ನೆಲಗಡಲೆ ಬಿತ್ತನೆ ಕಡಿಮೆ ಮುಂಗಾರ ಆರಂಭದಲ್ಲಿ ಮಳೆ ಕೊರತೆ ಆಗಿದ್ದರಿಂದ ತೊಗರಿ ಮತ್ತು ನೆಲಗಡಲೆ ಬಿತ್ತನೆ ಕಡಿಮೆ ಆಗಿದೆ. ರಾಗಿ ಗುರಿ ಮೀರಿ ಬಿತ್ತನೆ ಆಗಿದೆ. ಬೆಳೆಗಳು ಚೆನ್ನಾಗಿದ್ದರೂ ಕೊನೆಯವರೆಗೂ ಮಳೆ ಆಗಬೇಕಿದೆ. ಸದ್ಯಕ್ಕೆ ಯಾವುದೇ ರೋಗರುಜಿನುಗಳು ಇಲ್ಲ.
ಅಮರನಾರಾಯಣ ರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ
ರೈತರಿಗೆ ನಷ್ಟ ಪ್ರಕೃತಿಯ ಮುನಿಸಿನಿಂದ ರೈತರು ತೊಂದರೆ ಅನುಭವಿಸುತ್ತಾರೆ. ಒಳ್ಳೆಯ ಮಳೆಯಾಗಿ ಬೆಳೆ ಬೆಳೆದರೂ ಗೊಂದಲದ ಮಾರುಕಟ್ಟೆ ವ್ಯವಹಾರದಿಂದ ರೈತರು ನಷ್ಟ ಹೊಂದುತ್ತಾರೆ. ಬೆಳೆದರೂ ಕಷ್ಟ ಬೆಳೆಯದಿದ್ದರೂ ಕಷ್ಟ ಎನ್ನುವಂತಾಗಿದೆ.
ರಮಣಾರೆಡ್ಡಿ, ರೈತ
ಸಂಕಷ್ಟದ ಸೂಚನೆ ಬೆಳೆಗೆ ಅಗತ್ಯವಾದ ಉತ್ತಮವಾದ ಮಳೆ ಬಿದ್ದಿದೆ. ಆದರೆ ಇಷ್ಟಕ್ಕೆ ಸಂತೋಷಪಡುವ ಹಾಗಿಲ್ಲ. ತಾಲ್ಲೂಕಿನಲ್ಲಿ ತಡವಾಗಿ ಬಿತ್ತನೆಯಾಗಿದ್ದು ಇನ್ನೂ ಮಳೆ ಅಗತ್ಯವಿದೆ. ಆದರೆ ಕೆರೆ ಕುಂಟೆಗಳು ಭರ್ತಿಯಾಗದಿರುವುದು ಮುಂಬರುವ ಸಂಕಷ್ಟದ ಸೂಚನೆಯಾಗಿದೆ.