<p><strong>ಗುಡಿಬಂಡೆ:</strong> ತಾಲ್ಲೂಕಿನ ವರ್ಲಕೊಂಡ ಬೆಟ್ಟದಲ್ಲಿ ಮಂಗಳವಾರ ಚಿರತೆಯೊಂದು ಕಾಣಿಸಿಕೊಂಡಿದೆ.</p>.<p>ಕಳೆದ ಎರಡುಮೂರು ದಿನಗಳಿಂದ ಬೆಟ್ಟದಲ್ಲಿ ಕೋತಿಗಳ ಕಿರುಚಾಟ ಕೇಳಿಬರುತ್ತಿತ್ತು. ವರ್ಲಕೊಂಡ ಗ್ರಾಮದ ರಾಜು ಅವರು ಮಂಗಳವಾರ ದ್ರೋನ್ ಕ್ಯಾಮೆರಾ ಬಳಸಿ ಬೆಟ್ಟವನ್ನು ಸರ್ವೆ ಮಾಡಿಸಿದರು. ಈ ಸಮಯದಲ್ಲಿ ಚಿರತೆ ಕಲ್ಲಿನ ಬಂಡೆಯ ಮೇಲೆ ಕಾಣಿಸಿತು. ಚಿರತೆ ಕ್ಯಾಮೆರಾ ಕಡೆ ತಿರುಗಿ ಮತ್ತೆ ಗುಹೆಯೊಳಗೆ ಹೋದ ದೃಶ್ಯವೂ ಸೆರೆಯಾಗಿದೆ.</p>.<p>ಚಿರತೆ ಇರುವುದು ಗೊತ್ತಾಗುತ್ತಿದ್ದಂತೆ ಬೆಟ್ಟದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ರಾಜು ಅವರು ಚಿರತೆ ಇರುವ ವಿಡಿಯೊವನ್ನು ವಲಯ ಅರಣ್ಯಾಧಿಕಾರಿ ಮತ್ತು ಪೆರೇಸಂದ್ರ ಪೊಲೀಸರಿಗೆ ಕಳುಹಿಸಿದ್ದಾರೆ.</p>.<p>2021 ಮತ್ತು 2022ರಲ್ಲಿ ಇದೇ ಪ್ರದೇಶದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿತ್ತು. 2022ರಲ್ಲಿ ಮೇಡಿಮಾಕಲಹಳ್ಳಿ ಲಕ್ಷ್ಮಿನಾರಾಯಣರೆಡ್ಡಿ ಅವರ ಕೋಳಿ ಪಾರಂನ ತೋಟದ ಮನೆಯ ನಾಯಿಯ ಮೇಲೆ ದಾಳಿ ಮಾಡಿತ್ತು ಹಾಗೂ ಕುರಿ, ಜಾನುವಾರುಗಳ ಮೇಲೆ ಸಹ ದಾಳಿ ಮಾಡಿತ್ತು.</p>.<p>ಆ ಸಂದರ್ಭದಲ್ಲಿ ಅರಣ್ಯ ಇಲಾಖೆ ಬೋನು ಇಟ್ಟು ಚಿರತೆ ಸೆರೆಹಿಡಿಯಲು ಪ್ರಯತ್ನ ಮಾಡಿತ್ತು. ಆದರೆ ಚಿರತೆ ಸೆರೆಯಾಗಲಿಲ್ಲ. ಬೇರೆ ಕಡೆಗೆ ಹೋಗಿರಬಹುದು ಎಂದು ಅಧಿಕಾರಿಗಳು ಸುಮ್ಮನಾಗಿದ್ದರು. ಆದರೆ ಈಗ ಮತ್ತೆ ಮೂರು ಚಿರತೆಗಳು ಬೆಟ್ಟದಲ್ಲಿ ಇವೆ ಎಂದು ವರ್ಲಕೊಂಡ ರಾಜು ತಿಳಿಸಿದ್ದಾರೆ.</p>.<p>ಸ್ಥಳೀಯರು ಅರಣ್ಯ ಇಲಾಖೆಯ ತಕ್ಷಣ ಬೋನು ಇಟ್ಟು ಕ್ರಮಕ್ಕಾಗಿ ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಡಿಬಂಡೆ:</strong> ತಾಲ್ಲೂಕಿನ ವರ್ಲಕೊಂಡ ಬೆಟ್ಟದಲ್ಲಿ ಮಂಗಳವಾರ ಚಿರತೆಯೊಂದು ಕಾಣಿಸಿಕೊಂಡಿದೆ.</p>.<p>ಕಳೆದ ಎರಡುಮೂರು ದಿನಗಳಿಂದ ಬೆಟ್ಟದಲ್ಲಿ ಕೋತಿಗಳ ಕಿರುಚಾಟ ಕೇಳಿಬರುತ್ತಿತ್ತು. ವರ್ಲಕೊಂಡ ಗ್ರಾಮದ ರಾಜು ಅವರು ಮಂಗಳವಾರ ದ್ರೋನ್ ಕ್ಯಾಮೆರಾ ಬಳಸಿ ಬೆಟ್ಟವನ್ನು ಸರ್ವೆ ಮಾಡಿಸಿದರು. ಈ ಸಮಯದಲ್ಲಿ ಚಿರತೆ ಕಲ್ಲಿನ ಬಂಡೆಯ ಮೇಲೆ ಕಾಣಿಸಿತು. ಚಿರತೆ ಕ್ಯಾಮೆರಾ ಕಡೆ ತಿರುಗಿ ಮತ್ತೆ ಗುಹೆಯೊಳಗೆ ಹೋದ ದೃಶ್ಯವೂ ಸೆರೆಯಾಗಿದೆ.</p>.<p>ಚಿರತೆ ಇರುವುದು ಗೊತ್ತಾಗುತ್ತಿದ್ದಂತೆ ಬೆಟ್ಟದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ರಾಜು ಅವರು ಚಿರತೆ ಇರುವ ವಿಡಿಯೊವನ್ನು ವಲಯ ಅರಣ್ಯಾಧಿಕಾರಿ ಮತ್ತು ಪೆರೇಸಂದ್ರ ಪೊಲೀಸರಿಗೆ ಕಳುಹಿಸಿದ್ದಾರೆ.</p>.<p>2021 ಮತ್ತು 2022ರಲ್ಲಿ ಇದೇ ಪ್ರದೇಶದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿತ್ತು. 2022ರಲ್ಲಿ ಮೇಡಿಮಾಕಲಹಳ್ಳಿ ಲಕ್ಷ್ಮಿನಾರಾಯಣರೆಡ್ಡಿ ಅವರ ಕೋಳಿ ಪಾರಂನ ತೋಟದ ಮನೆಯ ನಾಯಿಯ ಮೇಲೆ ದಾಳಿ ಮಾಡಿತ್ತು ಹಾಗೂ ಕುರಿ, ಜಾನುವಾರುಗಳ ಮೇಲೆ ಸಹ ದಾಳಿ ಮಾಡಿತ್ತು.</p>.<p>ಆ ಸಂದರ್ಭದಲ್ಲಿ ಅರಣ್ಯ ಇಲಾಖೆ ಬೋನು ಇಟ್ಟು ಚಿರತೆ ಸೆರೆಹಿಡಿಯಲು ಪ್ರಯತ್ನ ಮಾಡಿತ್ತು. ಆದರೆ ಚಿರತೆ ಸೆರೆಯಾಗಲಿಲ್ಲ. ಬೇರೆ ಕಡೆಗೆ ಹೋಗಿರಬಹುದು ಎಂದು ಅಧಿಕಾರಿಗಳು ಸುಮ್ಮನಾಗಿದ್ದರು. ಆದರೆ ಈಗ ಮತ್ತೆ ಮೂರು ಚಿರತೆಗಳು ಬೆಟ್ಟದಲ್ಲಿ ಇವೆ ಎಂದು ವರ್ಲಕೊಂಡ ರಾಜು ತಿಳಿಸಿದ್ದಾರೆ.</p>.<p>ಸ್ಥಳೀಯರು ಅರಣ್ಯ ಇಲಾಖೆಯ ತಕ್ಷಣ ಬೋನು ಇಟ್ಟು ಕ್ರಮಕ್ಕಾಗಿ ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>