ್ಲ ಕೈಂಕರ್ಯಗಳು ಮೊದಲಿನಂತೆ ನಡೆಯುತ್ತಿವೆ. ಎಲ್ಲ ದೇವಾಲಯಗಳಲ್ಲಿ ಭಕ್ತರ ಕಲರವ ಹೆಚ್ಚುತ್ತಿದೆ.</p>.<p>ದೇವಾಲಯಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಜರ್ ಮಾಡಲಾಗುತ್ತಿದೆ. ಮುಖಗವಸು ಧರಿಸಿರುವ ಭಕ್ತರು ದರ್ಶನಕ್ಕೆ ಸರತಿ ಸಾಲಿನಲ್ಲಿ ಬರುವ ವ್ಯವಸ್ಥೆ ಮಾಡಲಾಗಿದೆ.</p>.<p>ಯೋಗಿನಾರೇಯಣ ಮಠದಲ್ಲಿ ಎಲ್ಲ ಸೇವಾ ಕೈಂಕರ್ಯಗಳು ಹಿಂದಿನಂತೆ ನಡೆಯುತ್ತಿವೆ. ಮಧ್ಯಾಹ್ನ ಮತ್ತು ರಾತ್ರಿ ಅನ್ನದಾನ ವ್ಯವಸ್ಥೆ ಇದೆ. ಭಕ್ತರ ವಿಶ್ರಾಂತಿಗೆ ಕೊಠಡಿ ವ್ಯವಸ್ಥೆ ಇದೆ. ಭಕ್ತರು ಭಜನೆ, ಜಪ ಮಾಡಲು ಅವಕಾಶ ನೀಡಲಾಗಿದೆ.</p>.<p>ಅಮರನಾರೇಯಣ ಸ್ವಾಮಿ ದೇವಾಲಯ, ಭೀಮಲಿಂಗೇಶ್ವರಸ್ವಾಮಿ ದೇಗುಲಕ್ಕೂ ಭಕ್ತರು ಬರುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ದಟ್ಟಣೆ ಕಡಿಮೆ ಇರುತ್ತದೆ. ವಾರಾಂತ್ಯದಲ್ಲಿ(ಶನಿವಾರ, ಭಾನುವಾರ) ಭಕ್ತರ ಭೇಟಿ<br />ಹೆಚ್ಚಿರುತ್ತದೆ.</p>.<p>ಮುಖಗವಸು ಧರಿಸಿರಬೇಕು. ಗುಂಪಾಗಿ ಹೋಗಬಾರದು, ಕೈ ಕುಲಕಬಾರದು. ಅಂತರ ಕಾಪಾಡಿಕೊಳ್ಳಬೇಕು. ವಯಸ್ಸಾದ ಹಿರಿಯರು ಮತ್ತು ಮಕ್ಕಳಿಗೆ ಪ್ರವೇಶವಿಲ್ಲ ಎನ್ನುವ ಸೂಚನಾ ಫಲಕ ದೇಗುಲಗಳ ದ್ವಾರದ ಬಳಿ ಅಂಟಿಸಲಾಗಿದೆ.</p>.<p>ದೇಗುಲ ತೆರೆಯಲಾಗಿದ್ದರೂ ಬೆರಳೆಣಿಕೆಯಷ್ಟು ಮಂದಿ ಬರುತ್ತಿದ್ದಾರೆ. ಜನರಿಗೆ ಸೋಂಕಿನ ಭಯ, ಅಂಜಿಕೆ ಕಡಿಮೆಯಾಗಿಲ್ಲ. ದೇವರು, ಧಾರ್ಮಿಕ ಆಚರಣೆಗಿಂತ ಆರೋಗ್ಯ ಮುಖ್ಯ. ಸೋಂಕಿನ ಸಂಖ್ಯೆ ಕಡಿಮೆಯಾದರೆ ಜನರು ದೇವಸ್ಥಾನಕ್ಕೆ ಬರುತ್ತಾರೆ ಎಂದು ಹಿರಿಯ ಪ್ರವಚನಕಾರ ತಳಗವಾರ ಆನಂದ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>