<p><strong>ಚಿಂತಾಮಣಿ</strong>: ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಗಿ ತಳಿ ಎಂ.ಆರ್. 6 ಬೀಜೋತ್ಪಾದನೆ ಕುರಿತು ಕ್ಷೇತ್ರೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು.</p>.<p>ಕೇಂದ್ರದ ಹಿರಿಯ ವಿಜ್ಞಾನಿ ಎಂ.ಪಾಪಿರೆಡ್ಡಿ ಮಾತನಾಡಿ, ವಿವಿಧ ರಾಗಿ ತಳಿಗಳ ಮಾಹಿತಿ ಹಂಚಿಕೊಂಡು ಬೀಜೋತ್ಪಾದನೆಯಲ್ಲಿ ಕೈಗೊಳ್ಳಬೇಕಾದ ಪ್ರಮುಖ ವಿಷಯಗಳ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿದರು. ಆಸಕ್ತಿವುಳ್ಳಂತಹ ರೈತರು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಬೀಜೋತ್ಪಾದನೆ ಮಾಡಿ ಉತ್ತಮ ಲಾಭಗಳಿಸಬಹುದು ಎಂದು ತಿಳಿಸಿದರು.</p>.<p>ಕೃಷಿ ವಿಜ್ಞಾನ ಕೇಂದ್ರದ ಕ್ಷೇತ್ರ ವ್ಯವಸ್ಥಾಪಕಿ ಎಸ್.ಸಾಕಮ್ಮ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರಗಳ ಚಟುವಟಿಕೆಗಳಲ್ಲಿ ಬೀಜೋತ್ಪಾದನೆ ಅವಶ್ಯವಾಗಿದೆ. ರಾಗಿ ಎಂ.ಆರ್. 6 ತಳಿಯ ಬೀಜೋತ್ಪಾದನೆ ಕೈಗೊಂಡಿರುತ್ತೇವೆ. ಮುಂಗಾರಿನಲ್ಲಿ ಬೆಳೆಯಲು ಸೂಕ್ತವಾಗಿದ್ದು ಅಧಿಕ ಧಾನ್ಯ ಹಾಗೂ ಮೇವಿನ ಇಳುವರಿ ನೀಡುತ್ತದೆ ಎಂದರು.</p>.<p>ಒಂದು ಎಕರೆಗೆ ನೀರಾವರಿಯಲ್ಲಿ 16-18 ಕ್ವಿಂಟಲ್ ರಾಗಿ, 3.5- 4 ಟನ್ ಮೇವು. ಖುಷ್ಕಿಯಲ್ಲಿ 9-12 ಕ್ವಿಂಟಲ್ ರಾಗಿ, 2-3 ಟನ್ ಮೇವಿನ ಇಳುವರಿ ಸಿಗುತ್ತದೆ. ತೆನೆಗಳು ಉದ್ದವಾದ ಇಣಕು ಹೊಂದಿದ್ದು, ಇಣಕುಗಳು ಒಳಭಾಗಕ್ಕೆ ಬಾಗಿರುತ್ತವೆ. ರಾಗಿಯಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಇದ್ದು, ರಾಗಿಯು ಮಧುಮೇಹ ರೋಗಿಗಳಿಗೆ ಉತ್ತಮ ಆಹಾರವಾಗಿದೆ ಎಂದು ತಿಳಿಸಿದರು.</p>.<p>ಕೇಂದ್ರದ ರಾಗಿ ಬೀಜೋತ್ಪಾದನಾ ತಾಕಿಗೆ ರೈತರು ಭೇಟಿ ನೀಡಿದರು. ವಿಜ್ಞಾನಿ ಕೆ.ಸಂಧ್ಯಾ, ಆರ್.ಪ್ರವೀಣಕುಮಾರ್, ತನ್ವೀರ್ ಅಹ್ಮದ್, ರೈತ ಮಹಿಳೆಯರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ</strong>: ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಗಿ ತಳಿ ಎಂ.ಆರ್. 6 ಬೀಜೋತ್ಪಾದನೆ ಕುರಿತು ಕ್ಷೇತ್ರೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು.</p>.<p>ಕೇಂದ್ರದ ಹಿರಿಯ ವಿಜ್ಞಾನಿ ಎಂ.ಪಾಪಿರೆಡ್ಡಿ ಮಾತನಾಡಿ, ವಿವಿಧ ರಾಗಿ ತಳಿಗಳ ಮಾಹಿತಿ ಹಂಚಿಕೊಂಡು ಬೀಜೋತ್ಪಾದನೆಯಲ್ಲಿ ಕೈಗೊಳ್ಳಬೇಕಾದ ಪ್ರಮುಖ ವಿಷಯಗಳ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿದರು. ಆಸಕ್ತಿವುಳ್ಳಂತಹ ರೈತರು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಬೀಜೋತ್ಪಾದನೆ ಮಾಡಿ ಉತ್ತಮ ಲಾಭಗಳಿಸಬಹುದು ಎಂದು ತಿಳಿಸಿದರು.</p>.<p>ಕೃಷಿ ವಿಜ್ಞಾನ ಕೇಂದ್ರದ ಕ್ಷೇತ್ರ ವ್ಯವಸ್ಥಾಪಕಿ ಎಸ್.ಸಾಕಮ್ಮ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರಗಳ ಚಟುವಟಿಕೆಗಳಲ್ಲಿ ಬೀಜೋತ್ಪಾದನೆ ಅವಶ್ಯವಾಗಿದೆ. ರಾಗಿ ಎಂ.ಆರ್. 6 ತಳಿಯ ಬೀಜೋತ್ಪಾದನೆ ಕೈಗೊಂಡಿರುತ್ತೇವೆ. ಮುಂಗಾರಿನಲ್ಲಿ ಬೆಳೆಯಲು ಸೂಕ್ತವಾಗಿದ್ದು ಅಧಿಕ ಧಾನ್ಯ ಹಾಗೂ ಮೇವಿನ ಇಳುವರಿ ನೀಡುತ್ತದೆ ಎಂದರು.</p>.<p>ಒಂದು ಎಕರೆಗೆ ನೀರಾವರಿಯಲ್ಲಿ 16-18 ಕ್ವಿಂಟಲ್ ರಾಗಿ, 3.5- 4 ಟನ್ ಮೇವು. ಖುಷ್ಕಿಯಲ್ಲಿ 9-12 ಕ್ವಿಂಟಲ್ ರಾಗಿ, 2-3 ಟನ್ ಮೇವಿನ ಇಳುವರಿ ಸಿಗುತ್ತದೆ. ತೆನೆಗಳು ಉದ್ದವಾದ ಇಣಕು ಹೊಂದಿದ್ದು, ಇಣಕುಗಳು ಒಳಭಾಗಕ್ಕೆ ಬಾಗಿರುತ್ತವೆ. ರಾಗಿಯಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಇದ್ದು, ರಾಗಿಯು ಮಧುಮೇಹ ರೋಗಿಗಳಿಗೆ ಉತ್ತಮ ಆಹಾರವಾಗಿದೆ ಎಂದು ತಿಳಿಸಿದರು.</p>.<p>ಕೇಂದ್ರದ ರಾಗಿ ಬೀಜೋತ್ಪಾದನಾ ತಾಕಿಗೆ ರೈತರು ಭೇಟಿ ನೀಡಿದರು. ವಿಜ್ಞಾನಿ ಕೆ.ಸಂಧ್ಯಾ, ಆರ್.ಪ್ರವೀಣಕುಮಾರ್, ತನ್ವೀರ್ ಅಹ್ಮದ್, ರೈತ ಮಹಿಳೆಯರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>