ಚಿಂತಾಮಣಿ ತಾಲ್ಲೂಕಿನ ಶಾಲೆಯೊಂದರಲ್ಲಿ ಬಿಸಿಯೂಟ ಸವಿಯುತ್ತಿರುವ ವಿದ್ಯಾರ್ಥಿಗಳು
ಅನುದಾನ ಹೆಚ್ಚಿಸಬೇಕು
ತರಕಾರಿ ಮತ್ತು ಸಾಂಬಾರು ಪದಾರ್ಥಗಳ ಬೆಲೆ ದಿನೇ ದಿನೇ ಏರಿಕೆ ಆಗುತ್ತಲೇ ಇದೆ. ಸರ್ಕಾರ ನೀಡುತ್ತಿರುವ ಅನುದಾನಕ್ಕೂ ಮತ್ತು ಆಗುವ ಖರ್ಚಿಗೂ ಅಜಗಜಾಂತರ ವ್ಯತ್ಯಾಸವಿದೆ. ಎಷ್ಟು ದಿನ ಶಿಕ್ಷಕರು ಕೈಯಿಂದ ಹಣ ಖರ್ಚು ಮಾಡಲು ಸಾಧ್ಯ? ಸರ್ಕಾರ ತಕ್ಷಣ ಬೆಲೆ ಏರಿಕೆಗೆ ತಕ್ಕಂತೆ ಅನುದಾನ ಹೆಚ್ಚಿಸಬೇಕು. ಶಂಕರಪ್ಪ. ಎಸ್.ಡಿ.ಎಂ.ಸಿ ಅಧ್ಯಕ್ಷ ದರ ಏರಿಳಿತ ಸಾಮಾನ್ಯ ಮೊಟ್ಟೆ ಮತ್ತು ತರಕಾರಿ ದರ ಕಡಿಮೆ ಇದ್ದಾಗ ಸರ್ಕಾರ ಅನುದಾನ ನಿಗದಿ ಮಾಡಿತ್ತು. ದರ ಏರಿಳಿಕೆ ಸಾಮಾನ್ಯ ಏರಿಕೆ ಆಗಿರುವುದು ಅಧಿಕಾರಿಗಳ ಗಮನಕ್ಕೂ ಬಂದಿದೆ. ಇಳಿಕೆ ಆಗದಿದ್ದರೆ ಅನುದಾನ ಹೆಚ್ಚಿಸುವ ಚಿಂತನೆಯನ್ನು ಸರ್ಕಾರ ಮಾಡಬಹುದು. ಸುರೇಶ್ ಸಹಾಯಕ ನಿರ್ದೇಶಕ. ಅಕ್ಷರದಾಸೋಹ ಯೋಜನೆ