<p><strong>ಚಿಕ್ಕಬಳ್ಳಾಪುರ:</strong> ರಾಜ್ಯದಲ್ಲಿಯೇ ಪ್ರಮುಖವಾಗಿ ಹೂ ಬೆಳೆಯುವ ಜಿಲ್ಲೆಗಳನ್ನು ಪಟ್ಟಿ ಮಾಡಿದರೆ ಚಿಕ್ಕಬಳ್ಳಾಪುರವೂ ಪ್ರಮುಖವಾಗಿ ಕಾಣುತ್ತದೆ. ಇಲ್ಲಿನ ಬಹುತೇಕ ರೈತರು ಉಪಕಸುಬಾಗಿ, ಆರ್ಥಿಕ ಉನ್ನತಿಗಾಗಿ ಹೂ ಬೇಸಾಯ ಅವಲಂಬಿಸಿದ್ದಾರೆ. ಕೆಲವರು ರೈತರು ಹೂವನ್ನೇ ಪ್ರಮುಖವಾಗಿ ಬೆಳೆಯುವರು.</p>.<p>10, 20 ಗುಂಟೆ ಇಲ್ಲವೆ ಎಕರೆಗಳ ಲೆಕ್ಕದಲ್ಲಿ ಹೂ ಬೆಳೆದು ತಮ್ಮ ಬದುಕು ಸಾಗಿಸುತ್ತಿದ್ದಾರೆ. ಸೇವಂತಿಗೆ, ಮೇರಿಗೋಲ್ಡ್, ಸುಗಂಧರಾಜ, ಕನಕಾಂಬರ, ಗುಲಾಬಿ, ಚೆಂಡು ಹೂ ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಈಗ ಕೋವಿಡ್ ಬಿಸಿ ತೀವ್ರವಾದಂತೆ ಬೆಲೆ ದಿಢೀರ್ ಕುಸಿದಿದೆ. ಬೆಳೆಗಾರರು ಕಂಗಾಲಾಗಿದ್ದಾರೆ.</p>.<p>ಏಪ್ರಿಲ್, ಮೇ ನಲ್ಲಿ ಪ್ರಮುಖವಾಗಿ ಮದುವೆ ಸೇರಿದಂತೆ ವಿವಿಧ ಶುಭ ಸಮಾರಂಭಗಳು ನಡೆಯುತ್ತವೆ. ಈ ವೇಳೆ ಹೂ ಗೆ ಬೇಡಿಕೆ ಹೆಚ್ಚು. ಈಗ ಶುಭ ಸಮಾರಂಭಗಳ ಮೇಲೆ ಕಠಿಣ ನಿರ್ಬಂಧಗಳಿವೆ.<br />ಇದು ಪ್ರಮುಖವಾಗಿ ಬೆಲೆ ಕುಸಿತಕ್ಕೆ ಕಾರಣವಾಗಿದೆ.</p>.<p>‘ಕಳೆದ ವರ್ಷ ಲಾಕ್ಡೌನ್ನಲ್ಲಿ ಬೆಳೆಗಾರರಿಗೆ ತೀವ್ರ ಸಮಸ್ಯೆ ಆಯಿತು. ವಿದೇಶಗಳಿಗೆ ಗುಲಾಬಿ ರಫ್ತು ಆಗಿರಲಿಲ್ಲ. ಒಂದು ಸಾವಿರ ಹೆಕ್ಟೇರ್ನಲ್ಲಿ ಗುಲಾಬಿ, 500 ಹೆಕ್ಟೇರ್ನಲ್ಲಿ ಸೇವಂತಿ, 400 ಎಕರೆಯಲ್ಲಿ ಮೇರಿಗೋಲ್ಡ್ ಇದೆ’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಬಿ.ಕೃಷ್ಣಮೂರ್ತಿ ತಿಳಿಸುವರು.</p>.<p>‘ಕಳೆದ ವರ್ಷ ಲಾಕ್ಡೌನ್ನಿಂದ ಇಟ್ಟಿದ್ದ ಬೆಳೆಯನ್ನು ಯಾರೂ ಕೇಳದ ಪರಿಸ್ಥಿತಿ ಎದುರಾಗಿತ್ತು. ಈ ವರ್ಷವೂ ಹೆಚ್ಚಿನ<br />ಲಾಭವೇನೂ ಆಗಿರಲಿಲ್ಲ. ಈಗ ಕೊರೊನಾ ಕಾರಣದಿಂದ ಮತ್ತೆ ಕಷ್ಟಕ್ಕೆ ಸಿಲುಕಿದ್ದೇವೆ’ ಎನ್ನುವರು ಚಿಕ್ಕಬಳ್ಳಾಪುರ ರೈತ ನಾರಾಯಣಸ್ವಾಮಿ.</p>.<p>ಬೆಲೆ ಇಲ್ಲದ ಕಾರಣ ಹೂಗಳನ್ನು ರಸ್ತೆ ಬದಿ, ಮಾರುಕಟ್ಟೆಯಲ್ಲಿಯೇ ರೈತರು ಸುರಿಯುತ್ತಿದ್ದಾರೆ. ಶೀಥಲೀಕರಣ ಘಟಕದಲ್ಲಿ ಗುಲಾಬಿಯನ್ನು ಕೆಲವು ಕಾಲ ರಕ್ಷಿಸಿಡಬಹುದು. ಆದರೆ ಎಲ್ಲ ಹೂಗಳನ್ನು ಹೀಗೆ ರಕ್ಷಿಸಿಡಲು ಸಾಧ್ಯವಿಲ್ಲ. ಹೀಗೆ ಕೊರೊನಾ ಎರಡನೇ ಅಲೆ ಹೂ ಬೆಳೆಗಾರರನ್ನು ಕಂಗಾಲಾಗಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ರಾಜ್ಯದಲ್ಲಿಯೇ ಪ್ರಮುಖವಾಗಿ ಹೂ ಬೆಳೆಯುವ ಜಿಲ್ಲೆಗಳನ್ನು ಪಟ್ಟಿ ಮಾಡಿದರೆ ಚಿಕ್ಕಬಳ್ಳಾಪುರವೂ ಪ್ರಮುಖವಾಗಿ ಕಾಣುತ್ತದೆ. ಇಲ್ಲಿನ ಬಹುತೇಕ ರೈತರು ಉಪಕಸುಬಾಗಿ, ಆರ್ಥಿಕ ಉನ್ನತಿಗಾಗಿ ಹೂ ಬೇಸಾಯ ಅವಲಂಬಿಸಿದ್ದಾರೆ. ಕೆಲವರು ರೈತರು ಹೂವನ್ನೇ ಪ್ರಮುಖವಾಗಿ ಬೆಳೆಯುವರು.</p>.<p>10, 20 ಗುಂಟೆ ಇಲ್ಲವೆ ಎಕರೆಗಳ ಲೆಕ್ಕದಲ್ಲಿ ಹೂ ಬೆಳೆದು ತಮ್ಮ ಬದುಕು ಸಾಗಿಸುತ್ತಿದ್ದಾರೆ. ಸೇವಂತಿಗೆ, ಮೇರಿಗೋಲ್ಡ್, ಸುಗಂಧರಾಜ, ಕನಕಾಂಬರ, ಗುಲಾಬಿ, ಚೆಂಡು ಹೂ ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಈಗ ಕೋವಿಡ್ ಬಿಸಿ ತೀವ್ರವಾದಂತೆ ಬೆಲೆ ದಿಢೀರ್ ಕುಸಿದಿದೆ. ಬೆಳೆಗಾರರು ಕಂಗಾಲಾಗಿದ್ದಾರೆ.</p>.<p>ಏಪ್ರಿಲ್, ಮೇ ನಲ್ಲಿ ಪ್ರಮುಖವಾಗಿ ಮದುವೆ ಸೇರಿದಂತೆ ವಿವಿಧ ಶುಭ ಸಮಾರಂಭಗಳು ನಡೆಯುತ್ತವೆ. ಈ ವೇಳೆ ಹೂ ಗೆ ಬೇಡಿಕೆ ಹೆಚ್ಚು. ಈಗ ಶುಭ ಸಮಾರಂಭಗಳ ಮೇಲೆ ಕಠಿಣ ನಿರ್ಬಂಧಗಳಿವೆ.<br />ಇದು ಪ್ರಮುಖವಾಗಿ ಬೆಲೆ ಕುಸಿತಕ್ಕೆ ಕಾರಣವಾಗಿದೆ.</p>.<p>‘ಕಳೆದ ವರ್ಷ ಲಾಕ್ಡೌನ್ನಲ್ಲಿ ಬೆಳೆಗಾರರಿಗೆ ತೀವ್ರ ಸಮಸ್ಯೆ ಆಯಿತು. ವಿದೇಶಗಳಿಗೆ ಗುಲಾಬಿ ರಫ್ತು ಆಗಿರಲಿಲ್ಲ. ಒಂದು ಸಾವಿರ ಹೆಕ್ಟೇರ್ನಲ್ಲಿ ಗುಲಾಬಿ, 500 ಹೆಕ್ಟೇರ್ನಲ್ಲಿ ಸೇವಂತಿ, 400 ಎಕರೆಯಲ್ಲಿ ಮೇರಿಗೋಲ್ಡ್ ಇದೆ’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಬಿ.ಕೃಷ್ಣಮೂರ್ತಿ ತಿಳಿಸುವರು.</p>.<p>‘ಕಳೆದ ವರ್ಷ ಲಾಕ್ಡೌನ್ನಿಂದ ಇಟ್ಟಿದ್ದ ಬೆಳೆಯನ್ನು ಯಾರೂ ಕೇಳದ ಪರಿಸ್ಥಿತಿ ಎದುರಾಗಿತ್ತು. ಈ ವರ್ಷವೂ ಹೆಚ್ಚಿನ<br />ಲಾಭವೇನೂ ಆಗಿರಲಿಲ್ಲ. ಈಗ ಕೊರೊನಾ ಕಾರಣದಿಂದ ಮತ್ತೆ ಕಷ್ಟಕ್ಕೆ ಸಿಲುಕಿದ್ದೇವೆ’ ಎನ್ನುವರು ಚಿಕ್ಕಬಳ್ಳಾಪುರ ರೈತ ನಾರಾಯಣಸ್ವಾಮಿ.</p>.<p>ಬೆಲೆ ಇಲ್ಲದ ಕಾರಣ ಹೂಗಳನ್ನು ರಸ್ತೆ ಬದಿ, ಮಾರುಕಟ್ಟೆಯಲ್ಲಿಯೇ ರೈತರು ಸುರಿಯುತ್ತಿದ್ದಾರೆ. ಶೀಥಲೀಕರಣ ಘಟಕದಲ್ಲಿ ಗುಲಾಬಿಯನ್ನು ಕೆಲವು ಕಾಲ ರಕ್ಷಿಸಿಡಬಹುದು. ಆದರೆ ಎಲ್ಲ ಹೂಗಳನ್ನು ಹೀಗೆ ರಕ್ಷಿಸಿಡಲು ಸಾಧ್ಯವಿಲ್ಲ. ಹೀಗೆ ಕೊರೊನಾ ಎರಡನೇ ಅಲೆ ಹೂ ಬೆಳೆಗಾರರನ್ನು ಕಂಗಾಲಾಗಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>